ಬೆಂಗಳೂರು; ಆರ್ಸಿಬಿ.. ಆರ್ಸಿಬಿ.. ಆರ್ಸಿಬಿ.. ಎಲ್ಲೆಲ್ಲೂ ಆರ್ಸಿಬಿಯದ್ದೇ ಸದ್ದು. ನಾಳೆಯ ಮ್ಯಾಚ್ ಗೋಸ್ಕರ ಎಲ್ಲರು ತುದಿಗಾಲಿನಲ್ಲಿ ನಿಂತಿದ್ದಾರೆ. ಸುಮಾರು 18 ವರ್ಷಗಳಿಂದ ಆರ್ಸಿಬಿ ಅಭಿಮಾನಿಗಳು ಕಾಯ್ತಾ ಇರುವಂತಹ ಕಪ್ ಈ ಬಾರಿ ಬಂದೇ ಬರುತ್ತೆ ಅನ್ನೋ ವಿಶ್ವಾಸದಲ್ಲಿದ್ದಾರೆ. ಹೀಗಾಗಿಯೇ ಅಭಿಮಾನಿಗಳೆಲ್ಲಾ ಸಿಎಂ ಸಿದ್ದರಾಮಯ್ಯ ಅವರಿಗೆ ಒಂದು ಮನವಿಯನ್ನ ಮಾಡಿದ್ದಾರೆ.
ಅದರಲ್ಲೂ ಈ ಬಾರಿ ಆರ್ಸಿಬಿ ತಂಡ ಸಖತ್ ಆಗಿನೇ ಮ್ಯಾಚ್ ಆಡಿದೆ. ನಾಳೆ ನಡೆಯುವ ಮ್ಯಾಚ್ ನಲ್ಲಿ ಆರ್ಸಿಬಿ ವರ್ಸಸ್ ಪಂಜಾಬ್ ಪಂದ್ಯ ನಡೆಯಲಿದೆ. ಈ ಬಾರಿಯ ಆಟದಲ್ಲಿ ಒಳ್ಳೆಯ ಪ್ರದರ್ಶನ ನೀಡಿದ್ದು, ಫ್ಲೇ ಆಫ್ ನಲ್ಲಿ ಪಂಜಾಬ್ ವಿರುದ್ಧ ಪಂದ್ಯವಾಡಲಿದ್ದು, ನಾಳೆ ಒಂದು ದಿನ ಸಾರ್ವತ್ರಿಕ ರಜೆ ಘೋಷಣೆ ಮಾಡುವಂತೆ ಮನವಿ ಮಾಡಿದ್ದಾರೆ. ಈ ಮನವಿಯನ್ನ ಸಿಎಂ ಸಿದ್ದರಾಮಯ್ಯ ಅವರು ಒಪ್ಪಿಕೊಳ್ಳುತ್ತಾರಾ ನೋಡಬೇಕಿದೆ.
ಆರ್ಸಿಬಿ ಅಭಿಮಾನಿಗಳು ಆ ದಿನವನ್ನ ಹಬ್ಬವನ್ನಾಗಿ ಮಾಡುತ್ತಾರೆ. ನಾಳೆ ಅಹ್ಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ಅಲ್ಲಿಗೆ ಟಿಕೆಟ್ ಕೂಡ ಬುಕ್ ಆಗಿರುತ್ತವೆ. ನಾಳೆಯ ಮ್ಯಾಚ್ ಊಹೆಯೂ ಮಾಡಲಾಗದಷ್ಟು ಕುತೂಹಲವಿರುತ್ತದೆ. ಆರ್ಸಿಬಿ ಅಭಿಮಾನಿಗಳು ಕೆಲಸಕ್ಕೆ ಹೋದ್ರು ಕೂಡ ಕೆಲಸದ ಕಡೆ ಅಷ್ಟೊಂದು ಗಮನ ಇರೋದಿಲ್ಲ. ಮ್ಯಾಚ್ ಬಗ್ಗೆಯೇ ಯೋಚನೆ ಇರುತ್ತೆ. ಹೀಗಾಗಿ ಸಾರ್ವತ್ರಿಕ ರಜೆ ನೀಡಬೇಕೆಂದು ಅಭಿಮಾನಿಗಳು ಮನವಿ ಮಾಡಿದ್ದಾರೆ. ಆರ್ಸಿಬಿಯ ಗೆಲುವಿಗಾಗಿ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳನ್ನ ಮಾಡಿಸಿದ್ದಾರೆ. ಹೋಮ ಹವನಗಳನ್ನ ಮಾಡಿಸಿ, ಆರ್ಸಿಬಿ ತಂಡಕ್ಕೆ ಶಕ್ತಿ ಬರಲೆಂದೇ ಪೂಜೆಗಳನ್ನ ಮಾಡಿಸ್ತಾ ಇದ್ದಾರೆ.

