ಗಣಪತಿ‌ ಸ್ವಾಮೀಜಿ ಧರ್ಮದ ಬಗ್ಗೆ ಕಾಳಜಿ ಹೊಂದಿದ್ದಾರೆ : ತ್ರಿದಂಡಿ ಸ್ವಾಮೀಜಿ

suddionenews
1 Min Read

ಮೈಸೂರು: ಗಣಪತಿ ಸಚ್ಚಿದಾನಂದಶ್ರೀ ಹುಟ್ಟುಹಬ್ಬದ ಪ್ರಯುಕ್ತ ತ್ರಿದಂಡಿ ಸ್ವಾಮೀಜಿಗಳು ಅವರ ಬಗ್ಗೆ ಉತ್ತಮ ಮಾತುಗಳನ್ನು ಹಾಡಿದ್ದಾರೆ. ಪೌರಕರ್ಮಿಕರಿಗೆ ದೇವಸ್ಥಾನ ಕಟ್ಟಿಕೊಡುವುದು ದೊಡ್ಡದಲ್ಲ. ಸಂಸ್ಕಾರ ಕೊಡುವುದು ದೊಡ್ಡ ಕೆಲಸ ಎಂದು ಮೈಸೂರಿನಲ್ಲಿ ತ್ರಿದಂಡಿ ಚಿನ್ನಜೀಯಾರ್ ಸ್ವಾಮೀಜಿ ಹೇಳಿದ್ದಾರೆ.

ಗಣಪತಿ ಸಚ್ಚಿದಾನಂದಶ್ರೀ ಉತ್ತಮ ಕೆಲಸ ಮಾಡುತ್ತಿದ್ದಾರೆ. ಪೌರಕಾರ್ಮಿಕರ ಉತ್ತಮ ಜೀವನಕ್ಕೆ ನೆರವಾಗಿದ್ದಾರೆ. ಅವರು ಸಾತ್ವಿಕ ಜೀವನ ನಡೆಸಲು ನೆರವಾಗಿದ್ದಾರೆ. ಸಚ್ಚಿದಾನಂದಶ್ರೀ ಸ್ವಾಮಿಗಳು ನಮ್ಮ ಧರ್ಮದ ಬಗ್ಗೆ ಕಾಳಜಿ ಹೊಂದಿದ್ದಾರೆ. ಆರೋಗ್ಯವನ್ನು ಲೆಕ್ಕಿಸದೆ ಧಾರ್ಮಿಕ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ಹಿಮಾಲಯದ ಕಠಿಣ ಪರಿಸ್ಥಿತಿಯಲ್ಲೂ ತಪಸ್ಸು ಮಾಡಿದ್ದಾರೆ.‌ ಗಣಪತಿ ಸಚ್ಚಿದಾನಂದಶ್ರೀ ಮೋಡದಂತೆ ಕೆಲಸ ಮಾಡುತ್ತಿದ್ದಾರೆ.‌ ಮಂಗಳಶಾಸನಂ ಮೂಲಕ ಗಣಪತಿ ಸಚ್ಚಿನಾಂದಶ್ರೀಗೆ ಹುಟ್ಟುಹಬ್ಬದ ಶುಭಾಶಯಗಳು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *