Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಲಾಲ್, ಹಿಜಾಬ್ ಆಯ್ತು ಈಗ ಮ್ಯಾಂಗೊ ಕಟ್ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು..?

Facebook
Twitter
Telegram
WhatsApp

ಹುಬ್ಬಳ್ಳಿ: ಧರ್ಮದ ಹೆಸರಿನಲ್ಲಿ ಬೇರೆ ಬೇರೆ ಜನರ ದಾರಿ ತಪ್ಪಿಸುತ್ತಿದ್ದಾರೆ. ಇದು ಕಡೆಗೆ ಅವರಿಗೆ ತಿರುಗುಬಾಣವಾಗುತ್ತದೆ. ಜನರಿಗೆ ಗೊತ್ತಾಗುತ್ತೆ. ಏನೆಲ್ಲಾ ಹುನ್ನಾರ ಮಾಡುತ್ತಾರೆ ಅಂತ. ಮಾವಿನಕಾಯಿ ವ್ಯಾಪಾರಕ್ಕೆ ಯಾರಾದ್ರು ಮಧ್ಯಪ್ರವೇಶ ಮಾಡುತ್ತಾರಾ..? ಜಾತ್ರೆಗಳಲ್ಲಿ ಎಷ್ಡೋ ವರ್ಷದಿಂದ ಮುಸ್ಲಿಂರು ಹಿಂದೂಗಳು ವ್ಯಾಪಾರ ಮಾಡಿಕೊಂಡು ಬರುತ್ತಿದ್ದರು. ಇನ್ನು ಹಲಾಲ್ ಮಾಂಸ ತಗೊಳೋದನ್ನು ಸಾಕಷ್ಟು ವರ್ಷಗಳಿಂದ ಅವರು ಕಡ್ಟು ಮಾಡಿದ್ದನ್ನೆ ತೆಗೆದುಕೊಳ್ಳುತ್ತಿದ್ದೆವು. ತಿನ್ನದೆ ಇರುವ ಜನ ದಾರಿ ತಪ್ಪಿಸುತ್ತಿದ್ದಾರೆ. ಅವರವರ ನಂಬಿಕೆ ಅಲ್ವಾ. ಯಾರುಗೇನು ತೊಂದರೆಯಾಗುತ್ತೆ ಎಂದಿದ್ದಾರೆ.

ಬಾದಾಮಿಗೆ ಈಗ ಹೋಗುತ್ತಿದ್ದೇನೆ. ಅಸೆಂಬ್ಲಿ ಇತ್ತಲ್ವ,ಇದ್ದಿದ್ರಿಂದ ನಾನು ಹೋಗುವುದಕ್ಕೆ ಆಗಿರಲಿಲ್ಲ. ಬಾದಾಮಿಯಲ್ಲಿ ಇವತ್ತು ನಾಳೆ ಎರಡು ದಿನ ಇರುತ್ತೇನೆ. ಬಿಜೆಪಿ ಪಕ್ಷದವರು ಸಮಾಜದಲ್ಲಿ ಸಾಮರಸ್ಯವನ್ನು ಹಾಳು ಮಾಡುತ್ತಿದ್ದಾರೆ. ಅವರಿಗೆ ಜನರ ಮುಂದೆ ಸಾಧನೆಗಳನ್ನು ಇಟ್ಟುಕೊಂಡು ಹೋಗಲು ಸಾಧನೆಗಳೇ ಇಲ್ಲ. ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಇದನ್ನೆಲ್ಲಾ ಮುಚ್ಚಿಕೊಳ್ಳಬೇಕು ಅಲ್ವಾ. ಅದಕ್ಕೆ ಭಾವನಾತ್ಮಕ, ಧಾರ್ಮಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಹೋಗುತ್ತಿದ್ದಾರೆ.

