ಸುದ್ದಿಒನ್, ಜಗಳೂರು, ಜನವರಿ : ನಾವೆಲ್ಲ ಹಳ್ಳಿಗಾಡಿನ ಜನರು. ನಮಗೆ ಬೇಸಾಯ ಮತ್ತು ದುಡಿಮೆಯೇ ಮುಖ್ಯ ಕೆಲಸವಾಗಿರುತ್ತದೆ. ಮನೆ, ಕುಟುಂಬ, ಮಕ್ಕಳು ಎಂಬ ಸಂಬಂಧಗಳೇ ಮುಖ್ಯವಾಗಿರುತ್ತದೆ. ಹಾಗಾಗಿ ನಮ್ಮ ಹಳ್ಳಿಯ ಜನರಿಗೆ ಶಿಕ್ಷಣದ ಅರಿವಿನ ಕೊರತೆ ಇದೆ. ಆದರೆ ನಮ್ಮ ಸಂವಿಧಾನವು ಎಲ್ಲಾ ಬಗೆಯ ಸೌಲಭ್ಯಗಳನ್ನು ಕಾನೂನಿನ ಮೂಲಕ ನೀಡಿದ್ದಾರೆ. ಇವುಗಳನ್ನು ತಿಳಿದುಕೊಳ್ಳಬೇಕಾದರೆ ಶಿಕ್ಷಣವೇ ಮೂಲ ಆಯುಧ ಎಂದು ತಮಿಳುನಾಡಿನ ವಿರುಧನಗರದ ಜಿಲ್ಲಾಧಿಕಾರಿ ಡಾ.ಎನ್.ಓ.ಸುಖಪುತ್ರ ಸಾರ್ವಜನಿಕರಿಗೆ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ತಮಲೆಹಳ್ಳಿ ನೌಕರರ ಸಂಘ, ದಂಡಿನ ರಾಜಪ್ಪ ಪರಿವಾರ ಟ್ರಸ್ಟ್, ಹಾಗೂ ಗ್ರಾಮ ಪಂಚಾಯಿತಿ ತಮಲೆಹಳ್ಳಿಸಹಯೋಗದಲ್ಲಿ ದುರ್ಗಾಂಭಿಕಾ ದೇವಸ್ಥಾನದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ‘ ಕಾನೂನು ಜಾಗೃತಿ ಜಾತ್ರೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾನು ತುಂಬಾ ಕಷ್ಟಪಟ್ಟು ಶಿಕ್ಷಣವನ್ನು ಪಡೆದುಕೊಂಡೆ, ನಿರಂತರವಾಗಿ ಅಭ್ಯಾಸ ಮಾಡುತ್ತಾ ಹಲವಾರು ಸಾರ್ವಜನಿಕ ಹುದ್ದೆಗಳನ್ನು ಪಡೆದು ಕೊಂಡು, ನಂತರ ಮತ್ತೆ ಐಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದೇನೆ. ಅಂದರೆ ಅದಕ್ಕೆ ಶಿಕ್ಷಣವೇ ಬಹಳ ಮುಖ್ಯ. ಹಾಗಾಗಿ ನೀವುಗಳು ತಮ್ಮ ಮಕ್ಕಳನ್ನು ವಿದ್ಯಾವಂತರಾಗಿ ಮಾಡಿ ಎಂದು ತಮ್ಮ ಜೀವನದ ಅನುಭವಗಳನ್ನು ತಿಳಿಸುತ್ತಾ ಯುವಕರಲ್ಲಿ ಕಾನೂನು ಮತ್ತು ಶಿಕ್ಷಣದ ಮಹತ್ವವನ್ನು ತಿಳಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ
ವೈದ್ಯಾಧಿಕಾರಿಯಾದ ಡಾ.ರಶಿಯಾ ಅವರು ಸಾರ್ವಜನಿಕರನ್ನು ಕುರಿತು ಮಾತನಾಡುತ್ತಾ, ಪ್ರತಿಯೊಬ್ಬರು ಶಿಕ್ಷಣ, ಆರೋಗ್ಯ, ಉದ್ಯೋಗದ ಕಡೇ ಗಮನಹರಿಸಬೇಕು. ಚಿತ್ರದುರ್ಗ, ಬಳ್ಳಾರಿ, ಈ ಭಾಗದಲ್ಲಿನ ಜನರು ಬಹಳ ಶ್ರಮಜೀವಿಗಳು ಬುದ್ಧಿವಂತರು. ಇವರಿಗೆ ಸರಿಯಾಗಿ ಶಿಕ್ಷಣ ಮತ್ತು ಕಾನೂನಿನ ಅರಿವುವನ್ನು ಮೈಗೂಡಿಸಿಕೊಳ್ಳಬೇಕು. ಜೊತೆಗೆ ಈ ಊರಿನ ಗ್ರಾಮಸ್ಥರಲ್ಲಿ ವಿನಂತಿಸಿಕೊಳ್ಳವುದೇನೆಂದರೇ ನಿಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ ಒಳ್ಳೆಯ ವಿದ್ಯಾವಂತರಾಗಿ ಮಾಡಿ. ಜೊತೆಗೆ ಕಾನೂನಿನ ಅರಿವು ಮೂಡಿಸಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಗಳೂರು ತಾಲ್ಲೂಕಿನ ಮಾಜಿ ಶಾಸಕರಾದ ಹೆಚ್.ಪಿ.ರಾಜೇಶ್ ಮಾತನಾಡುತ್ತಾ ಸಾಮಾಜಿಕವಾಗಿ ರಾಜಕಾರಣಿಗಳು ಮತ್ತು ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳ ಮೂಲ ಉದ್ದೇಶ ಒಂದೇ ಅದು ಜನಸೇವೆ. ರಾಜಕಾರಣಿಗಳಾಗಿ ನಾವು ನಮ್ಮದೇ ಆದ ರೀತಿಯಲ್ಲಿ ಜನಸೇವೆ ಮಾಡುತ್ತೇವೆ. ಅಧಿಕಾರಿಗಳು ನಿರಂತರವಾಗಿ ಜನಸಂಪರ್ಕದೊಂದಿಗೆ ಸೇವೆ ಮಾಡುವುದರ ಮೂಲಕ ನಿರಂತರವಾಗಿ ಎಲ್ಲಾ ಬಗೆಯ ಜಾಗೃತಿ ಮೂಡಿಸುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಶಿವಕುಮಾರ್ ಅವರು ವೇದಿಕೆಯಲ್ಲಿ ಇದ್ದ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಕಾನೂನಿನ ಅರಿವು ಪ್ರತಿಯೊಬ್ಬ ಸಾರ್ವಜನಿಕರಿಗೆ ಮುಖ್ಯ. ತಮ್ಮಲ್ಲಿ ಯಾವುದೇ ಸಮಸ್ಯೆಗಳು ಉಂಟಾದಾಗ ಅವುಗಳಿಗೆ ಪರಿಹಾರ ನೀಡುವುದೇ ಕಾನೂನು. ಹಾಗಾಗಿ ಇಂದು ನಮ್ಮ ಗ್ರಾಮದಲ್ಲಿ ಕಾನೂನು ಜಾಗೃತಿ ಜಾತ್ರೆಯನ್ನು ಆಯೋಜಿಸಲಾಗಿದೆ ಗ್ರಾಮಸ್ಥರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು
ವೇದಿಕೆಯಲ್ಲಿ ನಿವೃತ್ತ ಡಿವೈಎಸ್ಪಿ ಬಾಳಪ್ಪ ತಳವಾರ್, ಪ್ರಹ್ಲಾದ್ ಡಿವೈಎಸ್ಪಿ, ನಾಟಕದ ಪರಿಕಲ್ಪನೆಯ ಶಶಿಧರ, ಡಾ.ಹೊಂಬಯ್ಯ ಹೊನ್ನಲಗೆರೆ ಉಪಸ್ಥಿತರಿದ್ದರು. ನಂತರ ಹದಿನಾರು ಕಲಾವಿದರಿಂದ ಕಾನೂನು ಅರಿವು ಜಾಗೃತಿ ಜಾಥಾ ನಾಟಕವನ್ನು ಅಭಿನಯಿಸಲಾಯಿತು. ಊರಿನ ಎಲ್ಲಾ ಗ್ರಾಮಸ್ಥರು ಉಪಸ್ಥಿರಿದ್ದರು. ಕಾರ್ಯಕ್ರಮವನ್ನು ಚಿತ್ರದುರ್ಗದ ಆಕಾಶವಾಣಿಯ ಡಾ. ನವೀನ್ ಮಸ್ಕಾಲ್ ಅವರು ನಿರೂಪಿಸಿದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











