ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 26 : ಆರ್ಯವೈಶ್ಯ ಅಧಿಕಾರಿಗಳ ಹಾಗೂ ವೃತ್ತಿನಿರತರ ಸಂಘ ಚಿತ್ರದುರ್ಗ ವತಿಯಿಂದ ದಸರಾ ಹಬ್ಬದ ಪ್ರಯುಕ್ತ ನಾಗರೀಕರಿಗೆ ಉಚಿತವಾಗಿ ಬೊಂಬೆಗಳ ಪ್ರದರ್ಶನಕ್ಕೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಬೊಂಬೆಗಳನ್ನು ಕೂರಿಸಿರುವವರು ಮನೆಯ ವಿಳಾಸ, ಫೋನ್ ನಂಬರ್, ಲೋಕೇಶನ್ನೊಂದಿಗೆ ದಿನಾಂಕ : 27-9-2025 ರೊಳಗೆ ನಮ್ಮ ಸಂಚಾಲಕರಿಗೆ ಹೆಸರುಗಳನ್ನು ನೊಂದಾಯಿಸಬಹುದಾಗಿದೆ. ಸೆ.29 ರಂದು ಬೆಳಿಗ್ಗೆ 8 ಗಂಟೆಗೆ ವಾಸವಿ ಮಹಲ್ ರಸ್ತೆಯಲ್ಲಿರುವ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಸ್ಪರ್ಧೆಯಲ್ಲಿ ಆಯ್ಕೆಯಾದವರಿಗೆ ಬಹುಮಾನಗಳನ್ನು ನೀಡಲಾಗುವುದು.
ಮೊದಲನೆ ಬಹುಮಾನ : 3000 ರೂ. ಎರಡನೆ ಬಹುಮಾನ : 2000 ರೂ. ಮೂರನೆ ಬಹುಮಾನ : 1000 ರೂ.ಗಳನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ : 9916277218, 9448588849 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಚಾಲಕರಾದ ಪಿ.ಎನ್.ಮೋಹನ್ಕುಮಾರ್ಗುಪ್ತ ತಿಳಿಸಿದ್ದಾರೆ.


