ಬೆಂಗಳೂರು: ಹೇಮಾವತಿ ಕೆನಾಲ್ ಸಂಬಂಧ ಪಟ್ಟಂತೆ ಡಿಸಿಎಂ ಡಿಕೆ ಶಿವಕುಮಾರ್ ಅವರು, ಅಪ್ಡೇಟ್ ನೀಡಿದ್ದಾರೆ. 30 ತಾರೀಖು ಹೇಮಾವತಿ ಕೆನಾಲ್ ಬಗ್ಗೆ ಮೀಟಿಂಗ್ ಇಟ್ಟಿದ್ದೆವಹ. ಸೋಮಣ್ಣ ಅವರು ಈಗ ತಾನೇ ಮನವಿ ಮಾಡಿದ್ದಾರೆ, 4 ಅಥವಾ 5 ನೇ ತಾರೀಖು ಇಟ್ಕೊಳಿ ಅಂದಿದ್ದಾರೆ. ಹಾಗಾಗಿ ಆ ಸಮಯಕ್ಕೆ ನಾವೂ ಪ್ಲ್ಯಾನ್ ಮಾಡುತ್ತೇವೆ. ಅವರು ಎಂಪಿ ಆಗಿರುವ ಕಾರಣ ಸಭೆಯನ್ನ ಮುಂದೂಡಿ ಎಂದು ಹೇಳಿದ್ದೇವೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ನಡೆಯುವ ಹೇಮಾವತಿ ಕೆನಾಲ್ ಬಗ್ಗೆ ಏನೆಲ್ಲಾ ಚರ್ಚೆಯಾಗುತ್ತೆ, ಏನು ನಿರ್ಧಾರವಾಗುತ್ತೆ ಎಂಬುದನ್ನ ನೋಡಬೇಕಿದೆ.
ಇದೇ ವೇಳೆ ಎತ್ತಿನಹೊಳೆ ಪ್ರಾಜೆಕ್ಟ್ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಸಿಎಂ ಅವರು ಬೇರೆ ಕೆಲಸ ಇಲ್ಲ ನಿಲ್ಸಿ ಮಾಡಿ ಎಂದಿದ್ದಾರೆ. ಇವತ್ತು ಆ ಕಂಟ್ರಾಕ್ಟರ್ಸ್ ಗಳ ಮೀಟಿಂಗ್ ಕರೆದಿದ್ದೆ, ಪರಮೇಶ್ವರ್ ಅವರು ಇಲ್ಲ ಎಂಬ ಕಾರಣಕ್ಕೆ ನಾಳೆ, ನಾಡಿದ್ದಿಗೆ ಬೆಂಗಳೂರಿಗೆ ಆ ಸಭೆಯನ್ನ ಶಿಫ್ಟ್ ಮಾಡಿದ್ದೇವೆ. ಆ ಸ್ಪಾಟ್ ಗೆ ಹೋಗ್ತಾ ಇದ್ದೀನಿ. ಅಲ್ಲಿ ಏನೆಲ್ಲಾ ಸಮಸ್ಯೆಗಳಿದಾವೆ ಅನ್ನೋದನ್ನ ನೋಡಿಕೊಂಡು ಬರ್ತೇನೆ.
ಈಗಾಗಲೇ ನಾನು ದೊಡ್ಡಬಳ್ಳಾಪುರ ಸೇರಿದಂತೆ ಹಲವು ಕಡೆ ಸ್ಥಳಕ್ಕೆ ಹೋಗಿದ್ದೇನೆ. ಪರಮೇಶ್ವರ್ ಕೂಡ ಬಂದಿದ್ರು. ಟೆಕ್ನಿಕಲ್ ಪಾಸಿಬಲಿಟಿ ನೋಡ್ತಾ ಇದ್ದೀವಿ. ಯಾವ ರೀತಿಯಾಗಿ ಅಲ್ಲಿ ನೀರನ್ನ ಸ್ಟೋರೇಜ್ ಮಾಡಬಹುದು ಎಂಬುದೆಲ್ಲವನ್ನು ಸಂಬಂಧಪಟ್ಟವರ ಬಳಿ ಅಭಿಪ್ರಾಯವನ್ನ ಕೇಳಿದ್ದೀವಿ. ಅಲ್ಲಿನ ಜನರು ತಮ್ಮ ನೋವನ್ನ ಹೇಳಿಕೊಳ್ಳುತ್ತಾರೆ. ಎರಡ್ಮೂರು ಕೆರೆಗಳನ್ನು ಹೇಳಿದ್ದಾರೆ. ಕೊರಟಗೆರೆಯವರು ಕೂಡ ಹೇಳಿದ್ದಾರೆ. ಅದನ್ನ ಪರಿಶೀಲನೆ ಮಾಡಬೇಕು ಎಂದಿದ್ದಾರೆ.







