ಒತ್ತಡಕ್ಕೆ ಮಣಿದು ವಿಜಯೇಂದ್ರ ಸ್ಪರ್ಧೆ ಬಗ್ಗೆ ಮಾತನಾಡಿದೆ : ಬಿಎಸ್ವೈ ಇವತ್ತು ಹಿಂಗಂದಿದ್ಯಾಕೆ..?

1 Min Read

ಬೆಂಗಳೂರು: ಶಿಕಾರಿಪುರವನ್ನು ಮಗನಿಗಾಗಿ ಬಿಡುತ್ತಿದ್ದೇನೆ. ವಿಜಯೇಂದ್ರ ಮುಂದಿನ ಚುನಾವಣೆಯಲ್ಲಿ ಶಿಕಾರಿಪುರದಿಂದ ಸ್ಪರ್ಧಿಸುತ್ತಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ನಿನ್ನೆ ಸಭೆಯೊಂದರಲ್ಲಿ ಹೇಳಿದ್ದರು. ಆದರೆ ಆ ವಿಚಾರ ಬೇರೆ ರೀತಿಯಲ್ಲಿಯೇ ತಿರುಗಿದ ಮೇಲೆ ಇದೀಗ ಇಂದು ಅದಕ್ಕೆ ಉಲ್ಟಾ ಹೊಡೆದಿದ್ದಾರೆ. ಜನರ ಒತ್ತಡಕ್ಕೆ ಮಣಿದು ಆ ರೀತಿ ಹೇಳಿದೆ ಎಂದಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಯಡಿಯೂರಪ್ಪ ಅವರು, ನಿನ್ನೆ ಸಭೆಯಲ್ಲಿ ಮಾತನಾಡುತ್ತಿರುವಾಗಲೇ ಒತ್ತಡ ಕೇಳಿ ಬಂತು. ಹೀಗಾಗಿ ಈ ಬಾರಿ ನಾನು ನಿಲ್ಲುವುದಿಲ್ಲ. ನನ್ನ ಮಗ ನಿಲ್ಲುತ್ತಾರೆ. ಅವರಿಗೆ ನಿಮ್ಮೆಲ್ಲರ ಆಶೀರ್ವಾದವಿರಲಿ ಎಂದು ಕೇಳಿದ್ದೆ ಅಷ್ಟೇ. ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾ ಅವರು ಎಲ್ಲಿ ಅವಕಾಶ ಮಾಡಿಕೊಡುತ್ತಾರೋ ಅಲ್ಲಿಯೇ ಸ್ಪರ್ಧೆ ಮಾಡುತ್ತಾರೆ ಎಂದಿದ್ದಾರೆ.

ಬಿ ವೈ ವಿಜಯೇಂದ್ರ ಹಳೆಯ ಮೈಸೂರು ಭಾಗದಲ್ಲಿ ಸ್ಪರ್ಧೆ ಮಾಡುವ ವಿಚಾರವಾಗಿ ಚರ್ಚೆ ನಡೆದಿದೆ. ಈಗ ಜನರ ಒತ್ತಡಕ್ಕೆ ಮಣಿದು ನಿನ್ನೆ ನಾನು ಆ ರೀತಿ ಹೇಳಿದೆ. ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂದು. ಆದರೆ ಹೈಕಮಾಂಡ್ ಏನು ಹೇಳುತ್ತೋ ಅದನ್ನೇ ಪಾಲಿಸುತ್ತೇವೆ ಎಂದಿದ್ದಾರೆ ಯಡಿಯೂರಪ್ಪ ಅವರು.

Share This Article
Leave a Comment

Leave a Reply

Your email address will not be published. Required fields are marked *