Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

Agnipath ಯೋಜನೆ ಕೈಬಿಡಿ, ಯಾಕೆ ಹಠ ಮಾಡುತ್ತೀರ : ಸಿದ್ದರಾಮಯ್ಯ

Facebook
Twitter
Telegram
WhatsApp

 

ಬೆಂಗಳೂರು: ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಅಗ್ನಿಪಥ್ ನಾಲ್ಕು ವರ್ಷ ಮಾತ್ರ ನೇಮಕಾತಿ ಮಾಡಲಾಗುತ್ತಿದೆ. ನಾಲ್ಕು ವರ್ಷದ ಆದ ಮೇಲೆ ಪೆನ್ಷನ್ ಇಲ್ಲ.‌ ಹಾಗಾದರೆ ನಮ್ಮ ಭವಿಷ್ಯ‌ ಏನು ಎಂದು ಅವರು ಕೇಳುತ್ತಿದ್ದಾರೆ.

ಅಗ್ನಿಪಥ ಯೋಜನೆ‌ ಅವೈಜ್ಞಾನಿಕವಾಗಿದೆ. ಯೋಜನೆ ಕೈಬಿಡಿ ಏಕೆ ಹಠ ಮಾಡ್ತೀರಿ. ಇವರ ಬೇಡಿಕೆ ಹೋರಾಟ ನ್ಯಾಯಯುತವಾಗಿದೆ ಎಂದು ಬೆಂಬಲ ಇದೆ. ಆದರೆ ಹಿಂಸಾತ್ಮಕವಾಗಿ ಮಾಡಬಾರದು ಎಂದಿದ್ದಾರೆ.

ಇದೇ ವೇಳೆ ಮಧುಮಾದೇಗೌಡ ಗೆಲುವು ಸಾದಿಸಿದ ಬಗ್ಗೆ ಮಾತನಾಡಿ, ದಕ್ಷಿಣ ಪದವೀಧರ ಕ್ಷೇತ್ರದಿಂದ ಗೆದ್ದಿದ್ದಾರೆ. ಅದು ಸಾಧನೆಯೇ ಸರಿ. ಇಲ್ಲಿಯವರೆಗೆ ಪಕ್ಷದಿಂದ ಯಾರು ಗೆದ್ದಿರಲಿಲ್ಲ. ಎರಡು ಭಾರಿ ಜೆಡಿಎಸ್ ಶ್ರೀಕಂಠೇಗೌಡರು ಗೆದ್ದಿದ್ದರು. ಜೆಡಿಎಸ್ ನವರು ಭದ್ರಕೋಟೆ ಅಂದುಕೊಂಡಿದ್ದರು. ಆದರೆ ಈ ಭಾರಿ ಅವರ ಅಭ್ಯರ್ಥಿ‌ ಸೋತಿದ್ದಾರೆ. ೧೨೫೦೦ ಮತಗಳ ಅಂತರದಿಂದ ಗೆದಿದ್ದಾರೆ. ಮಂಡ್ಯದಲ್ಲಿ ಏಳಕ್ಕೆ ಏಳು ಜೆಡಿಎಸ್ ಶಾಸಕರಿದ್ದರು.

