ನನ್ನ ಅಗತ್ಯವಿಲ್ಲದಿದ್ದಾಗ ಜೆಡಿಎಸ್ ನಲ್ಲಿ ಯಾಕಿರಬೇಕು, ಬಿಜೆಪಿ ಸೇರುತ್ತೇನೆ : ಸಂದೇಶ್ ನಾಗರಾಜ್

suddionenews
1 Min Read

ಮೈಸೂರು: ಜೆಡಿಎಸ್ ನಲ್ಲಿ ಎಂಎಲ್ಸಿಯಾಗಿರುವ ಸಂದೇಶ್ ನಾಗರಾಜ್ ಇದೀಗ ಜೆಡಿಎಸ್ ತೊರೆಯುವುದಾಗಿ ನೇರವಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ಬಿಜೆಪಿ ಸೇರುತ್ತೇನೆ ಎಂದು ಕೂಡ ತಿಳಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಜೆಡಿಎಸ್ ಬಿಟ್ಟು ಬಿಜೆಪಿ ಸೇರುತ್ತೇನೆ. ಅದಕ್ಕೆ ಕಾರಣ ಏನು ಎಂಬುದನ್ನು ನಂತರವಷ್ಟೇ ತಿಳಿಸುತ್ತೇನೆ. ಕುಮಾರಸ್ವಾಮಿ ಅವರಿಗೆ ನನ್ನ ಅಗತ್ಯವಿಲ್ಲ ಎನಿಸುತ್ತಿದೆ. ಅಗತ್ಯವಿಲ್ಲ ಎಂದಾಗ ಆ ಜಾಗದಲ್ಲಿ ನಾನು ಯಾಕೆ ಇರಬೇಕು ಎಂದು ಪ್ರಶ್ನಿಸಿದ್ದಾರೆ.

ಮೂರು ವರ್ಷದಿಂದ ನಾನು ಜೆಡಿಎಸ್ ನಾಯಕರ ಸಂಪರ್ಕದಲ್ಲಿ ಇಲ್ಲ. ಕೇವಲ ದೈಹಿಕವಾಗಿಯಷ್ಟೇ ಜೆಡಿಎಸ್ ಪಕ್ಷದಲ್ಲಿದ್ದೇನೆ. 2-3 ವರ್ಷ ಮಾನಸಿಕವಾಗಿ ಬಿಜೆಪಿಯಲ್ಲಿದ್ದೇನೆ. ಪರಿಷತ್ ಒಳಗೂ ಬಿಜೆಪಿ ಪರವೇ ಕೈ ಎತ್ತಿದ್ದೆ. ಮೈಸೂರಿನ ಬಿಜೆಪಿ ಕಚೇರಿಯಲ್ಲೇ ಬಿಜೆಪಿ ಸೇರುತ್ತೇನೆ. ನನಗೆ ಬಿಜೆಪಿಯಿಂದ ಪರಿಷತ್ ಟಿಕೆಟ್ ಸಿಗುವ ಭರವಸೆ ಇದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *