ತಾಯಿಯ ನಿಧನದ ನೋವಲ್ಲೂ ಬಿಗ್ ಬಾಸ್ ಏರಿದ ಕಿಚ್ಚ: ಸರೋಜಮ್ಮರಿಗೆ ಕಲರ್ಸ್ ಕನ್ನಡ ನಮನ

1 Min Read

ಬಿಗ್ ಬಾಸ್ ವೀಕೆಂಡ್ ಶೋನಲ್ಲಿ ಕಿಚ್ಚ ಸುದೀಪ್ ಇದ್ದರೇನೆ ಚೆಂದ. ವಾರಪೂರ್ತಿ ಕಿತ್ತಾಟ, ಜಗಳ, ಟಾಸ್ಕ್ ಗಳ ವಿಚಾರದಲ್ಲಿ ಒಂದಷ್ಟು ಮಿಸ್ಟೇಕ್ ಇದೆಲ್ಲದಕ್ಕೂ ಒಂದಷ್ಟು ಚರ್ಚೆ ನಡೆಯೋದು ವೀಕೆಂಡ್ ಶೋ ನಲ್ಲಿ ವಾರದ ಕಥೆ ಕಿಚ್ಚನ ಜೊತೆ ಹಾಗೇ ಸೂಪರ್ ಸಂಡೇ ವಿತ್ ಸುದೀಪ ಶೋನಲ್ಲಿ ಒಂದಷ್ಟು ನ್ಯಾಯ ಪಂಚಾಯ್ತಿ ಆಗುತ್ತೆ. ಈ ವಾರದ ಕಥೆಯನ್ನು ಕೇಳುವುದಕ್ಕೇನೆ ಸುಮಾರು ಜನ ಕೂತಿರುತ್ತಾರೆ. ಆದರೆ ಕಳೆದ ವಾರ ಕಿಚ್ಚ ಗೈರಿನಲ್ಲಿಯೇ ವಾರದ ಕಥೆ ನಡೆದಿತ್ತು. ಈ ವಾರ ಮನಸ್ಸೊಳಗೆ ನೋವಿದ್ದರೂ ವೇದಿಕೆ ಮೇಲೆ ಹಾಜರಾಗಿದ್ದಾರೆ.

ಭಾನುವಾರದಂದು ಕಿಚ್ಚ ಪಂಚಾಯ್ತಿ ನಡೆಸುವಾಗಲೇ ತಾಯಿ ಸೀರಿಯಸ್ ಕಂಡೀಷನ್ ನಲ್ಲಿ ಇದ್ದರು. ಆದರೆ ಬಿಟ್ಟು ಹೋಗ್ತಾರೆ ಎಂದು ಯಾರಿಗೂ ಊಹೆಯೂ ಇರಲಿಲ್ಲ. ಪಂಚಾಯ್ತಿ ಮುಗಿಸಿ ಆಸ್ಪತ್ರೆಗೆ ಹೋದರು. ಆದರೆ ತಾಯಿಯನ್ನು ಕಡೆ ಸಮಯದಲ್ಲಿ ಮಾತಾಡಿಸುವುದಕ್ಕೂ ಆಗಲಿಲ್ಲ. ತಾಯಿಯನ್ನು ಕಳೆದುಕೊಂಡು ತುಂಬಾ ದುಃಖದಲ್ಲಿದ್ದರು. ಆದರೂ ಕಾಯಕವೇ ಕೈಲಾಸ ಎಂಬಂತೆ ಒಪ್ಪಿಕೊಂಡ ಕೆಲಸ ಮಾಡಲು ಬಂದಿದ್ದಾರೆ.

ಇಂದು ವೇದಿಕೆ ಮೇಲೆ ಕಿಚ್ಚನ ತಾಯಿ ಸರೋಜಮ್ಮ ಅವರಿಗೆ ನಮನ ಸಲ್ಲಿಸಿದರು. ವಾಸುಕಿ ವೈಭವ್ ಪರಪಂಚ ನೀನೆ ಹಾಡು ಹಾಡಿದರು. ಎಲ್ಲರು ಕ್ಯಾಂಡಲ್ ಹಿಡಿದು ಗೌರವ ಸಲ್ಲಿಸಿದರು. ಬಿಗ್ ಬಾಸ್ ವತಿಯಿಂದ ‘ಮಾಣಿಕ್ಯನಂತ ನಾಯಕನನ್ನು, ಕರುನಾಡ ಮಡಿಲಿಗೆ ಹಾಕಿ, ತನ್ನ ಪ್ರೀತಿಯನ್ನು ಮನೆ ಮನೆಗೂ ಹಂಚಿಕೊಂಡ ನಿಮ್ಮ ತಾಯಿಯ ಅಗಲಿಕೆ ಭರಿಸಲರಾದ ನೋವು’ ಎಂದು ಕಿಚ್ಚನಿಗೆ ಸಾಂತ್ವಾನ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *