Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭೋಜ್‌ಶಾಲಾ ವಿವಾದಕ್ಕೆ ಹೈಕೋರ್ಟ್‌ ತೆರೆ : ಇಲ್ಲಿದೆ ಮಹತ್ವದ ಆದೇಶ

---Advertisement---

ಇಂದೋರ್‌ : ಮಧ್ಯಪ್ರದೇಶದ ಧಾರ್ ಜಿಲ್ಲೆಯ ಐತಿಹಾಸಿಕ ಭೋಜ್‌ಶಾಲಾ–ಕಮಾಲ್‌ ಮೌಲಾ ಮಸೀದಿ ವಿವಾದಕ್ಕೆ ಸಂಬಂಧಿಸಿ ಮಧ್ಯಪ್ರದೇಶ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದ್ದು, ವಿವಾದಿತ ಕಟ್ಟಡವನ್ನು “ವಾಗ್ದೇವಿ ಸರಸ್ವತಿ ದೇವಾಲಯ” ಎಂದು ಗುರುತಿಸಿದೆ. ಇದೇ ವೇಳೆ 2003ರಿಂದ ಮುಸ್ಲಿಮರಿಗೆ ನೀಡಲಾಗಿದ್ದ ಶುಕ್ರವಾರ ನಮಾಜ್‌ ಅನುಮತಿಯನ್ನು ರದ್ದುಪಡಿಸಿದೆ.

ಭೋಜ್‌ಶಾಲಾ ವಿವಾದ ಏನು?
11ನೇ ಶತಮಾನದಲ್ಲಿ ಪರಮಾರ ವಂಶದ ರಾಜ Raja Bhoj ಅವರು ಧಾರ್‌ನಲ್ಲಿ ಸರಸ್ವತಿ ದೇವಾಲಯವನ್ನು ನಿರ್ಮಿಸಿದ್ದರು ಎಂಬ ನಂಬಿಕೆ ಇದೆ. ನಂತರದ ಕಾಲದಲ್ಲಿ ದೇವಾಲಯದ ಆವರಣದಲ್ಲಿ ಸೂಫಿ ಸಂತ ಕಮಾಲುದ್ದೀನ್‌ ಚಿಷ್ಠಿ ಸಮಾಧಿ ನಿರ್ಮಾಣಗೊಂಡಿದ್ದು, ಕ್ರಮೇಣ ಈ ಸ್ಥಳ “ಕಮಾಲ್‌ ಮೌಲಾ ಮಸೀದಿ” ಎಂದೂ ಪರಿಚಿತವಾಯಿತು.
ಈ ಸ್ಥಳದ ಮೇಲೆ ಹಿಂದು ಮತ್ತು ಮುಸ್ಲಿಂ ಸಮುದಾಯಗಳು ಹಕ್ಕು ಪ್ರತಿಪಾದಿಸುತ್ತಿದ್ದವು. 2003ರಲ್ಲಿ ಭಾರತೀಯ ಪುರಾತತ್ವ ಇಲಾಖೆ ಹಿಂದೂಗಳಿಗೆ ಮಂಗಳವಾರ ಪೂಜೆ ಹಾಗೂ ಮುಸ್ಲಿಮರಿಗೆ ಶುಕ್ರವಾರ ನಮಾಜ್‌ಗೆ ಅವಕಾಶ ಕಲ್ಪಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು.

“ದಾಖಲೆಗಳು ದೇವಾಲಯದ ಪರ”
ನ್ಯಾಯಮೂರ್ತಿಗಳಾದ ವಿಜಯ್ ಕುಮಾರ್ ಶುಕ್ಲಾ ಮತ್ತು ಅಲೋಕ್ ಅವಸ್ಥಿ ಅವರಿದ್ದ ಪೀಠ, “ಐತಿಹಾಸಿಕ ದಾಖಲೆಗಳು, ಪುರಾತತ್ವ ಸಾಕ್ಷ್ಯಗಳು ಹಾಗೂ ಸಾಹಿತ್ಯಿಕ ಉಲ್ಲೇಖಗಳು ಭೋಜ್‌ಶಾಲಾ ಸರಸ್ವತಿ ದೇವಿಗೆ ಸಮರ್ಪಿತ ಸ್ಥಳವಾಗಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತವೆ” ಎಂದು ಅಭಿಪ್ರಾಯಪಟ್ಟಿದೆ.
2024ರಲ್ಲಿ ಹೈಕೋರ್ಟ್ ಆದೇಶದ ಮೇರೆಗೆ ನಡೆದ ವೈಜ್ಞಾನಿಕ ಸರ್ವೆಯಲ್ಲಿ ಪತ್ತೆಯಾದ ನಾಣ್ಯಗಳು, ಶಾಸನಗಳು ಹಾಗೂ ಕಲಾಕೃತಿಗಳ ಆಧಾರದ ಮೇಲೆ ವಿವಾದಿತ ಕಟ್ಟಡ ರಾಜಭೋಜರ ಕಾಲದ ದೇವಾಲಯವಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಮುಸ್ಲಿಮರಿಂದ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಿದ್ಧತೆ
ತೀರ್ಪಿಗೆ ಮುಸ್ಲಿಂ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ವ್ಯಕ್ತವಾಗಿದೆ. ಇದೇ ವೇಳೆ, “ಪ್ರತ್ಯೇಕ ಮಸೀದಿ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರಕ್ಕೆ ಭೂಮಿ ಕೇಳಬಹುದು” ಎಂದು ಹೈಕೋರ್ಟ್ ಸೂಚಿಸಿದೆ.

ಜೈನ ಸಮುದಾಯವೂ ಹಕ್ಕು ಮಂಡನೆ
ವಿವಾದದಲ್ಲಿ ಜೈನ ಸಮುದಾಯವೂ ಭಾಗಿಯಾಗಿದ್ದು, “ಇದು ಮೂಲತಃ ಜೈನ ಗುರುಕುಲ ಮತ್ತು ದೇವಾಲಯ” ಎಂದು ವಾದ ಮಂಡಿಸಿತ್ತು. ಆದರೆ ಕೋರ್ಟ್‌ ಮುಖ್ಯವಾಗಿ ಪುರಾತತ್ವ ಮತ್ತು ಐತಿಹಾಸಿಕ ದಾಖಲೆಗಳ ಆಧಾರದಲ್ಲಿ ತೀರ್ಪು ನೀಡಿದೆ.

ಲಂಡನ್‌ನಲ್ಲಿರುವ ಸರಸ್ವತಿ ಮೂರ್ತಿ
ಭೋಜ್‌ಶಾಲಾದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಸರಸ್ವತಿ ದೇವಿಯ ಮೂರ್ತಿ ಸದ್ಯ British Museum ನಲ್ಲಿ ಇದೆ ಎನ್ನಲಾಗಿದೆ. ಈ ಮೂರ್ತಿಯನ್ನು ಭಾರತಕ್ಕೆ ಮರಳಿ ತರಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...