ಹಿಜಾಬ್, ಹಲಾಲ್, ಜಾತ್ರೆಯಲ್ಲಿ ನಿಷೇಧ, ಭಗವದ್ಗೀತೆ ವಿಚಾರ, ಈಗ ಮಸೀದಿಗಳಲ್ಲಿ ಮೈಕ್, ಮಾವಿನ ಹಣ್ಣಿನ ವಿಚಾರ ಈ ಎಲ್ಲವನ್ನು ಇಟ್ಟುಕೊಂಡು ಹೋಗುತ್ತಿದ್ದಾರೆ. ಎಷ್ಟೋ ವರ್ಷಗಳಿಂದ ಹಿಂದೂ ಮುಸ್ಲಿಂ ರು ಇಬ್ಬರು ಪರಸ್ಪರ ಹೊಂದಾಣಿಕೆಯಿಂದ ವ್ಯಾಪಾರ ಮಾಡಿಕೊಂಡು ಬರುತ್ತಿದ್ದಾರೆ. ನಮ್ಮ ಕಡೆ ಮಾವಿನ ತೋಟ ಇದ್ರೆ ವ್ಯಾಪಾರ ಮಾಡುತ್ತಿದ್ಧ್ದು ಯಾರಿಗೆ ಮುಸ್ಲಿಂ ವ್ಯಾಪಾರಿಗಳಿಗೆ. ಮುಸ್ಲಿಂ ರು ಸಂಪೂರ್ಣವಾಗಿ ತೋಟ ಕಾದು ಆಮೇಲೆ ಹಣ್ಣನ್ನು ತೆಗೆದುಕೊಳ್ಳುತ್ತಿದ್ದರು. ಇದೀಗ ಇಂಥದ್ದಕ್ಕೆಲ್ಲಾ ಯಾಕೆ ಅಡ್ಡ ಬರುತ್ತಾ ಇದ್ದಾರೆ. ಮತಗಳನ್ನು ವಿಭಜನೆ ಮಾಡಿ, ಸಮಾಜ ವಿಭಜನೆ ಮಾಡೋದು ಇವರ ಉದ್ದೇಶ‌ ಚುನಾವಣೆ ಒಂದು ವರ್ಷವು ಇಲ್ಲ ಚುನಾವಣೆ ಹತ್ತಿರ ಬರುತ್ತಿದೆಯಲ್ಲ ಅದಕ್ಕೆ ಈ ರೀತ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೂವಿನ ಹಡಗಲಿ | ಬೂದನೂರಿನಲ್ಲಿ ವಿಜೃಂಭಣೆಯಿಂದ ಜರುಗಿದ ಶ್ರೀ ವೀ­ರಭದ್ರೇಶ್ವರ ಜಾತ್ರೆ

ಸುದ್ದಿಒನ್, ವಿಜಯನಗರ, ಹೂವಿನ ಹಡಗಲಿ, ಮೇ. 09  : ತಾಲ್ಲೂಕಿನ ಬೂದನೂರು ಗ್ರಾಮದಲ್ಲಿ ಗುರುವಾರ ಸಂಜೆ 5 ಗಂಟೆಗೆ ವೀ­ರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಮಹಾರಥೋತ್ಸವ ಅನೇಕ ಭಕ್ತ ಸಮೂಹದ ನಡುವೆ ವಿಜೃಂಭಣೆಯಿಂದ ಜರುಗಿತು.

ನಾಳೆಯಿಂದ ಮೇ.17ರವರೆಗೂ ಎಲ್ಲಾ ಜಿಲ್ಲೆಗಳಲ್ಲೂ ಮಳೆಯ ಅಬ್ಬರ..!

ಕಳೆದ ಮೂರ್ನಾಲ್ಕು ದಿನದಿಂದ ವರುಣರಾಯನ ದರ್ಶನವಾಗುತ್ತಿದೆ. ಆದರೂ ಕೆಲವೊಂದು ಕಡೆ ಬಿಸಿ ಗಾಳಿಯ ಅನುಭವ ಮಾತ್ರ ಕಡಿಮೆಯಾಗಿಲ್ಲ. ಇಂದು ಸಂಜೆ ವೇಳೆಗೆ ಬೆಂಗಳೂರು ಸೇರಿದಂತೆ ಹಲವೆಡೆ ಜೋರು ಮಳೆಯಾಗಿದೆ. ಇದರಿಂದ ವಾಹನ ಸವಾರರು, ಕೆಲಸಕ್ಕೆ

ಚಿತ್ರದುರ್ಗ | ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಎಸ್‌ಎಸ್‌ಎಲ್‌ಸಿ ಫಲಿತಾಂಶ : 100 ಕ್ಕೆ 100 ಫಲಿತಾಂಶ ಪಡೆದ 13 ಶಾಲೆಗಳು

ಸುದ್ದಿಒನ್, ಚಿತ್ರದುರ್ಗ, ಮೇ. 09 :   ಜಿಲ್ಲೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ 35 ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ/ಏಕಲವ್ಯ ಮಾದರಿ ವಸತಿ ಶಾಲೆಗಳ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ

error: Content is protected !!