ಹಾಸನ: ತಟಯಿ ಹಾಸನಾಂಬೆ ವರ್ಷಕ್ಕೆ ಒಂದೇ ಬಾರಿ ಬಾಗಿಲು ತೆರೆದು ಭಕ್ತರಿಗೆ ತನ್ನ ದರ್ಶನ ಭಾಗ್ಯವನ್ನ ಕರುಣಿಸುವುದು. ಈ ಬಾರಿ ಲಕ್ಷಾಂತರ ಮಂದಿ ದೇವಿಯ ದರ್ಶನವನ್ನ ಪಡೆದುಕೊಂಡಿದ್ದಾರೆ. ಇಂದು ಹಾಸಾಂಬೆ ದೇವಸ್ಥಾನದ ಬಾಗಿಲನ್ನ ಶಾಸ್ತ್ರೋಕ್ತವಾಗಿ ಮುಚ್ಚಲಾಗಿದೆ. ಹತ್ತೇ ದಿನಕ್ಕೆ ಕೋಟಿ ಕೋಟಿ ಕಾಣಿಕೆ ಸಂಗ್ರಹವಾಗುವ ಮೂಲಕ ದಾಖಲೆ ಬರೆದಿತ್ತು.
ಹಾಸನಾಂಬೆಗೆ ಜಿಲ್ಲಾಧಿಕಾರಿ ಲತಾ ಕೊಂಡ ಹಾಯುವ ಮೂಲಕ ಭಕ್ತಿಯನ್ನ ಅರ್ಪಿಸಿದರು. ಅಕ್ಟೋಬರ್ 9ರಿಂದ ಆರಂಭವಾಗಿದ್ದ ಹಾಸನಾಂಬೆಯ ದರ್ಶನೋತ್ಸವ ಇಂದು ಸಂಪನ್ನಗೊಂಡಿದೆ. ಮಧ್ಯಾಹ್ನ 12 ಗಂಟೆ ವೇಳೆಗೆ ಪೂಜೆ ಸಲ್ಲಿಸಿ, ದೇವಸ್ಥಾನದ ಬಾಗಿಲನ್ನ ಹಾಕಲಾಗಿದೆ. ಈಗಾಗಲೇ 24 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ ಮಾಹಿತಿ ನೀಡಿದ್ದಾರೆ.
ಅಷ್ಟೇ ಅಲ್ಲ ಟಿಕೆಟ್ ಮತ್ತು ಲಡ್ಡು ಮಾರಾಟದಲ್ಲಿ ಈ ಬಾರಿ 22 ಕೋಟಿಗೂ ಅಧಿಕ ಆದಾಯ ಬಂದಿರುವುದಾಗಿ ಹೇಳಿದ್ದಾರೆ. ಸುಗಮ ದರ್ಶನಕ್ಕೆ ಸಚಿವ ಕೃಷ್ಣ ಭೈರೇಗೌಡ ಅವರು ಮಾಡಿದ ವಿನೂತನ ಪ್ರಯೋಗ ಯಶಸ್ವಿಯಾಗಿದ್ದು, ಎಲ್ಲರು ದೇವಿಯ ದರ್ಶನ ಮಾಡುವುದಕ್ಕೆ ಸುಲಭವಾಗಿತ್ತು. ಈ ಹಿಂದಿನ ಎಲ್ಲಾ ಅವ್ಯವಸ್ಥೆಗೆ ಕಡಿವಾಣ ಹಾಕಿ, ಸಾರ್ವಜನಿಕರಿಗೆ ಆದ್ಯತೆ ಕೊಡಬೇಕು ಎಂದಾಗ ಎಲ್ಲಾ ಶಾಸಕರು, ಸದಸ್ಯರು ಸಪೋರ್ಟಚ ಮಾಡಿದರು. ಜನರು, ಅಧಿಕಾರಿಗಳು ಸಪೋರ್ಟ್ ಮಾಡಿದರು. ನನಗೆ ಹಾಸನದ ಅನುಭವ ಕಡಿಮೆಯಾದರು ಎರಡು ತಿಂಗಳಲ್ಲಿ ನೋಡಿದಾಗ ಜನ ನಮಗೆ ಸಹಕಾರ ಕೊಟ್ಟಿದ್ದಾರೆ. ಅವರ ಸಹಕಾರದಿಂದಲೇ ಹಾಸನಾಂಬೆ ದರ್ಶನ ಯಶಸ್ವಿಯಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಸಂತಸ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಮೊದಲ ವಾರ ಕಾಣಿಕೆ ಹುಂಡಿ ಎಣಿಸಿದ್ದು, ಹತ್ತು ಕೋಟಿಯಷ್ಟು ಕಾಣಿಕೆ ಸಂಗ್ರಹವಾಗಿತ್ತು. ಈಗ ಲಡ್ಡು ಹಾಗೂ ಟಿಕೆಟ್ ಮಾರಾಟದಿಂದಾನೂ ಕೋಟಿ ಕೋಟಿ ಸಂಗ್ರಹವಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










