ಬಿರು ಬೇಸಿಗೆಯ ನಡುವೆ ಮಳೆಯ ಅಬ್ಬರ ; ವಾಣಿ ವಿಲಾಸ ಸೇರಿದಂತೆ ಯಾವ ಜಲಾಶಯದಲ್ಲಿ ಎಷ್ಟಿದೆ ನೀರು..?

1 Min Read

ಚಿತ್ರದುರ್ಗ; ಬಿರು ಬೇಸಿಗೆಯಲ್ಲಿ ಬೆಂದಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಮಳೆರಾಯನ ಆಗಮನದಿಂದ ಭೂಮಿಯೂ ತಂಪಾಗಿದೆ. ಕಳೆದ ಬಾರಿ ಮುಂಗಾರು ಹಾಗೂ ಹಿಂಗಾರು ಮಳೆ ಉತ್ತಮವಾಗಿತ್ತು. ಹೀಗಾಗಿ ಜಲಾಶಯಗಳೆಲ್ಲಾ ಭರ್ತಿಯಾಗಿದ್ದವು. ಬಳಿಕ ಬೇಸಿಗೆಯ ಕಾಲಕ್ಕೆ ಒಂದಷ್ಟು ನೀರು ಖರ್ಚಾಗಿದೆ. ಈಗ ಮತ್ತೆ ಮಳೆಯಾಗುತ್ತಿದೆ. ಹಾಗಾದ್ರೆ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ ಎಂಬುದನ್ನ ನೋಡೋಣಾ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ವಾಣಿವಿಲಾಸ ಸಾಗರ ಜಲಾಶಯ ಈ ಬಾರಿ ಮೂರನೇ ಬಾರಿಗೆ ಕೋಡಿ ಬಿದ್ದಿತ್ತು. ಬಾಗಿನ ಅರ್ಪಿಸಿ ಜಿಲ್ಲೆಯ ಜನ ಎಂಜಾಯ್ ಕೂಡ ಮಾಡಿದ್ದರು. ವಾಣಿವಿಲಾಸ ಸಾಗರದ ಇಂದಿನ ನೀರಿನ ಮಟ್ಟವನ್ನು ನೋಡುವುದಾದರೆ, ಗರಿಷ್ಠ ನೀರಿನ ಮಟ್ಟ 2140 ಅಡಿ ಅಂದ್ರೆ 30.42 ಟಿಎಂಸಿ. ಇಂದಿನ ನೀರಿನ ಮಟ್ಟ 2137.15 ಅಡಿ ಅಂದರೆ 38.01 ಟಿಎಂಸಿ ನೀರು ಇದೆ. ಒಳಹರಿವು 0 ಕ್ಯೂಸೆಕ್ ಒದೆ. ಹೊರ ಹರಿವು 145 ಕ್ಯೂಸೆಕ್ ಇದೆ.

ಭದ್ರಾ ಜಲಾಶಯದಲ್ಲಿ ಗರಿಷ್ಠ ನೀರಿನ ಮಟ್ಟ 2158 ಅಡಿ ಅಂದ್ರೆ 71.54 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 2125.64 ಅಡಿ ಅಂದ್ರೆ 37.28 ಟಿಎಂಸಿ ಇದೆ. ಒಳಹರಿವು 128 ಕ್ಯೂಸೆಕ್ಸ್ ಇದ್ರೆ, 5220 ಕ್ಯೂಸೆಕ್ಸ್ ಹೊರ ಹರಿವು ಇದೆ.

ಇ‌್ನು ತುಂಗಾ ಭದ್ರಾ ಜಲಾಶಯದ ನೀರಿನ ಮಟ್ಟವನ್ನು ನೋಡುವುದಾದರೆ, ಗರಿಷ್ಠ ನೀರಿನ ಮಟ್ಟ ಬಂ್ಉ 1633 ಅಡಿ ಅಂದ್ರೆ 105.79 ಟಿಎಂಸಿ ನೀರಿನ ಸಾಮರ್ಥ್ಯವನ್ನು ಹೊಂದಿದೆ. ಇಂದಿನ ನೀರಿನ ಮಟ್ಟ 1584.86 ಅಡಿ ಇದೆ. ಅಂದ್ರೆ 7.23 ಟಿಎಂಸಿ ನೀರಿದೆ. ಒಳಹರಿವು 0 ಆಗಿದ್ದು, ಹೊರ ಹರಿವು 4729 ಕ್ಯೂಸೆಕ್ಸ್ ಇದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks