Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜಾನಪದ ಸಂಗೀತ ಕರ್ನಾಟಕದ ಶ್ರೀಮಂತ ಕಲೆ : ದಳವಾಯಿ ಅಭಿಮತ

Facebook
Twitter
Telegram
WhatsApp

 

ಸುದ್ದಿಒನ್, ಚಿತ್ರದುರ್ಗ : ಜನರು ಸ್ವತಃ ಹಾಡು ಕಟ್ಟಿ ಬಾಯಿಂದ ಬಾಯಿಗೆ ಹರಡುತ್ತಾ ಪ್ರಸಿದ್ದಿಯಾದ ಜಾನಪದ ಗೀತೆಗಳು ನಮ್ಮ ಕರ್ನಾಟಕದ ಶ್ರೀಮಂತ ಕಲೆಗಳಲ್ಲಿ ಒಂದಾಗಿದೆ ಎಂದು ಮಲ್ಲೂರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಎ.ದಳವಾಯಿ ಹೇಳಿದರು.

ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿ ಸಮೀಪದ ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಲ್ಲೂರ ಹಳ್ಳಿಯ  ಶಿವಕುಮಾರ್ ಟಿ ತಂಡದ ವತಿಯಿಂದ ಹಮ್ಮಿಕೊಂಡಿದ್ದ ಜಾನಪದ ಸಂಗೀತ ಕಾರ್ಯಕ್ರಮವನ್ನು ಕೀ ಬೋರ್ಡ್ ನುಡಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಮ್ಮ ಸಂಸ್ಕೃತಿ ಆಚಾರಗಳಿಗೆ ಅನುಗುಣವಾಗಿ ಪ್ರತಿ ಸಂದರ್ಭಕ್ಕೂ ಹಾಡು ಕಟ್ಟಿ ಮೆರುಗನ್ನು ನೀಡಿರುವ ಮಹಾನ್ ಕಲಾವಿದರನ್ನು ಸ್ಮರಿಸಿ ಜಾನಪದ ಗೀತೆಗಳ ಸಂಗೀತ ನಿನಾದಗಳನ್ನು,ಸಾಹಿತ್ಯಗಳನ್ನು  ಅಳಿಯದಂತೆ ನಾವು ಉಳಿಸಬೇಕಿದೆ ಎಂದು ಹೇಳಿದರು.

ಕಲಾ ತಂಡದ ನಾಯಕ ಶಿವಕುಮಾರ್ ಟಿ. ಮಾತನಾಡಿ ಸತತವಾಗಿ 10 ವರ್ಷಗಳಿಂದ ಕಲಾವಿದನಾಗಿ ಕಲಾ ಸೇವೆಯನ್ನು ಮಾಡಲು ನನಗೆ ಮುಖ್ಯವಾದ ಪ್ರೇರೇಪಣೆ ನೀಡಿದ್ದು ನನ್ನ ಗುರುಗಳಾದ ಡಿ. ರಾಜಣ್ಣ ಇವರ ಸೂಕ್ತ ಮಾರ್ಗದರ್ಶನದಿಂದ ಇಂದು ನಾನು ವಿಷ್ಣು ಸಾಂಸ್ಕೃತಿಕ ಕಲಾ ಸಂಘವನ್ನು ಕಟ್ಟಿಕೊಂಡು ಕಲಾ ಸೇವೆಯನ್ನು ಮಾಡಲು ನೆರವಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಮಲ್ಲಿಕಾರ್ಜುನ ಎಸ್.ಟಿ ಇವರ ಅನುಮತಿಯಿಂದಾಗಿ ಇಂದು ಜಾನಪದ ಸಂಗೀತ ಕಾರ್ಯಕ್ರಮವನ್ನು ಮಾಡುವ ಸೌಭಾಗ್ಯ ನಮ್ಮ ಕಲಾ ತಂಡಕ್ಕೆ ಲಭಿಸಿದೆ,ಇದೆ ತರ ನಮ್ಮ ತಂಡದಿಂದ ಕಲಾ ಸೇವೆಯನ್ನು ಮುಂದುವರೆಸಿಕೊಂಡು ಹೋಗಲು  ಜನರ  ಪ್ರೋತ್ಸಾಹ ಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯ ಶಿಕ್ಷಕ ವೆಂಕಟೇಶ್ ಹೆಚ್.ಡಿ ಇವರು ಮಾತನಾಡಿ, ಚಲನ ಚಿತ್ರ ಗೀತೆಗಳ ಮಧ್ಯೆ ಜನಪದ ಗೀತೆಗಳನ್ನು ಹಾಡುವ ಪರಿಪಾಟಲು ಕಡಿಮೆಯಾಗುತ್ತಿದೆ, ಜನಪದ ಗೀತೆಗಳ ಸಾಹಿತ್ಯ ಹಾಗೂ ಅವುಗಳ ಮಹತ್ವ ಪ್ರತಿಯೊಬ್ಬ ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಸಾಂದರ್ಭಿಕ ಹಾಡುಗಳಾಗಿವೆ.ವಿದ್ಯಾರ್ಥಿಗಳು ಶಾಲಾ ಹಂತದಿಂದಲೇ ಹಾಡುವ ಕಲೆಯನ್ನು ಬೆಳೆಸಿಕೊಂಡು ಭವಿಷ್ಯದಲ್ಲಿ ಕಲಾವಿದರಾಗಿ ಹೊರ ಹೊಮ್ಮುವ ಅವಕಾಶಗಳಿವೆ ಎಂದು ತಿಳಿಸಿದರು.

ಕಲಾವಿದ ರಾಜಣ್ಣ ಮಾತನಾಡಿ ಕಲೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ ಆದರೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ, ಯಾರಿಗೆ ನಿರಂತರ ಬದ್ಧತೆ ಹಾಗೂ ಕಲಿಯುವ ಹಂಬಲ ಹೊಂದಿ ಅದರಂತೆ ಸತತ ಪ್ರಯತ್ನಗಳನ್ನು ಮಾಡುವರೋ ಅವರು ನಿಜವಾಗಿ ಉತ್ತಮ ಕಲಾವಿದರಗುತ್ತಾರೆ, ಆದ್ದರಿಂದ ಕಲೆಗೆ ಪ್ರೋತ್ಸಾಹ ನೀಡುವ ಮನಸ್ಸುಳ್ಳ ವ್ಯಕ್ತಿಗಳ ಕೊರತೆಯಿದೆ. ಇದರ ಪರಿಣಾಮ ಕಲಾವಿದರು ಸೃಷ್ಟಿ
ಯಾಗುವ ಸಂಖ್ಯೆ ಕಡಿಮೆ ಆಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

ಬಹುಮುಖ ಪ್ರತಿಭೆಯ ಟಿ.ಶಿವಕುಮಾರ್ ಬಹಳ ವರ್ಷಗಳಿಂದ ಕಲಾವಿದನಾಗಿ ತಂಡವನ್ನು ಕಟ್ಟಿಕೊಂಡು ರಾಜ್ಯಾದ್ಯಂತ ಕಲಾ ಸೇವೆಯನ್ನು ಮಾಡುತ್ತಾ ಸಾಗುತ್ತಿರುವ ಉದಯೋನ್ಮುಖ ಪ್ರತಿಭೆ ಎಂದು ಗಾಯಕ ಶಿಕ್ಷಕರಾದ ಕೆ.ಟಿ.ನಾಗಭೂಷಣ್ ಹೇಳಿದರು.

ಸಂಗೀತ ಕಾರ್ಯಕ್ರಮದಲ್ಲಿ ಕಲಾವಿದ ಗಾಯಕರಾದ ಶಿವಕುಮಾರ್ಟಿ ,ಪ್ರಿಯಾಂಕ, ರಾಜಣ್ಣ,ತಿಪ್ಪೇಸ್ವಾಮಿ, ನಾಗಭೂಷಣ್, ನೀಲಪ್ಪ ತೂಲಹಳ್ಳಿ,ಇವರು ವಿವಿಧ ಜಾನಪದ ಗೀತೆಗಳನ್ನು ಹಾಡುವುದರ ಮೂಲಕ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷೆ ಮಂಜುಳಾ ಬಸವರಾಜ್, ಎಸ್ ಡಿ ಎಂ ಸಿ ಅಧ್ಯಕ್ಷ ಜಯಣ್ಣ, ಕಲಾ ತಂಡದ ನಾಯಕ ಶಿವಕುಮಾರ್ ಟಿ, ರಿದಂ ಪ್ಯಾಡ್ ವಾದಕ ಎಂ ವಿ ಬದ್ರಿ, ಕೀ ಬೋರ್ಡ್ ವಾದಕ ರಾಜಣ್ಣ,ಗಾಯಕ ಪವನ್ ತಳಕು ,ಶಿಕ್ಷಕರಾದ  ವೀರಭದ್ರಪ್ಪ ಡಿ.ಕೆ,ರಂಜಿತಾ,ಮಹಾಂತೇಶ್, ಸೌಮ್ಯ , ಓಬಕ್ಕ,ಪ್ರಸನ್ನ ಕುಮಾರ್, ಬಡ ಮ್ಯಾಕಲಯ್ಯ, ಶಾಲಾ ವಿದ್ಯಾರ್ಥಿಗಳು,ಊರಿನ ಗ್ರಾಮಸ್ಥರು ಹಾಗೂ ಮತ್ತಿತರು ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ. ಶುಕ್ರವಾರ- ರಾಶಿ ಭವಿಷ್ಯ ಮೇ-17,2024 ಸೂರ್ಯೋದಯ: 05:47, ಸೂರ್ಯಾಸ್ತ : 06:37 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ

ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪ್ರಕರಣ | ಕೊನೆಗೂ ಸಿಕ್ತು ಸಾವಿನ ಸುಳಿವು: ಎಸ್.ಪಿ. ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ, ಮೇ. 16 : 2023ರ ಡಿಸೆಂಬರ್ ನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಅದು. ನಗರದ ಬೆಂಗಳೂರು ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಐವರ ಮೃತದೇಹ ಪತ್ತೆಯಾಗಿತ್ತು. ಅದು ಅವರೆಲ್ಲಾ ಸಾವನ್ನಪ್ಪಿ

ನೈರುತ್ಯ ಪದವೀಧರ ಚುನಾವಣೆ : ಬಿಜೆಪಿ ವಿರುದ್ಧ ರಘುಪತಿ ಭಟ್ ಬಂಡಾಯ, ಪಕ್ಷೇತರ ಸ್ಪರ್ಧೆ

ಮೈಸೂರು: ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರಿಗೆ, ಒಂದಷ್ಡು ವಿವಾದಗಳಿದ್ದವರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು. ಹೊಸ ಮುಖಗಳಿಗೆ ಮಣೆ ಹಾಕಲು ಹೋಗಿ, ಹಿರಿಯ ತಲೆಗಳು ಬಂಡಾಯವೆದ್ದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್

error: Content is protected !!