Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶಾಸಕ ವೀರೇಂದ್ರ ಪಪ್ಪಿ ಮನೆಯಲ್ಲಿ ಮುಟ್ಟಿದ್ದೆಲ್ಲ ಚಿನ್ನ.. ಬೆಳ್ಳಿ.. ವಜ್ರ..!

---Advertisement---

 

ಚಿತ್ರದುರ್ಗ : ಶಾಸಕ ವೀರೇಂದ್ರ ಪಪ್ಪಿ ಅವರು ಸದ್ಯ ಇಡಿ ವಶದಲ್ಲಿದ್ದಾರೆ. ಅವರ ಸಾಮ್ರಾಜ್ಯವನ್ನು ಕೆದಕುತ್ತಾ ಹೋದಂತೆ ಇಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಈಗಾಗಲೇ ಮೂರು ಬಾರಿ ದಾಳಿ ನಡೆಸಿ ಕೋಟ್ಯಾಂತರ ರೂಪಾಯಿ ವಶಕ್ಕೆ ಪಡೆದಿದ್ದಾರೆ. ದಾಳಿ ನಡೆಸಿದ ಜಾಗದಲ್ಲೆಲ್ಲಾ ಮುಟ್ಟಿದ್ದೆಲ್ಲಾ, ಬೆಳ್ಳಿ, ವಜ್ರವೇ ಸಿಕ್ತಾ ಇದೆ. ಸದ್ಯ 14 ದಿನಗಳ ಕಾಲ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಇಡಿ ಅಧಿಕಾರಿಗಳಿಗೆ ಲೆಕ್ಕವೇ ತಪ್ಪಬೇಕು ಆ ರೇಂಜಿಗಿದೆ ಖಚಾನೆ. ಅಕ್ರಮ ಆನ್ಲೈನ್ ಹಾಗೂ ಆಫ್ಲೈನ್ ಅಕ್ರಮ ಆಟಗಳಲ್ಲಿ ಈಗ ಬಂಧಿಯಾಗಿದ್ದಾರೆ. ಪಪ್ಪಿ ಬಳಿ ಇರುವ ಆಸ್ತಿ ಕಂಡು ಇಡಿ ಅಧಿಕಾರಿಗಳೆ ದಂಗಾಗಿದ್ದಾರೆ. ಕಳೆದ 20 ದಿನದಿಂದ ನಡೆಯುತ್ತಿರುವ ಶೋಧ ಕಾರ್ಯ ಮುಗಿಯುವಂತೆ ಕಾಣುತ್ತಿಲ್ಲ. ಹಾಗಾದ್ರೆ ವೀರೇಂದ್ರ ಪಪ್ಪಿ ಬಳಿ ಏನೆಲ್ಲಾ ಇದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಆಕ್ಸಿಸ್ ಬ್ಯಾಂಕ್ ನಲ್ಲಿ 24.5 ಕೆಜಿ ಚಿನ್ನದ ಬಿಸ್ಕೇಟ್ ಅನ್ನ ಇಟ್ಟಿದ್ದರು.‌ 17 ವಜ್ರದ ಉಂಗುರಗಳು ಪತ್ತೆಯಾಗಿದೆ ಇದು ಆಕ್ಸಿಸ್ ಬ್ಯಾಂಕ್ ಆದರೆ ಮಹೀಂದ್ರ ಕೋಟಾಕ್ ಬ್ಯಾಂಕ್ ನಲ್ಲು ದೊಡ್ಡ ಜಾಲವೇ ಪತ್ತೆಯಾಗಿದೆ. ಐದು ಕೆಜಿ ಗೋಲ್ಡ್ ಬಿಸ್ಕತ್ತು ಸಿಕ್ಕಿದ್ದು, ಎಸ್ಬಿಐ ಬ್ಯಾಂಕ್ ಲಾಕರ್ ಪರಿಶೀಲನೆ ಮಾಡಿದಾಗ ಅದರಲ್ಲಿ ಗಟ್ಟಿ ಬಂಗಾರದ ಬಿಸ್ಕೆಟ್ಸ್ ಹಾಗೂ ಹಲವು ಆಸ್ತಿ ಪತ್ರಗಳು ಸಿಕ್ಕಿವೆ. ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿರುವ ಇಡಿ ಅಧಿಕಾರಿಗಳು ಸದ್ಯ ಪಪ್ಪಿಯ ಸಾಮ್ರಾಜ್ಯವನ್ನು ಕೆದಕುತ್ತಾ ಇದ್ದಾರೆ. ಪ್ರತಿದಿನ ದಾಳಿ ನಡೆಸಿದರು, ದುಬಾರಿ ವಸ್ತುಗಳೇ ಸಿಗುತ್ತಿವೆ. ತನಿಖೆಯೂ ನಡೆಯುತ್ತಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment