Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಮಲಲ್ಲಾ ಮೂರ್ತಿಯ ಕೆತ್ತನೆ ಹೇಗಾಯ್ತು..? ಶಿಲ್ಪಿಯ ಆಯ್ಕೆ ಹೇಗಿತ್ತು..? ಮಾಹಿತಿ ಬಿಚ್ಚಿಟ್ಟರು ಪೇಜಾವರಶ್ರೀ

Facebook
Twitter
Telegram
WhatsApp

 

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಗಾಗಿ ಇಡೀ ದೇಶದ ಜನ ಕಾಯುತ್ತಿದ್ದಾರೆ. ಅಯೋಧ್ಯೆಯಂತೂ ಮಧುವಣಗಿತ್ತಿಯಂತೆ ಅಲಂಕಾರಗೊಂಡಿದೆ. ಇನ್ನು ಕೇವಲ ಮೂರು ದಿನಗಳು ಮಾತ್ರ ಈ ಅದ್ಭುತವನ್ನು ಕಣ್ತುಂಬಿಕೊಳ್ಳಲು ಸಮಯ ಬಂದೇ ಬಿಡುತ್ತದೆ. ರಾಮಲಲ್ಲಾ ಮೂರ್ತಿಯ ಕೆತ್ತನೆ ಆಗಿದ್ದು ನಮ್ಮ ರಾಜ್ಯದಿಂದ. ಅದು ಹೇಗಾಯ್ತು..? ಶಿಲ್ಪಿಯ ಆಯ್ಕೆ ಹೇಗಾಯ್ತು..? ಶಿಲೆಗೆ ಏನೆಲ್ಲಾ ಹೇಳಿದ್ದರು ಈ ಎಲ್ಲಾ ಪ್ರಶ್ನೆಗಳು ಕಾಡದೆ ಇರುವುದಿಲ್ಲ. ಅದಕ್ಕೆಲ್ಲ ಪೇಜಾವರ ಶ್ರೀಗಳೇ ಉತ್ತರ ನೀಡಿದ್ದಾರೆ.

ಖಾಸಗಿ ಚಾನೆಲ್ ಒಂದಕ್ಕೆ ಮಾತನಾಡಿರುವ ಪೇಜಾವರ ಶ್ರೀಗಳು, ರಾಮ ಮಂದಿರಕ್ಕಾಗಿ ಪ್ರತಿಮೆ ನಿರ್ಮಾಣ ಮಾಡಬೇಕು ಎಂದಾಗ, ಮೂರು ಪ್ರತಿಮೆಗಳ ನಿರ್ಮಾಣವಾಗಲಿ ಎಂದರು. ಯಾಕಂದ್ರೆ ಕಡೆ ಗಳಿಗೆಯಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಯಾವುದೇ ಸಮಸ್ಯೆ ಎದುರಾಗಬಾರದು ಎಂದು. ಬಳಿಕ ಯಾರ ಕೈಯಿಂದ ಮೂರ್ತಿ ಕೆತ್ತನೆ ಮಾಡಿಸುವುದು ಎಂಬ ಚರ್ಚೆ ಶುರುವಾದಾಗ, ಪ್ರಸಿದ್ಧ ಪಡೆದ ಎಲ್ಲಾ ಕಲಾವಿದರನ್ನು ಕರೆಸಲಾಗಿತ್ತು. ಅನುಭವ, ಕೆಲಸ ಹಂಚಿಕೊಳ್ಳಲು ಹೇಳಲಾಗಿತ್ತು. ಅದರಲ್ಲಿ ಮೂರು ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಆ ಮೂವರಲ್ಲಿ ಇಬ್ಬರು ಕರ್ನಾಟಕದವರೇ. ಮೂರ್ತಿ ಆಯ್ಕೆಯಾಗಿದ್ದು ಕೂಡ ಕರ್ನಾಟಕದ್ದೇ ಎಂಬುದು ಹೆಮ್ಮೆಯ ಸಂಗತಿ ಎಂದಿದ್ದಾರೆ.

