Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಲಾಲ್ ಆಯ್ತು ಈಗ ಆಜಾನ್ ಏನಿದು ಅಂದ್ರೆ ಇದಕ್ಕೆಲ್ಲಾ ಕಾರಣ ಕಾಂಗ್ರೆಸ್ ಅಂದ್ರು ಗೃಹ ಸಚಿವರು..!

Facebook
Twitter
Telegram
WhatsApp

ಬೆಂಗಳೂರು: ಮಸೀದಿಗಳಲ್ಲಿನ ಮೈಕ್ ಗಳನ್ನು ನಿಷೇಧಿಸಬೇಕೆಂದು ಹಿಂದೂಪರ ಸಂಘಟನೆಗಳು ಒತ್ತಡ ಹಾಕುತ್ತಿವೆ. ಈ ಸಂಬಂಧ ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಆಜಾನ್ ಮಾತ್ರ ಅಲ್ಲ ಬಸ್ ಓಡಿಸುವುದಕ್ಕೂ ಎಷ್ಟು ಡೆಸಿಬಲ್ ಸೌಂಡ್ ಇರಬೇಕು ಅನ್ನೋದು ಗೊತ್ತಿರಬೇಕು. ಶಬ್ಧ ಮಾಲಿನ್ಯದ ಬಗ್ಗೆ ಕೋರ್ಟ್ ಆದೇಶವಿದೆ. ಅದನ್ನು ಎಲ್ಲರೂ ಫಾಲೋ ಮಾಡಬೇಕು. ಪೊಲೀಸರಿಗೆ ನಾವೂ ಹೇಳಿದ್ದೀವಿ. ಎಲ್ಲೆಲ್ಲಿ ಎಷ್ಟೆಷ್ಟು ಡೆಸಿಬಲ್ ಇದೆ ಅನ್ನೋದನ್ನ ತಿಳಿದುಕೊಂಡು ವಿಶ್ವಾಸದಲ್ಲಿಯೇ ಅದನ್ನ ಸರಿ ಮಾಡಬೇಕು, ಯಾವುದೇ ಘರ್ಷಣೆಗೆ ಲಾ ಅಂಡ್ ಆರ್ಡರ್ ಗೂ ಆದೇಶವಿಲ್ಲ.

ಮಸೀದಿ ಅಥವಾ ದೇವಸ್ಥಾನ ಎಲ್ಲಿಯೇ ಮೈಕ್ ಹಾಕುದ್ರು ಎಲ್ಲರಿಗೂ ಹೇಳಬೇಕು. ಮೈಕ್ ಅನ್ನು ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರೆಗೆ ಉಪಯೋಗಿಸಬೇಕೆಂಬುದು ಇದೆ. ಹೈಕೋರ್ಟ್ ಆದೇಶವನ್ನ ಎಲ್ಲರೂ ಫಾಲೋ ಮಾಡಿದ್ರೆ ಶಾಂತಿ ಸೌಹಾರ್ದತೆ ಲಭಿಸುತ್ತೆ. ಯಾರು ಅದಕ್ಕೆ ಚ್ಯುತಿ ತರಬಾರದು.

ಸಿದ್ದರಾಮಯ್ಯ ಅವರು ಮತ್ತು ಅವರ ಪಕ್ಷದ ವೋಟ್ ಬ್ಯಾಂಕ್ ಇದಕ್ಕೆ ನೇರ ಕಾರಣ. ಈ ದೇಶದಲ್ಲಿ ಒಂದೊಂದು ಕೋಮು ಎತ್ತಿಕಟ್ಟಿನೇ ಇವ್ರು ಸ್ವತಂತ್ರ ಬಂದಾಗ ಸಿಂಹಾಸನದ ಮೇಲೆ ಕೂತಿದ್ದಾರೆ. ಅದು ಬ್ರೇಕ್ ಆದರೆ ಇವರು ಕೆಳಗೆ ಬಿದ್ದು ಹೋಗ್ತಾರೆ. ಭಯದಿಂದಲೇ ಇದ್ದಾರೆ. ಯಾವುದೇ ಸಂದರ್ಭದಲ್ಲೂ ಗಟ್ಟಿಯಾಗಿ‌ ಮಾತಾಡಲಿಲ್ಲ. ಹಿಜಾಬ್ ಇರಬಹುದು, ಹಲಾಲ್ ಇರಬಹುದು ಬಾಯಿಬಿಡಲ್ಲ. ಡಿಕೆ ಶಿವಕುಮಾರ್ ಅವರು ಹೇಳಿದ್ರು ಹಿಜಾಬ್ ಬಗ್ಗೆ ಯಾರು ಬಾಯಿ ಬಿಡಬೇಡಿ ಅಂತ. ಸತ್ಯ ಹೇಳಲಿಕ್ಕೆ ಆಗಲ್ಲ ಅನ್ನೋದು ಇವರಿಗೆ ಆಗಲಿಲ್ಲ ಅಂದ್ರೆ ಹೇಗೆ ಅದು. ಇವರದ್ದೇ ಕುಮ್ಮಕ್ಕು ಇದು ಎಂದು ಆರೋಪ ಮಾಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ. ಶುಕ್ರವಾರ- ರಾಶಿ ಭವಿಷ್ಯ ಮೇ-17,2024 ಸೂರ್ಯೋದಯ: 05:47, ಸೂರ್ಯಾಸ್ತ : 06:37 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ

ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪ್ರಕರಣ | ಕೊನೆಗೂ ಸಿಕ್ತು ಸಾವಿನ ಸುಳಿವು: ಎಸ್.ಪಿ. ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ, ಮೇ. 16 : 2023ರ ಡಿಸೆಂಬರ್ ನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಅದು. ನಗರದ ಬೆಂಗಳೂರು ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಐವರ ಮೃತದೇಹ ಪತ್ತೆಯಾಗಿತ್ತು. ಅದು ಅವರೆಲ್ಲಾ ಸಾವನ್ನಪ್ಪಿ

ನೈರುತ್ಯ ಪದವೀಧರ ಚುನಾವಣೆ : ಬಿಜೆಪಿ ವಿರುದ್ಧ ರಘುಪತಿ ಭಟ್ ಬಂಡಾಯ, ಪಕ್ಷೇತರ ಸ್ಪರ್ಧೆ

ಮೈಸೂರು: ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರಿಗೆ, ಒಂದಷ್ಡು ವಿವಾದಗಳಿದ್ದವರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು. ಹೊಸ ಮುಖಗಳಿಗೆ ಮಣೆ ಹಾಕಲು ಹೋಗಿ, ಹಿರಿಯ ತಲೆಗಳು ಬಂಡಾಯವೆದ್ದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್

error: Content is protected !!