Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಈ ಚಳಿಯಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ..? ಇಲ್ಲಿದೆ ಹಲವು ಸಲಹೆಗಳು

Facebook
Twitter
Telegram
WhatsApp

 

ಚಳಿಗಾಲದಲ್ಲೂ ಮಳೆ ಶುರುವಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆ ಎಲ್ಲೆಡೆ ಮಳೆರಾಯ ತನ್ನ ಆರ್ಭಟ ಶುರು ಮಾಡಿದ್ದಾನೆ. ಇಂಥ ಚಳಿಯಲ್ಲಿ ದೊಡ್ಡವರೇ ನಡುಗುತ್ತಾರೆ. ಇನ್ನು ಮಕ್ಕಳು.

 

ಅದರಲ್ಲೂ ಮಕ್ಕಳಿಗೆ ಶೀತ, ಜ್ವರ ಬರದಂತೆ ಈ ಚಳಿಯಲ್ಲಿ ಹುಷಾರಾಗಿ ಕಾಪಾಡಿಕೊಳ್ಳಬೇಕಾಗುತ್ತದೆ. ಅದರ ಜೊತೆಗೆ ತ್ವಜೆಯ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ. ನವಜಾತ ಶಿಶುಗಳಿಗೆ ಇಂಥ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ತಾಯಿ ಇದನ್ನೆಲ್ಲಾ ಗಮನ ಕೊಡಬೇಕಾಗುತ್ತದೆ.

ಹೀಗಾಗಿ ಮಗುವಿನ ಆರೋಗ್ಯದ ದೃಷ್ಟಿಯಿಂದ ಕೆಲವೊಂದು ಸಲಹೆ ಸೂಚನೆಗಳನ್ನು ತಾಯಿ ಅನುಸರಿಸಬೇಕಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಮಕ್ಕಳ ಚರ್ಮದ ಕಾಳಜಿ ಬಹಳ ಮುಖ್ಯವಾಗುತ್ತದೆ. ಚರ್ಮ ಬೇಗನೆ ಡ್ರೈ ಆಗಿ, ನಿರ್ಜೀವವಾಗುತ್ತದೆ. ಹೀಗಾಗಿ ಮಗುವಿನ ಚರ್ಮಕ್ಕೆ ಆಗಾಗ ಎಣ್ಣೆಯ ಮಸಾಜ್ ಮಾಡಬೇಕಾಗುತ್ತದೆ.

ಎಣ್ಣೆ ಮಸಾಜ್ ಮಾಡುವುದರಿಂದ ಮಗುವಿನ ಚರ್ಮವಷ್ಟೇ ಆಕ್ಟೀವ್ ಆಗುವುದಿಲ್ಲ, ಮೂಳೆಗಳು ಬಲಿಷ್ಟವಾಗುವುದಕ್ಕೆ ಸಹಾಯವಾಗುತ್ತದೆ. ಸಾಧ್ಯವಾದಷ್ಟು ಮಗುವಿನ ದೇಹದ ಮೇಲೆ ಸೂರ್ಯನ ಕಿರಣಗಳು ಬೀಳುವಂತೆ ಮಾಡಬೇಕಾಗುತ್ತದೆ. ಯಾಕೆಂದರೆ ಸೂರ್ಯನ ಕಿರಣದಿಂದ ವಿಟಮಿನ್ ಡಿ ಸುಲಭವಾಗಿ ಸಿಗುತ್ತದೆ. ಹೀಗಾಗಿ ಹಲವು ಕಾಯಿಲೆಯಿಂದ ಮಗುವನ್ನು ದೂರವಿಡಬಹುದು.

ಇನ್ನು ಮಗುವಿಗೆ ಆದಷ್ಟು ಬೆಚ್ಚಗಿನ ಉಡುಪುಗಳನ್ನು ಧರಿಸಿ. ಮೊದಲೇ ಜೋರು ಚಳಿಯಿದೆ. ಜೊತೆಗೆ ಮಳೆಯೂ ಆಗಾಗ ಬರುತ್ತಿದ್ದು, ಚಳಿ ಮತ್ತಷ್ಟು ಹೆಚ್ಚಾಗುತ್ತಿದೆ. ಹೀಗಾಗಿ ಮಕ್ಕಳ ಉಡುಪಿನ ಬಗ್ಗೆ ಗಮನ ಹರಿಸಬೇಕಾಗುತ್ತದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಶೋಕ್ ಅವರಿಗೇನೆ ಏಡ್ಸ್ ರಕ್ತ ಇಂಜೆಕ್ಟ್ ಮಾಡಲು ಹೋಗಿದ್ರಂತೆ ಮುನಿರತ್ನ : ಬೆಚ್ಚಿಬಿದ್ದ ವಿಪಕ್ಷ ನಾಯಕ..!

  ರಾಜಕೀಯದಲ್ಲಿ ಎಷ್ಟೇ ದ್ವೇಷಿಗಳಿದ್ದರೂ ಅದು ಸ್ಪರ್ಧೆಯ ವಿಚಾರಕ್ಕೆ ಮಾತ್ರ ಯುದ್ಧ ಸಾರಬೇಕು. ಅದೆಷ್ಟೋ ರಾಜಕಾರಣಿಗಳು ಇರುವುದೇ ಹಾಗೇ. ರಾಜಕೀಯದ ಪಡಸಾಲೆಯಲ್ಲಿ ಕಿತ್ತಾಡಿಕಿಂಡರು, ಸಭೆ ಸಮಾರಂಭಗಳಲ್ಲಿ ಆತ್ಮೀಯರಾಗಿಯೇ ಕಾಣಿಸಿಕೊಳ್ಳುತ್ತಾರೆ. ಆದರೆ ಮುನಿರತ್ನ ಮಾಡಿದ್ದ ಪ್ಲ್ಯಾನ್

ಅತ್ಯಾಚಾರ ಕೇಸಲ್ಲಿ ಮತ್ತೆ ಅರೆಸ್ಟ್ ಆದ ಮುನಿರತ್ನ..!

  ಬೆಂಗಳೂರು: ಜಾತಿ ನಿಂದನೆ ಹಾಗೂ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಶಾಸಕ ಮುನಿರತ್ನ ಅವರಿಗೆ ನಿನ್ನೆಯಷ್ಟೇ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಆದರೆ ಮುನಿರತ್ನ ಹೊರಗೆ ಬಂದು, ಮಾಮೂಲಿಯಂತೆ ಇರಲು ಸಾಧ್ಯವಾಗಲೇ

ಈ ರಾಶಿಯವರ ಭೂಮಿ ಖರೀದಿ, ಭೂಮಿ ಮಾರಾಟಗಾರರಿಗೆ ಯಶಸ್ಸು.

ಈ ರಾಶಿಯವರ ಭೂಮಿ ಖರೀದಿ, ಭೂಮಿ ಮಾರಾಟಗಾರರಿಗೆ ಯಶಸ್ಸು. ನಿಮ್ಮ ಮಕ್ಕಳು ಮದುವೆಗೆ ಒಪ್ಪುತ್ತಿಲ್ಲವೇ? ಶುಕ್ರವಾರರಾಶಿ ಭವಿಷ್ಯ -ಸೆಪ್ಟೆಂಬರ್-20,2024 ಸೂರ್ಯೋದಯ: 06:08, ಸೂರ್ಯಾಸ್ತ : 06:10 ಶಾಲಿವಾಹನ ಶಕೆ :1946, ಸಂವತ್ :2080, ಸಂವತ್ಸರ

error: Content is protected !!