ತನಿಷಾ – ಸಂತೋಷ್ ನಡುವೆ ಹೊತ್ತಿಕೊಳ್ತು ಬೆಂಕಿ : ನಮ್ರತಾಗೆ ಫುಲ್ ಖುಷಿ

suddionenews
1 Min Read

ಬಿಗ್ ಬಾಸ್ ಮನೆಯಲ್ಲಿ ದಿನಕಳೆದಂತೆ ಕಠಿಣ ಸ್ಪರ್ಧೆ ಏರ್ಪಡುತ್ತಿದೆ. ಮನೆಯಿಂದ ಯಾರೂ ಹೊರ ಹೋಗಬಹುದು ಎಂಬ ಊಹೆ ಜೋರಾಗಿದೆ. ಯಾರೂ ಹೋರ ಹೋಗುತ್ತಾರೆ ಎಂಬ ಲೆಕ್ಕಚಾರವೇ ಟಫ್ ಆಗಿ ಕಾಣಿಸುತ್ತಿದೆ. ಇದರ ನಡುವೆ ಒಬ್ಬರ ಮೇಲೊಬ್ಬರ ಮನಸ್ತಾಪ ಜೋರಾಗುತ್ತಿದೆ.

https://www.instagram.com/reel/C0bLS_Qs8Qn/?igshid=MzRlODBiNWFlZA==

ಬಿಗ್ ಬಾಸ್ ಮನೆಯಲ್ಲಿ ಇತ್ತಿಚೆಗೆ ಒಂದು ಲವ್ ಬರ್ಡ್ಸ್ ಹುಟ್ಟಿಕೊಳ್ಳುತ್ತಿದೆ. ಅದು ತನಿಷಾ ಹಾಗೂ ವರ್ತೂರು ಸಂತೋಷ್. ಇಬ್ಬರ ನಡುವೆ ಏನೋ ನಡೆಯುತ್ತಾ ಇದೆ ಎಂದೇ ಎಲ್ಲರು ರೇಗಿಸುವುದಕ್ಕೆ ಶುರು ಮಾಡಿದ್ದಾರೆ. ವರ್ತೂರು ಸಂತೋಷ್ ಕೂಡ ಅದಕ್ಕೆ ಹೌದು ಎಂಬಂತೆ ಸ್ಪಂದಿಸುತ್ತಾರೆ. ಅದಕ್ಕೆ ಬಿಗ್ ಬಾಸ್ ಬೆಂಕಿ ಎಂಬ ಸಿನಿಮಾದ ಪೋಸ್ಟರ್ ಅನ್ನೇ ರಿಲೀಸ್ ಮಾಡಿದ್ದರು. ನಿನ್ನೆ ಕಿಚ್ಚನ ಪಂಚಾಯ್ತಿಯಲ್ಲೂ ತನಿಷಾ ಇಲ್ಲದ ಮನ ಹೇಗಿರುತ್ತೆ ಅಂತ ಹೇಳಿದ್ದರು. ಆದರೆ ಒಂದೇ ದಿನಕ್ಕೆ ಆ ಭಾವನೆ ಉಲ್ಟಾ ಆಗಿದೆ. ವರ್ತೂರು ಸಂತೋಷ್, ತನಿಷಾ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಇಂದು ನಾಮಿನೇಷನ್ ಮಾಡುವ ಅವಾಕಾಶವನ್ನು ಕ್ಯಾಪ್ಟನ್ ಆದಂತ ಸ್ನೇಹಿತ್ ಅವರಿಗೆ ಮಾತ್ರ ನೀಡಲಾಗಿದೆ. ಈ ವೇಳೆ ಎಲ್ಲರೂ ಅವರವರ ಬಗ್ಗೆ ಸ್ನೇಹಿತ್ ಬಳಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಕಾರ್ತಿಕ್, ತನಿಷಾಗೋಸ್ಕರ ಮನವಿ ಮಾಡಿಕೊಂಡರು. ತನಿಷಾ ಸೇಫ್ ಆಗಲಿ ಎಂದರು. ಅದೇ ಕ್ಷಣಕ್ಕೆ ವರ್ತೂರು ಸಂತೋಷ್, ಇಲ್ಲಿ ತ್ಯಾಗಮೂರ್ತಿಗಳಾಗಿ ನಾವೂ ಬಂದಿಲ್ಲ. ತನಿಷಾ ಅವರನ್ನು ನಾನು ಬೇಕು ಅಂತ ಹೋಗಿ ತಳ್ಳಿಲ್ಲ. ಹೀಗಾಗಿ ತನಿಷಾಗೆ ಒಂದು ಚಾನ್ಸ್ ಸಿಗಲಿ ಅಂತ ಕೇಳಲ್ಲ. ನಾವೂ ಮಾನವೀಯತೆ ಅಂತ ಹೋದರೆ ಹಿಂದೆ ಅಲ್ಲ ಮುಂದೆಯೇ ತೋಡಿರುತ್ತಾರೆ ಹಳ್ಳ ಎಂದಿದ್ದಾರೆ.

ಈ ಮಾತು ಕೇಳಿ ನಮ್ರತಾ ಫುಲ್ ಖುಷಿ ಪಟ್ಟಿದ್ದಾರೆ. ಆಗ ಅಲ್ಲಿಯೇ ಕೂತಿದ್ದ ತನಿಷಾ, ಈಗ ಮಾತನಾಡಿರುವ ವರ್ತೂರ್ ಡೇ ಒನ್ ನಿಂಸ ಮಾತನಾಡಿದ್ದರೆ ಮೆಚ್ಚಿಕೊಳ್ಳಿತ್ತಾ ಇದ್ದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *