ಮಾಜಿ ಶಾಸಕ ರಾಜೀವ್ ಬೆಂಬಲಿಗರಿಂದ ಜಮೀನು ಬರೆಸಿಕೊಂಡ ಆರೋಪ : ದಯಾಮರಣ ನೀಡಿ ಎಂದ ನೊಂದ ಕುಟುಂಬ..!

1 Min Read

 

 

ಬೆಳಗಾವಿ: ಕುಡಚಿಯ ಮಾಜಿ ಶಾಸಕ ಪಿ ರಾಜೀವ್ ಅವರ ಬೆಂಬಲಿಗರಿಂದ ಜಮೀನು ಕಬಳಿಕೆ ಆರೋಪ ಕೇಳಿ ಬಂದಿದೆ. ಕುಟುಂಬ ಒಂದಕ್ಕೆ ಗನ್ ತೋರಿಸಿ, ಎಂಟು ಎಕರೆ ಜಮೀನನ್ನು ಬರೆಸಿಕೊಂಡಿರುವ ಆರೋಪ ಮಾಡುತ್ತಿದ್ದಾರೆ. ಈ ಸಂಬಂಧ ನೊಂದ ದಂಪತಿ ಕೋರ್ಟ್ ಮುಂದೆ, ದಯಾಮರಣ ನೀಡಿ, ಇಲ್ಲವೆ, ಜಮೀನು ಕೊಡಿಸಿ ಎಂದು ಕುಳಿತಿದ್ದಾರೆ.

ಮಾಜಿ ಶಾಸಕರ ಬೆಂಬಲಿಗರು ರಾಯಭಾಗ ಬಳಿಯ ಜಲಾಲಾಪುರ ಬಳಿಯ ಸರ್ವೆ ನಂಬರ್ 744ರಲ್ಲಿರುವ ಎಂಟು ಎಕರೆ ಜಮೀನನ್ನು ಬರೆಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನ್ಯಾಯಾಲಯದಲ್ಲಿ ಸುಳ್ಳು ಹೇಳಿಸಿ, ಗನ್ ತೋರಿಸಿ, ನಮ್ಮಿಂದ ಆಸ್ತಿ ಕಬಳಿಕೆ ಮಾಡಿಕೊಂಡಿದ್ದಾರೆ. ಆಸ್ತಿ ವಾಪಾಸ್ ಕೊಡಿಸಿ, ಇಲ್ಲ ದಯಾ ಮರಣ ನೀಡಿ ಎಂದು ಕೋರ್ಟ್ ಮುಂದೆ ಬೇಡಿಕೊಂಡಿದ್ದಾರೆ.

ಎರಡು ಮಕ್ಕಳನ್ನು ಕರೆದುಕೊಂಡು ಬಂದಿರುವ ದಂಪತಿ, ಪ್ರಭಾವಿಗಳಿಗೆ ಹೆದರಿ ನಾವೂ ಬದುಕುತ್ತಿದ್ದೇವೆ. ನಮ್ಮ ಜಮೀನು ಕೊಡಿಸಿ, ಇಲ್ಲ ದಯಾ ಮರಣ ಕೊಡಿ ಎಂದು ಕೋರ್ಟ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಬಂದು, ಬ್ಯಾನರ್ ಹಿಡಿದು ಪ್ರತಿಭಟಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *