ದಾವಣಗೆರೆ ಜಿಲ್ಲಾಸ್ಪತ್ರೆಯ ವೈದ್ಯ ಅರುಣ್ ಚಂದ್ರ ನೇಣಿಗೆ ಶರಣು..!

suddionenews
1 Min Read

 

ದಾವಣಗೆರೆ: ಚಿಗಟೇರಿ ಜಿಲ್ಲಾಸ್ಪತ್ರೆಯ ವೈದ್ಯರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಡಾ. ಅರುಣ್ ಚಂದ್ರ ಆತ್ಮಹತ್ಯೆ ಮಾಡಿಕೊಂಡ ವೈದ್ಯ.

ಡಾ. ಅರುಣ್ ಚಂದ್ರ ಕಳೆದ ಮೂರು ವರ್ಷಗಳ ಹಿಂದೆ ಸಿಜೆ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇರಿಕೊಂಡಿದ್ದರು. ಗೌರವ ಧನದ ರೂಪದಲ್ಲಿ ಇವರಿಗೆ ಸಂಬಳ ಬರುತ್ತಿತ್ತು. ಯಾವುದೇ ರೋಗಿ ಇರಲಿ ಅವರನ್ನು ಆತ್ಮೀಯರಾಗಿ ಮಾತನಾಡಿಸುತ್ತಿದ್ದರು. ರೋಗಿಗಳ ಕಡೆಯವರಿಗೂ ಅಷ್ಟೇ ಡಾ ಅರುಣ್ ಚಂದ್ರ ಎಂದರೆ ಸ್ವಲ್ಪ ಬಾಂಧವ್ಯವಿತ್ತು. ಆದರೆ ಇಂಥ ಮನುಷ್ಯ ಎಸ್ ಎಸ್ ಲೇಔಟ್ ಎ ಬ್ಲಾಕ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಅರುಣ್ ಚಂದ್ರ ತಮ್ಮ ಮನೆಯ ಬಾತ್ ರೂಮಿನಲ್ಲಿ ಪ್ಯಾಂಟ್ ಒಂದನ್ನು ಬಳಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಾಳಕ್ಕೆ ವಿದ್ಯಾನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *