ಅಹಮದಾಬಾದ್ : ಗುಜರಾತ್ ಚುನಾವಣೆಯ ಪ್ರಚಾರ ಅಬ್ಬರದಿಂದ ಸಾಗುತ್ತಿದೆ. ಗುಜರಾತ್ ಚುನಾವಣಾ ಪ್ರಚಾರದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಪಾಲ್ಗೊಂಡಿದ್ದರು. ಈ ವೇಳೆ ಕಾಂಗ್ರೆಸ್ ಮೇಲೆ ಹರಿಹಾಯ್ದಿದ್ದಾರೆ. ಗಾಂಧಿ ಕನಸನ್ನು ನಾವೂ ನನಸು ಮಾಡುತ್ತೇವೆ. ಕಾಂಗ್ರೆಸ್ ವಿಸರ್ಜಿಸುತ್ತೇವೆ ಎಂದಿದ್ದಾರೆ.
ಗಾಂಧಿ ಕನಸು ಬೇರೆಯದ್ದೇ ಆಗಿತ್ತು. ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ವಿಸರ್ಜಿಸಬೇಕೆಂದು ಗಾಂಧಿ ಅವರು ಸೂಚಿಸಿದ್ದರು. ಅಧಿಕಾರದ ಆಸೆಗೆ ಅದನ್ನು ಮುಂದುವರೆಸಲಾಯಿತು. ಆದ್ರೆ ಕಾಂಗ್ರೆಸ್ ಎಂದು ಜನರ ಕಷ್ಟಕ್ಕೆ ಸ್ಪಂದಿಸಿಲ್ಲ. ಕಾಂಗ್ರೆಸ್ ಭಿನ್ನವಾಗಿ ಬಿಜೆಪಿ ಯಾವಾಗಲೂ ಯೋಚಿಸುತ್ತದೆ. ಕೊರೊನಾ ಕಾಲದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ದರೆ ಚಿಕಿತ್ಸೆ ಮತ್ತು ಲಸಿಕೆಗಾಗಿ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಾ ಇತ್ತು.
ಈಗ ಬಾಪು ಅವರ ಕನಸನ್ನು ನಾವೂ ನನಸು ಮಾಡುತ್ತೇವೆ. ಜನರಿಂದ ಬಿಜೆಪಿಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಹೀಗಾಗಿ ಕಾಂಗ್ರೆಸ್ ವಿಸರ್ಜಿಸುವ ಬಾಪು ಕನಸನ್ನು ನನಸು ಮಾಡುತ್ತೇವೆ ಎಂದಿದ್ದಾರೆ.