ಮದಕರಿಪುರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರ ತುರ್ತು ಸಭೆ : ಏನೆಲ್ಲಾ ಚರ್ಚೆ ನಡೆಯಿತು ?

1 Min Read

 

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಆ.21 : ಮದಕರಿಪುರ ಗ್ರಾಮ ಪಂಚಾಯಿತಿಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಓ.ಬಸವರಾಜ್ ಸೋಮವಾರ ಸದಸ್ಯರುಗಳ ತುರ್ತು ಸಭೆ ಕರೆದು ಕುಡಿಯುವ ನೀರು ಪೂರೈಕೆ ಹಾಗೂ ಸ್ವಚ್ಚತೆ ಕುರಿತು ಚರ್ಚಿಸಿದರು.

ಅಧಿಕಾರ ಸ್ವೀಕರಿಸಿದ ನಂತರ ಸದಸ್ಯರುಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅಧ್ಯಕ್ಷ ಓ.ಬಸವರಾಜ್ ಮದಕರಿಪುರ ಗ್ರಾಮ ಪಂಚಾಯಿತಿಗೆ ಒಳಪಡುವ ಪಿಳ್ಳೆಕೆರನಹಳ್ಳಿ ಹಾಗೂ ಮದಕರಿಪುರದಲ್ಲಿ ಜನತೆಗೆ ಶುದ್ದ ಕುಡಿಯುವ ನೀರು ಹಾಗೂ ಸ್ವಚ್ಚತೆ ಕಡೆ ಮೊದಲ ಆದ್ಯತೆ ನೀಡಬೇಕಾಗಿರುವುದರಿಂದ ಸರ್ವ ಸದಸ್ಯರ ಸಹಕಾರ ಅತ್ಯವಶ್ಯಕ.

ಜಿಲ್ಲೆಯ ಕೆಲವು ಕಡೆ ಕಲುಷಿತ ನೀರು ಸೇವನೆಯಿಂದ ಉಂಟಾಗಿರುವ ಅವಘಡಗಳಿಂದ ನಾವುಗಳು ಎಚ್ಚೆತ್ತುಕೊಳ್ಳುವುದು ಉತ್ತಮ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳ, ಸದಸ್ಯರುಗಳಾದ ಪಿ.ಎಸ್.ಸಿದ್ದೇಶ್, ದಿವಾಕರ್ ಸಂಕೋಳ್, ಕುಸುಮ, ಟಿ.ಚಂದ್ರಮ್ಮ ರೇವಣ್ಣ, ಚನ್ನಪ್ಪ ಹೆಚ್.ಪಿ. ರತ್ನಮ್ಮ ನಾಗರಾಜ್, ಮಂಜುಳ ಗಿರೀಶ್, ಜ್ಯೋತಿ ದೇವೇಂದ್ರಪ್ಪ, ಎಲ್.ತಿಪ್ಪೇಸ್ವಾಮಿ, ನವೀನ್‍ಗೌಡ, ರಂಜಿತ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ನಾಗರಾಜ್, ಕಾರ್ಯದರ್ಶಿ ಸೋಮಣ್ಣ ಇವರುಗಳು ತುರ್ತು ಸಭೆಯಲ್ಲಿ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *