ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 02 : ತಾಲ್ಲೂಕಿನ ಭೀಮಸಮುದ್ರದಲ್ಲಿ ನಾಳೆ (ಫೆ. 03,ಮಂಗಳವಾರ) ಗ್ರಾಮದಲ್ಲಿ ಹಿಂದೂ ಸಂಗಮ ಹಾಗೂ ಶೋಭಾ ಯಾತ್ರೆ ನಡೆಯಲಿದೆ ಎಂದು ಹಿಂದೂ ಸಂಗಮ ಗ್ರಾಮಾಂತರ ಅಧ್ಯಕ್ಷರಾದ ಜೆ ಎಸ್ ಅನಿತ್ ಕುಮಾರ್ ತಿಳಿಸಿದರು.
ಹಿಂದೂ ಸಂಗಮ ಆಯೋಜನಾ ಸಮಿತಿ ಚಿತ್ರದುರ್ಗ ಗ್ರಾಮಾಂತರ ಇವರ ನೇತೃತ್ವದಲ್ಲಿ ಹಿಂದೂ ಸಂಗಮ ಶೋಭ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಂಜಾರ ಗುರು ಪೀಠದ ಚಿತ್ರದುರ್ಗದ ಶ್ರೀ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. ದಿಕ್ಸೂಚಿಯ ಭಾಷಣ ವನ್ನು ಯುವ ವಾಗ್ವಾಯಿಗಳು ಸಾಮಾಜಿಕ ಕಾರ್ಯಕರ್ತರು ಶ್ರೀಕಾಂತ್ ಶೆಟ್ಟಿ, ಕಾರ್ಕಳ ಹಿಂದೂ ಸಂಗಮ ಆಯೋಜನ ಸಮಿತಿ ಉಪಾಧ್ಯಕ್ಷರಾದ ನಂದಿ ನಾಗರಾಜ್ ಕಲ್ಲೇಶಯ್ಯ ಶಾಂತಲಾ ಅಶೋಕ್ ಶಾಂತಲಾ ಕಾರ್ಯದರ್ಶಿಗಳು ನಾಗರಾಜ್ ಮಲ್ಲಾಪುರ ಜಂಟಿ ಕಾರ್ಯದರ್ಶಿಗಳಾದ ಚನ್ನಕೇಶವ
ಹಿಂದೂ ಕಾರ್ಯಕರ್ತರು ಆಗಮಿಸ್ತಾರೆ. ಶೋಭ ಯಾತ್ರೆ ಗ್ರಾಮದ ಈಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ರೇಣುಕಾ ಎಲ್ಲಮ್ಮ ದೇವಸ್ಥಾನದವರೆಗೆ ಸಾಗಲಿದೆ ಎಂದು ತಿಳಿಸಿದರು.