ಹಾಸನದಲ್ಲಿ ಆರು ಜೆಡಿಎಸ್ ಶಾಸಕರಿದ್ದಾರೆ. ಮೈಸೂರಿನಲ್ಲಿ‌ನಾಲ್ವರು ಜೆಡಿಎಸ್ ಶಾಸಕರಿದ್ದಾರೆ. ಚಾಮರಾಜನಗರದಲ್ಲಿ ಮಾತ್ರ ಜೆಡಿಎಸ್ ಇಲ್ಲ. ಈ‌ ನಾಲ್ಕು ಕ್ಷೇತ್ರಗಳು ದಕ್ಷಿಣ ಕ್ಷೇತ್ರಕ್ಕೆ‌ ಬರುತ್ತವೆ. ಗೆಲುವು ನಮ್ಮ ಕಾರ್ಯಕರ್ತರಿಗೆ ಉತ್ಸಾಹ ತಂದುಕೊಟ್ಟಿದೆ. ಹಿಂದೆ ಸ್ಥಳೀಯ ಸಂಸ್ಥೆಯಿಂದಲೂ‌ ಗೆದ್ದಿದ್ದೆವು. ಈಗ ಪದವೀಧರ ಕ್ಷೇತ್ರದಲ್ಲೂ ಗೆದ್ದಿದ್ದೇವೆ. ಪದವೀಧರು ವಿದ್ಯಾವಂತರು. ಇವರು ಕಾಂಗ್ರೆಸ್ ವಿರುದ್ಧವಾಗಿದ್ದಾರೆಂಬ ಅಭಿಪ್ರಾಯವಿತ್ತು. ಆದರೆ ಈ ಬಾರಿ ಪದವೀಧರರು ಕಾಂಗ್ರೆಸ್ ಕಡೆ ತಿರುಗಿದ್ದಾರೆ. ಕೇಂದ್ರದ ಸರ್ಕಾರದ ವೈಫಲ್ಯ. ಮಹಿಳೆಯರ ಸಮಸ್ಯೆ,ಶಿಕ್ಷಣ ಕ್ಷೇತ್ರದ ಗೊಂದಲ. ಇವುಗಳನ್ನೆಲ್ಲ‌ ನೋಡಿ ಕಾಂಗ್ರೆಸ್ ಗೆ ಮತ ನೀಡಿದ್ದಾರೆ. ಇದರರ್ಥ ಜನ ಕಾಂಗ್ರೆಸ್ ಪರವಿದ್ದಾರೆ ಅನ್ನೋದು. ಬಿಜೆಪಿಗೆ ವಿರುದ್ಧವಾದ ಅಭಿಪ್ರಾಯ ಜನರಿಗಿದೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ತುಂಬಾ ಪ್ರೀತಿಸುವರು ಆದರೆ ಬೇರೆಯವರ ಜೊತೆ ಮದುವೆ ಒಳ್ಳೆಯದಲ್ಲ

ಈ ರಾಶಿಯವರು ತುಂಬಾ ಪ್ರೀತಿಸುವರು ಆದರೆ ಬೇರೆಯವರ ಜೊತೆ ಮದುವೆ ಒಳ್ಳೆಯದಲ್ಲ, ಗುರುವಾರ ರಾಶಿ ಭವಿಷ್ಯ -ಮೇ-2,2024 ಸೂರ್ಯೋದಯ: 05:53, ಸೂರ್ಯಾಸ್ತ : 06:32 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ ,

ಇಂದಿನಿಂದ ರಾಜ್ಯಾದ್ಯಂತ ಮಳೆ : ಬೆಂಗಳೂರಿಗೆ ಮಳೆ ದರ್ಶನ ಯಾವಾಗಿಂದ..?

ಬೆಂಗಳೂರು: ಬಿಸಿಲಿನ ತಾಪ ಅದ್ಯಾಕೆ ದಿನೇ ದಿನೇ ಏರಿಕೆಯಾಗುತ್ತಿದೆಯೋ ತಿಳಿದಿಲ್ಲ. ಜನರಂತು ಬಿಸಿಲಿನ ಬೇಗೆಗೆ ಹೈರಾಣಾಗಿ ಹೋಗಿದ್ದಾರೆ. ಕಳೆದ ವರ್ಷವಂತು ಮಳೆಯಿಲ್ಲ ಈ ವರ್ಷ ಮೊದಲ ಮಳೆಯೂ ಸರಿಯಾಗಿ ಆಗಿಲ್ಲ. ಮೇ ತಿಂಗಳಿಗೆ ಬಂದರೂ

ಆದಷ್ಟು ಬೇಗ ಸತ್ಯ ಹೊರಬರಲಿದೆ ಎಂದು ಪೋಸ್ಟ್ ಹಾಕಿ ಕಮೆಂಟ್ ಆಫ್ ಮಾಡಿದ ಪ್ರಜ್ವಲ್ ರೇವಣ್ಣ..!

ಬೆಂಗಳೂರು: ಅಶ್ಲೀಲ ವಿಡಿಯೋಗಳಿರುವ ಪೆನ್ ಡ್ರೈವ್ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಸೀದಾ ಜರ್ಮನಿ ಪ್ರವಾಸಕ್ಕೆ ಹೊರಟಿದ್ದರು. ವಿಚಾರ ದೊಡ್ಡದಾದ ಕೂಡಲೇ ಎಚ್ಚೆತ್ತ ರಾಜ್ಯ ಸರ್ಕಾರ, ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಿತ್ತು. ಎಸ್ಐಟಿ

error: Content is protected !!