Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ತಾತನಿಂದ ವಾಮಾಚಾರ ಕಲಿತಿದ್ದ ಅಪ್ರಾಪ್ತ: ಲಾಭಕ್ಕೆ ಸ್ನೇಹಿತನೇ ಬಲಿ..!

Facebook
Twitter
Telegram
WhatsApp

 

ಮೈಸೂರು: ವಾಮಚಾರ ಅನ್ನೋದು ಮನುಷ್ಯನನ್ನ ಅದೆಷ್ಟು ಕೆಟ್ಟ ಹಂತಕ್ಕೆ ತೆಗೆದುಕೊಂಡು ಹೋಗಿ ಬಿಡುತ್ತೆ. ಕೊಲೆ ಮಾಡೋದಕ್ಕೂ ಸ್ಪೂರ್ತಿ ನೀಡಿ ಬಿಡುತ್ತೆ. ಇದೀಗ ಅಂತದ್ದೇ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಇನ್ನು ಬಾಳಿ ಬದುಕಬೇಕಾದ 16 ವರ್ಷದ ಮಹೇಶ್ ಅಲಿಯಾಸ್ ಮನು ವಾಮಾಚಾರಕ್ಕೆ ಬಲಿಯಾಗಿದ್ದಾನೆ. ಸ್ನೇಹಿತರೆ ಹೊಂಚು ಹಾಕಿ ವಾಮಾಚಾರದ ಹೆಸರಲ್ಲಿ ಬಲಿ ಕೊಟ್ಟಿದ್ದಾರೆ. ಈ ಪ್ರಕರಣ ಸಂಬಂಧ ಕೌಲಂದೆ ಪೊಲೀಸರು ಅಪ್ರಾಪ್ತರನ್ನ ಬಂಧಿಸಿದ್ದಾರೆ.

ನಿನ್ನೆ ಧನುರ್ಮಾಸದ ಅಮಾವಾಸ್ಯೆ ಇತ್ತು. ಈ ಹಿನ್ನೆಲೆ ಮೃತ ಮಹೇಶ್ ಹಾಗೂ ಬಂಧಿತರಾಗಿರುವ ಮೂವರು ಆರೋಪಿಗಳು ನಂಜನಗೂಡಿನ ಹಳೇಪುರ ಗ್ರಾಮದ ಕೆರೆಯ ಬಳಿ ಹೋಗಿದ್ದಾರೆ. ಈ ವೇಳೆ ಆರೋಪಿಗಳಲ್ಲಿ ಒಬ್ಬ ತನ್ನ ತಾತನಿಂದ ಕಲಿತ ವಾಮಾಚಾರವನ್ನ ಪ್ರಯೋಗಿಸಿದ್ದಾನೆ. ಧನುರ್ಮಾಸದ ದಿನ ಬಲಿ ಕೊಟ್ಟರೆ ಇಷ್ಟಾರ್ಥಗಳು ನೆರವೇರುತ್ತೆ ಅನ್ನೋ ನಂಬಿಕೆಯಿಂದ ಮಹೇಶ್ ನನ್ನ ಪುಸಲಾಯಿಸಿದ್ದಾರೆ.

ಬಳಿಕ ಕೆರೆ ಬಳಿ ಗೊಂಬೆಯನ್ನೆಲ್ಲಾ ಮಾಡಿ, ಭೀಕರ ಪೂಜೆ ಪುನಸ್ಕಾರ ಮಾಡಿ, ಮಹೇಶ್ ನನ್ನು ಕೆರೆಗೆ ತಳ್ಳಿದ್ದಾರೆ. ಬಳಿಕ ಹೆದರಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ನೇಹಿತನೊಬ್ಬ ಗ್ರಾಮಸ್ಥರಿಗೆ ಈ ಬಗ್ಗೆ ಮಾಹಿತಿ ತಿಳಿಸಿದಾಗ ಕೆರೆಯಲ್ಲಿ ಹೋಗಿ ಸರ್ಚ್ ಮಾಡಿದ್ದಾರೆ. ಆಗ ಘಟನೆ ಬೆಳಕಿಗೆ ಬಂದಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದಿನಪತ್ರಿಕೆಗಳಲ್ಲಿ ಕಟ್ಟಿಕೊಡುವ ಬಿಸಿ ತಿಂಡಿ ತಿಂದ್ರೆ ಕ್ಯಾನ್ಸರ್ ಬರುತ್ತೆ ಎಚ್ಚರ..!

ಪ್ಲಾಸ್ಟಿಕ್ ಕವರ್ ಅನ್ನು ಬ್ಯಾನ್ ಮಾಡಿ ಬಹಳ ವರ್ಷಗಳೇ ಕಳೆದಿವೆ. ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ಮನುಷ್ಯನ ಆರೋಗ್ಯಕ್ಕೆ ಖಂಡಿತ ಕುತ್ತು ಬರಲಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೊಟೇಲ್ ಗಳಲ್ಲಿ ಪ್ಲಾಸ್ಟಿಕ್ ಕವರ್ ಗಳನ್ನು

ಈ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ ಯಾರೋ ಮಾಡಿರೋ ತಪ್ಪಿಗೆ ನೀವೇ ನೇರ ಹೊಣೆಗಾರಿಕೆ

ಈ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ ಯಾರೋ ಮಾಡಿರೋ ತಪ್ಪಿಗೆ ನೀವೇ ನೇರ ಹೊಣೆಗಾರಿಕೆ, ಈ ಪಂಚ ರಾಶಿಗಳ ಮದುವೆ ವಿಳಂಬವೇ? ಶನಿವಾರ ರಾಶಿ ಭವಿಷ್ಯ -ಏಪ್ರಿಲ್-27,2024 ಸೂರ್ಯೋದಯ: 05:56, ಸೂರ್ಯಾಸ್ತ : 06:31 ಶಾಲಿವಾಹನ

ಆ ಕುಗ್ರಾಮ ಒಂದರಲ್ಲೇ 100% ಮತದಾನ : ಎಲ್ಲಿ, ಎಷ್ಟೆಷ್ಟು ಮತದಾನವಾಗಿದೆ..?

ಬೆಂಗಳೂರು: ಇಂದು ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆದಿದೆ. ಬೆಳಗ್ಗೆ 7 ಗಂಟೆಗೆ ಶುರುವಾದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಗಿದೆ. ಬೇಸರದ ಸಂಗತಿ ಎಂದರೆ ಈ ಬಾರಿಯೂ ಸಂಪೂರ್ಣ ಮತದಾನವಾಗಿಲ್ಲ. ಪ್ರತಿ

error: Content is protected !!