ಸೆಲೆಕ್ಷನ್ ಕಮಿಟಿಯಲ್ಲೂ ಕರ್ನಾಟಕದಿಂದ ಪೇಜಾವರ ಶ್ರೀಗಳು ಮಾತ್ರ ಇದ್ದರಂತೆ. ಇನ್ನುಳಿದಂತೆ ಅಯೋಧ್ಯೆವರೇ ಇದ್ದರು. ಅದೃಷ್ಟವೆಂಬಂತೆ ಕರ್ನಾಟಕದ ಶಿಲೆಯೇ ಆಯ್ಕೆಯಾಗಿದ್ದು, ಆ ಶಿಲೆಗೆ ಬಳಸಿದ ಕಲ್ಲು ಸಹ ಕರ್ನಾಟಕದ್ದೆ ಆಗಿದೆ. ಇನ್ನುಳಿದ ಮೂರ್ತಿಗಳಿಗೂ ಮುಂದೆ ಯೋಗ್ಯವಾದ ಸ್ಥಳದಲ್ಲಿ ಪೂಜೆ ಸಲ್ಲಿಸಲಾಗುತ್ತದೆಯಂತೆ. ಜನವರಿ 22ಕ್ಕೆ ಕರ್ನಾಕಟದ ಶಿಲ್ಪಿ ಕೆತ್ತಿದ ರಾಮನ ಶಿಲೆ ಅನಾವರಣಗೊಳ್ಳಲಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬೇಸಿಗೆಯಲ್ಲಿ ಕೂದಲಿಗೆ ಎಣ್ಣೆ ಹಚ್ಚಿದರೆ ಏನಾಗುತ್ತೆ ಗೊತ್ತಾ ?

ಸುದ್ದಿಒನ್ : ಹವಾಮಾನದ ಬದಲಾವಣೆಗೆ ಅನುಗುಣವಾಗಿ ಚರ್ಮ ಮತ್ತು ಕೂದಲಿಗೆ ಸರಿಯಾದ ಪೋಷಣೆ ನೀಡಬೇಕು. ಇಲ್ಲದಿದ್ದರೆ ಖಂಡಿತವಾಗಿಯೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ, ಅನೇಕ ಜನರು ತಮ್ಮ ಕೂದಲಿಗೆ ಎಣ್ಣೆಯನ್ನು ಹಾಕುವುದಿಲ್ಲ ಏಕೆಂದರೆ ಅದು ಬೇಸಿಗೆಯಲ್ಲಿ

ಈ ರಾಶಿಯವರು ತುಂಬಾ ಪ್ರೀತಿಸುವರು ಆದರೆ ಬೇರೆಯವರ ಜೊತೆ ಮದುವೆ ಒಳ್ಳೆಯದಲ್ಲ

ಈ ರಾಶಿಯವರು ತುಂಬಾ ಪ್ರೀತಿಸುವರು ಆದರೆ ಬೇರೆಯವರ ಜೊತೆ ಮದುವೆ ಒಳ್ಳೆಯದಲ್ಲ, ಗುರುವಾರ ರಾಶಿ ಭವಿಷ್ಯ -ಮೇ-2,2024 ಸೂರ್ಯೋದಯ: 05:53, ಸೂರ್ಯಾಸ್ತ : 06:32 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ ,

ಇಂದಿನಿಂದ ರಾಜ್ಯಾದ್ಯಂತ ಮಳೆ : ಬೆಂಗಳೂರಿಗೆ ಮಳೆ ದರ್ಶನ ಯಾವಾಗಿಂದ..?

ಬೆಂಗಳೂರು: ಬಿಸಿಲಿನ ತಾಪ ಅದ್ಯಾಕೆ ದಿನೇ ದಿನೇ ಏರಿಕೆಯಾಗುತ್ತಿದೆಯೋ ತಿಳಿದಿಲ್ಲ. ಜನರಂತು ಬಿಸಿಲಿನ ಬೇಗೆಗೆ ಹೈರಾಣಾಗಿ ಹೋಗಿದ್ದಾರೆ. ಕಳೆದ ವರ್ಷವಂತು ಮಳೆಯಿಲ್ಲ ಈ ವರ್ಷ ಮೊದಲ ಮಳೆಯೂ ಸರಿಯಾಗಿ ಆಗಿಲ್ಲ. ಮೇ ತಿಂಗಳಿಗೆ ಬಂದರೂ

error: Content is protected !!