ಬಿಜೆಪಿಗೆ ಹೋಗಬೇಡಿ ಎಂದಿದ್ದಾರೆ : ಜಿ ಟಿ ದೇವೇಗೌಡ

1 Min Read

ಮೈಸೂರು: ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಬಗ್ಗೆ ಜಿ ಟಿ ದೇವೇಗೌಡ ಮಾತನಾಡಿದ್ದು, ಸಿದ್ದರಾಮಯ್ಯ ಅವರು ನನ್ನನ್ನು ಕಾಂಗ್ರೆಸ್ ಗೆ ಬಾ ಎಂದು ಕರೆದಿಲ್ಲ. ಆದರೆ ಬಿಜೆಪಿಗೆ ಹೋಗಬೇಡಿ ಎಂದು ಹೇಳಿದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷರು ನನ್ನನ್ನು ಕಾಂಗ್ರೆಸ್ ಗೆ ಬಾ ಎಂದು ಕರೆದಿದ್ದಾರೆ ಎಂದಿದ್ದಾರೆ.

ನನ್ನ ಮತದಾರರು ಏನನ್ನು ಹೇಳುತ್ತಾರೋ ಅದನ್ನೇ ಮಾಡುತ್ತೇನೆ. ಜೆಡಿಎಸ್ ನಲ್ಲಿಯೇ ಇರಿ ಎಂದರೂ ಅಲ್ಲಿಯೇ ಇರುತ್ತೇನೆ. ಕಾಂಗ್ರೆಸ್ ಗೆ ಹೋಗು ಎಂದರೂ ಆ ಕಡೆಗೆ ಹೋಗುತ್ತೇನೆ. ಮತದಾರರೇ ನನಗೆ ಮುಖ್ಯ. ಅತ್ತ ಸಿದ್ದರಾಮಯ್ಯ ಅವರು ಜೆಡಿಎಸ್ ನಲ್ಲೆ ಇರು ಅಥವಾ ಬಿಟ್ಟು ಬಾ ಅಂತ ಕೂಡ ಹೇಳಿಲ್ಲ. ಆದರೆ ಬಿಜೆಪಿಗೆ ಮಾತ್ರ ಹೋಗಬೇಡ ಎಂದಿದ್ದಾರೆ.

ಹುಣಸೂರು ಮತ್ತು ಚಾಮುಂಡಿ ಕ್ಷೇತ್ರ ನಮ್ಮದೇ. ಸಿದ್ದರಾಮಯ್ಯ ಅವರಿಗೆ ಈಗ ಅರಿವಾಗಿದೆ. ಕಳೆದ ಬಾರಿಯೇ ನಾನು ಸ್ಪರ್ಧಿಸಬಾರದಿತ್ತು, ನಾನು ತಪ್ಪು ಮಾಡಿದೆ ಎಂದು ಗೊತ್ತಾಗಿದೆ. ಹೀಗಾಗಿ ಅವರು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬರುವುದಿಲ್ಲ. ಕಳೆದ ಬಾರಿ ವಿಶ್ವನಾಥ್ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರ ಬಿಟ್ಟುಕೊಟ್ಟಿದ್ದೆವು ಅಷ್ಟೇ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *