ಜುಲೈ 17ರಂದು ಎಚ್‍ಎಸ್‍ವಿ ಗೌರವ ನುಡಿ ನಮನ

1 Min Read

 

ಚಿತ್ರದುರ್ಗ. ಜುಲೈ. 16: ಕನ್ನಡ ಮತ್ತು ಸಂಸ್ಕøತಿ ಇಲಾಖೆ, ದುರ್ಗದ ಸಿರಿ ಕಲಾ ಸಂಘ, ಹಂಸ ಜ್ಯೋತಿ ಟ್ರಸ್ಟ್ ವತಿಯಿಂದ “ಎಚ್‍ಎಸ್‍ವಿ” ಗೌರವ ನುಡಿ ನಮನ ಕಾರ್ಯಕ್ರಮವನ್ನು ಇದೇ ಜುಲೈ 17ರಂದು ಸಂಜೆ 4.30ಕ್ಕೆ ಚಿತ್ರದುರ್ಗ ನಗರದ ಮುರುಘಾಮಠದ ಬಸವೇಶ್ವರ ಮಂಟಪ (ಸಮುದಾಯ ಭವನ)ದಲ್ಲಿ ಆಯೋಜಿಸಲಾಗಿದೆ.

ಎಂ.ಅನನ್ಯ ಪ್ರಾರ್ಥಿಸುವರು. ಡಾ.ಬಿ.ಎಂ.ಗುರುನಾಥ ಸ್ವಾಗತಿಸುವರು. ಶ್ರೀನಿವಾಸ ಜಿ ಕಪ್ಪಣ್ಣ ಪ್ರಾಸ್ತಾವಿಕ ನುಡಿಗಳನ್ನಾಡುವರು. ದಾವಣಗೆರೆ ಡಾ.ಆನಂದ ಋಗ್ವೇದಿ, ಚಿತ್ರದುರ್ಗದ ಡಾ.ತಾರಿಣಿ ಶುಭದಾಯಿನಿ, ಮಮತಾ ಅರಸೀಕೆರೆ, ಬೆಂಗಳೂರಿನ ಗುಂಡಣ್ಣ ನುಡಿ ನಮನ ಸಲ್ಲಿಸುವರು. ಗಾಯನ ಸರಸ್ವತಿ ಸಂಗೀತ ಕಟ್ಟಿ, ತಬಲಾ ರಾಜೇಂದ್ರ ನಾಕೋಡ್, ಕೀ ಬೋರ್ಡ್ ಶಬೀರ್ ಅಹಮದ್, ರಿದಮ್ ಪ್ಯಾಡ್ ಪದ್ಮನಾಭ್ ಅವರಿಂದ ಎಚ್ಚೆಸ್ವಿ ಕಾವ್ಯ ಗಾಯನ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಂಗಭೂಮಿ ಮತ್ತು ಚಲನಚಿತ್ರ ಹಿರಿಯ ನಟ ದತ್ತಣ್ಣ ಭಾಗವಹಿಸುವರು. ಹಿರಿಯ ಚಲನಚಿತ್ರ ಧಾರವಾಹಿ ಮತ್ತು ರಂಗ ಭೂಮಿ ನಟ ದೊಡ್ಡಣ್ಣ ಅಧ್ಯಕ್ಷತೆ ವಹಿಸುವರು. ಜಗದ್ಗುರು ಮುರುಘ ರಾಜೇಂದ್ರ ಮಠ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವ ಕುಮಾರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks