ಸುದ್ದಿಒನ್, ಜಗಳೂರು, ಮಾರ್ಚ್. 14 : ಶ್ರೀ ಶರಣ ಬಸವೇಶ್ವರ ದಾಸೋಹ ಮಠ, ದೊಣ್ಣೆಹಳ್ಳಿ, ಸರ್ಕಾರಿ ದಂತ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು ಹಳೇ ವಿದ್ಯಾರ್ಥಿಗಳ ಸಂಘ ಮತ್ತು ಪ್ರಾಸ್ಥೋಡಾಂಟಿಕ್ಸ್ ವಿಭಾಗ, ಸರ್ಕಾರಿ ದಂತ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು, ಇವರ ಸಹಯೋಗದಲ್ಲಿ ಇದೇ ಮಾರ್ಚ್ 22 ಮತ್ತು 23 ರಂದು ಉಚಿತ ದಂತ ಪಂಕ್ತಿ ಜೋಡಣಾ ಶಿಬಿರ ಆಯೊಜಿಸಲಾಗಿದೆ.
ಸ್ಥಳ: ಶರಣ ಬಸವೇಶ್ವರ ಪ್ರೌಢಶಾಲೆ, ದೊಣ್ಣೆಹಳ್ಳಿ, ಜಗಳೂರು, ತಾಲ್ಲೂಕು ದಿನಾಂಕ: 22 ಮತ್ತು 23 ನೇ ಮಾರ್ಚ್ 2025
ಒಂದೂ ಹಲ್ಲು ಇಲ್ಲದವರು ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ!
✅ ನಿಶುಲ್ಕವಾಗಿ(ಉಚಿತವಾಗಿ) ಉತ್ತಮ ಗುಣಮಟ್ಟದ ದಂತ ಪಂಕ್ತಿಗಳ ಜೋಡಣೆ
✅ ನಿಪುಣ ದಂತವೈದ್ಯರಿಂದ ತಜ್ಞ ಸಲಹೆ ಮತ್ತು ಚಿಕಿತ್ಸಾ ಸೇವೆಗಳು
✅ ಪೂರ್ಣ ಹಲ್ಲು ಕಳೆದುಕೊಂಡ ಗ್ರಾಮಸ್ಥರಿಗೆ ವಿಶೇಷ ಶಿಬಿರ
ದೊಣ್ಣೆಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಪ್ರಕಟಣೆ ತಿಳಿಸಿದೆ. ತಕ್ಷಣವೇ ನೋಂದಾಯಿಸಿ!

ನೋಂದಾಯಿಸಲು ಸಂಪರ್ಕಿಸಿ: ಮೊ. 9845203217
ಶರಣ ಬಸವೇಶ್ವರ ಪ್ರೌಢಶಾಲೆ, ದೊಣ್ಣೆಹಳ್ಳಿ










