ಅಸ್ಪೃಶ್ಯತೆಯ ಅನುಭವ ಬಿಜೆಪಿಯಲ್ಲಿದ್ದಾಗ ನನಗೂ ಆಗಿತ್ತು : ಮುಖ್ಯಮಂತ್ರಿ ಚಂದ್ರು

1 Min Read

 

ಹುಬ್ಬಳ್ಳಿ: ಅಸ್ಪೃಶ್ಯತೆಯ ಬಗ್ಗೆ ಇತ್ತಿಚೆಗಷ್ಟೇ ಗೂಳಿಹಟ್ಟಿ ಶೇಖರ್ ಮಾತನಾಡಿದ್ದರು. ಜಾತಿ ರಾಜಕಾರಣಕ್ಕೆ ನಾಗ್ಪುರದ ಹೆಡಗೇವಾರ್ ಸ್ಮಾರಕದೊಳಗೆ ನನ್ನನ್ನು ಬಿಡಲು ಅನುಮತಿ ನಿರಾಕರಿಸಿದ್ದರು ಎಂದು ಗೂಳಿಹಟ್ಟಿ ಶೇಖರ್ ಹೇಳಿದ್ದರು. ಇದೀಗ ಆ ಮಾತಿಗೆ ಮುಖ್ಯಮಂತ್ರಿ ಚಂದ್ರು ಕೂಡ ಧ್ವನಿಗೂಡೊಸಿದ್ದು, ನನಗೂ ಬಿಜೆಪಿಯಲ್ಲಿದ್ದಾಗ ಅಸ್ಪೃಶ್ಯತೆಯ ಅನುಭವ ಆಗಿದೆ ಎಂದಿದ್ದಾರೆ.

 

ಹುಬ್ಬಳ್ಳಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು ಅವರು, ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರಿಗೆ ಆದ ಅನುಭವ, ಬಿಜೆಪಿಯಲ್ಲಿದ್ದಾಗ ನನಗೂ ಆಗಿತ್ತು. ನಾನೂ ಕೂಡ ಬಿಜೆಪಿಯಲ್ಲಿ ಇದ್ದು, ಬಂದವ. ಕೆಲವೊಂದು ಕಡೆ ನಮಗೆ ಆಹ್ವಾನವೂ ಇರುತ್ತಿರಲಿಲ್ಲ. ಕೆಲವೊಂದು ಕಡೆ ನಮ್ಮನ್ನು ವಿಶ್ವಾಸಕ್ಕೂ ತೆಗೆದುಕೊಳ್ಳುತ್ತಿರಲಿಲ್ಲ. ಗೂಳಿಹಟ್ಟಿ ಶೇಖರ್ ಹೇಳಿದ ಮೇಲೆ, ಅದು ನನಗೂ ಮನವರಿಕೆ ಆಗುತ್ತಿದೆ ಎಂದು ಬಿಜೆಪಿಯಲ್ಲಿರುವ ಜಾತಿಯ ಬಗ್ಗೆ ಮುಖ್ಯಮಂತ್ರಿ ಚಂದ್ರು ಮಾತನಾಡಿದ್ದಾರೆ.

ಬಿಜೆಪಿಯ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಇತ್ತಿಚೆಗೆ ಪಕ್ಷದ ಆರ್ ಎಸ್ ಎಸ್ ಬಗ್ಗೆ ಮಾತನಾಡಿದ್ದರು. ರಾಜ್ಯ ವಿಧಾನಸಭಾ ಚುನಾವಣೆ ನಾಲ್ಕು ತಿಂಗಳು ಇರುವ ಮುಂಚೆ, ನಾಗ್ಪುರದ ಆರ್ ಎಸ್ ಎಸ್ ಕಚೇರಿಯಲ್ಲಿರುವ ಹೇಡಗೇವಾರ್ ಸ್ಮಾರಕದ ಒಳಗೆ, ಜಾತಿಕಾರಣಕ್ಕೆ ಪ್ರವೇಶ ನಿರಾಕರಿಸಲಾಗಿತ್ತು ಎಂದು ಆರೋಪಿಸಿದ್ದರು. ಇದೀಗ ಜಾತಿ ವಿಚಾರ ಬಿಜೆಒಇಯಲ್ಲಿ ಇರುವುದು ನಿಜ ಎಂಬಂತೆ ಮುಖ್ಯಮಂತ್ರಿ ಚಂದ್ರು ತಮ್ಮ ಅನುಭವವನ್ನು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *