ತಾತನಿಂದ ವಾಮಾಚಾರ ಕಲಿತಿದ್ದ ಅಪ್ರಾಪ್ತ: ಲಾಭಕ್ಕೆ ಸ್ನೇಹಿತನೇ ಬಲಿ..!

1 Min Read

 

ಮೈಸೂರು: ವಾಮಚಾರ ಅನ್ನೋದು ಮನುಷ್ಯನನ್ನ ಅದೆಷ್ಟು ಕೆಟ್ಟ ಹಂತಕ್ಕೆ ತೆಗೆದುಕೊಂಡು ಹೋಗಿ ಬಿಡುತ್ತೆ. ಕೊಲೆ ಮಾಡೋದಕ್ಕೂ ಸ್ಪೂರ್ತಿ ನೀಡಿ ಬಿಡುತ್ತೆ. ಇದೀಗ ಅಂತದ್ದೇ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಇನ್ನು ಬಾಳಿ ಬದುಕಬೇಕಾದ 16 ವರ್ಷದ ಮಹೇಶ್ ಅಲಿಯಾಸ್ ಮನು ವಾಮಾಚಾರಕ್ಕೆ ಬಲಿಯಾಗಿದ್ದಾನೆ. ಸ್ನೇಹಿತರೆ ಹೊಂಚು ಹಾಕಿ ವಾಮಾಚಾರದ ಹೆಸರಲ್ಲಿ ಬಲಿ ಕೊಟ್ಟಿದ್ದಾರೆ. ಈ ಪ್ರಕರಣ ಸಂಬಂಧ ಕೌಲಂದೆ ಪೊಲೀಸರು ಅಪ್ರಾಪ್ತರನ್ನ ಬಂಧಿಸಿದ್ದಾರೆ.

ನಿನ್ನೆ ಧನುರ್ಮಾಸದ ಅಮಾವಾಸ್ಯೆ ಇತ್ತು. ಈ ಹಿನ್ನೆಲೆ ಮೃತ ಮಹೇಶ್ ಹಾಗೂ ಬಂಧಿತರಾಗಿರುವ ಮೂವರು ಆರೋಪಿಗಳು ನಂಜನಗೂಡಿನ ಹಳೇಪುರ ಗ್ರಾಮದ ಕೆರೆಯ ಬಳಿ ಹೋಗಿದ್ದಾರೆ. ಈ ವೇಳೆ ಆರೋಪಿಗಳಲ್ಲಿ ಒಬ್ಬ ತನ್ನ ತಾತನಿಂದ ಕಲಿತ ವಾಮಾಚಾರವನ್ನ ಪ್ರಯೋಗಿಸಿದ್ದಾನೆ. ಧನುರ್ಮಾಸದ ದಿನ ಬಲಿ ಕೊಟ್ಟರೆ ಇಷ್ಟಾರ್ಥಗಳು ನೆರವೇರುತ್ತೆ ಅನ್ನೋ ನಂಬಿಕೆಯಿಂದ ಮಹೇಶ್ ನನ್ನ ಪುಸಲಾಯಿಸಿದ್ದಾರೆ.

ಬಳಿಕ ಕೆರೆ ಬಳಿ ಗೊಂಬೆಯನ್ನೆಲ್ಲಾ ಮಾಡಿ, ಭೀಕರ ಪೂಜೆ ಪುನಸ್ಕಾರ ಮಾಡಿ, ಮಹೇಶ್ ನನ್ನು ಕೆರೆಗೆ ತಳ್ಳಿದ್ದಾರೆ. ಬಳಿಕ ಹೆದರಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ನೇಹಿತನೊಬ್ಬ ಗ್ರಾಮಸ್ಥರಿಗೆ ಈ ಬಗ್ಗೆ ಮಾಹಿತಿ ತಿಳಿಸಿದಾಗ ಕೆರೆಯಲ್ಲಿ ಹೋಗಿ ಸರ್ಚ್ ಮಾಡಿದ್ದಾರೆ. ಆಗ ಘಟನೆ ಬೆಳಕಿಗೆ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *