ಸುದ್ದಿಒನ್, ಹಿರಿಯೂರು, ಸೆಪ್ಟೆಂಬರ್. 21 : ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ ತುಂಬುವ ಹಿನ್ನೆಲೆಯಲ್ಲಿ ಹಿರಿಯೂರು ಗ್ರಾಮಾಂತರ ಕಾರ್ಯಕರ್ತರ ಬೈಠಕ್ ಅನ್ನು ತಾಲೂಕಿನ ಮಸ್ಕಲ್ ಮಟ್ಟಿ ಗ್ರಾಮದಲ್ಲಿ ನಡೆಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ ಹಿರಿಯ ಕಾರ್ಯಕರ್ತರ ಜೊತೆಗೆ ಇಂದಿನ ಯುವ ಸಮೂಹವನ್ನು ಸಹ ಜೋಡಿಸಿಕೊಂಡು ಸುಭದ್ರ, ಸಶಕ್ತ ರಾಷ್ಟ್ರದ ನಿರ್ಮಾಣ ಮಾಡಬೇಕಿದೆ. 1925 ರ ಸಂಘ ಸ್ಥಾಪನೆಯ ಉದ್ದೇಶವನ್ನು ಕಾರ್ಯಕರ್ತರು ಗಮನದಲ್ಲಿರಿಸಿಕೊಳ್ಳಬೇಕು.ಗ್ರಾಮದ ಪ್ರತಿ ಮನೆಯಲ್ಲಿಯೂ ಕೂಡ ಸಂಘದ ಸ್ವಯಂ ಸೇವಕರು ಇರಬೇಕು. ಹೊಸ ಸ್ವಯಂ ಸೇವಕರನ್ನ ಶಾಖೆಗೆ ಕರೆತರುವುದು ಹಿರಿಯ ಕಾರ್ಯಕರ್ತರ ಜವಾಬ್ದಾರಿಯಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕೇವಲ ಶಾಖೆಗಳನ್ನು ನಡೆಸದೆ ವಿದ್ಯಾರ್ಥಿಗಳಿಗಾಗಿ ಎಬಿವಿಪಿ, ರೈತರಿಗಾಗಿ ಕಿಸಾನ್ ಸಂಘ, ಆದಿವಾಸಿಗಳಿಗಾಗಿ ವನವಾಸಿ ಕಲ್ಯಾಣ, ಕಾರ್ಮಿಕರಿಗಾಗಿ ಭಾರತೀಯ ಕಿಸಾನ್ ಸಂಘ, ರಾಜಕೀಯಕ್ಕಾಗಿ ಬಾಜಪ, ಹಿಂದೂಗಳ ಜಾಗೃತಿಗಾಗಿ ಹಿಂದೂ ಜಾಗರಣಾ ವೇದಿಕೆ ಹೀಗೆ ಸುಮಾರು 144 ಸಂಘಟನೆಗಳನ್ನು ರಾಷ್ಟ್ರೀಯತೆಗಾಗಿ ಸ್ಥಾಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆಯ ಶ್ರೀನಿವಾಸ್, ವಿಶ್ವನಾಥ್, ಶಿವು, ಬಿಜೆಪಿ ತಾಲೂಕು ಅಧ್ಯಕ್ಷ ಕೆ. ಅಭಿನಂದನ್, ಸಂಘದ ಕಾರ್ಯಕರ್ತರಾದ ಸುರೇಶ್, ಸನಸೇಖರ್, ಸುಕುಮಾರನ್, ರಾಮ್ ರಾಜ್, ನಾಮದೇವ್ ಮುಂತಾದವರು ಹಾಜರಿದ್ದರು.


