Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪ್ರಧಾನಿ ಮೋದಿಯವರು ಮಂಡ್ಯದಲ್ಲಿ‌ ಮಹಿಳೆಯೊಬ್ಬರ ಕಾಲಿಗೆ ಬಿದ್ದಿದ್ದೇಕೆ ಗೊತ್ತಾ..?

Facebook
Twitter
Telegram
WhatsApp

ಮಂಡ್ಯ: ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರು ಮಂಡ್ಯ ಮತ್ತು ಧಾರವಾಡಕ್ಕೆ ಭೇಟಿ ನೀಡಿ, ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಈ ವೇಳ ಮಂಡ್ಯದಲ್ಲಿ ಪ್ರಧಾನಿ ಮೋದಿ ಅವರು ಮಹಿಳೆಯೊಬ್ಬರ ಕಾಲಿಗೆ ಬಿದ್ದ ದೃಶ್ಯ ಕಂಡು ಬಂದಿದೆ. ಯಾಕೆ..? ಏನು ಎಂಬ ವಿಚಾರವನ್ನು ಆ ಮಹಿಳೆಯೇ ಹೇಳಿದ್ದಾರೆ.

ಹೀಗೆ ಪ್ರಧಾನಿ ಮೋದಿ ಅವರು ಕಾಲಿಗೆ ಬೀಳಲು ಹೋದ ಮಹಿಳೆಯ ಹೆಸರು ಅನುರಾಧ ಅಂತ. ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ. ಮೋದಿಯವರನ್ನು ಹತ್ತಿರದಿಂದ ಕಂಡಂತ ಅನುರಾಧ ಅವರಿಗೆ ಬಹಳ ಸಂತಸವಾಗಿ, ಅವರ ಕಾಲಿಗೆ ಬೀಳಲು ಹೋಗಿದ್ದಾರೆ. ಆದರೆ ಪ್ರಧಾನಿಯೇ ವಾಪಾಸ್ ಅವರ ಕಾಲಿಗೆ ಬಿದ್ದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅನುರಾಧ, ನರೇಂದ್ರ ಮೋದಿಜೀ ಅವರನ್ನು ನೋಡಿದ ಖುಷಿ. ಮತ್ತೊಂದು ಕಡೆ ದೇವರ ನನ್ನ ಎದುರು ನಿಂತಂತೆ ಫೀಲ್ ಆಗಿ ಅವರ ಕಾಲಿಗೆ ಬೀಳಲು ಹೋದೆ. ಆದ್ರೆ ಅವರೇ ನನ್ನ ಕಾಲಿಗೆ ಬಿದ್ದು ಬಿಟ್ಟರೂ. ನಂಗೆ ಏನು ಮಾಡಬೇಕೆಂದು ತಿಳಿಯದೆ ಕೆಳಗೆ ಕೂತುಬಿಟ್ಟೆ. ಅವರನ್ನು ನೋಡಬೇಕೆಂಬ ಕನಸು ನಮ್ಮ ಬಿಜೆಪಿ ನಾಯಕರಿಂದ ನನಸಾಗಿದೆ. ಮೋ್ಇಯವರಾಗಲಿ, ಅಮಿತ್ ಶಾ ಅವರಾಗಲಿ ಹೆಣ್ಣುಮಕ್ಕಳಿಗೆ ತುಂಬಾ ಗೌರವ ಕೊಡುತ್ತಾರೆ. ಅದಕ್ಕೆ ಸಾಕ್ಷಿ ಎಂಬಂತೆ ನಿರ್ಮಲಾ ಸೀತರಾಮನ್, ಶೋಭಾ ಕರಂದ್ಲಾಜೆ ಇದ್ದಾರೆ. ನಮ್ಮ ಜಿಲ್ಲೆಯಲ್ಲಿ ನಾವೂ ಬಿಜೆಪಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ. ಮೋದಿ ಅವರು, ಅಮಿತ್ ಶಾ ಅವರು ನಮಗೆ ಹುಮ್ಮಸ್ಸು ತುಂಬಿ ಹೋಗಿದ್ದಾರೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಸಂಗಾತಿಯೊಂದಿಗೆ ಸಾಮರಸ್ಯ ಪತ್ನಿಯೊಂದಿಗೆ ವಿರಸ

ಈ ರಾಶಿಯವರು ಸಂಗಾತಿಯೊಂದಿಗೆ ಸಾಮರಸ್ಯ ಪತ್ನಿಯೊಂದಿಗೆ ವಿರಸ, ಬುಧವಾರ- ರಾಶಿ ಭವಿಷ್ಯ ಅಕ್ಟೋಬರ್-17,2022 ಸೂರ್ಯೋದಯ: 06:10 ಏಎಂ, ಸೂರ್ಯಾಸ್ತ : 05:52 ಪಿಎಂ ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಆಶ್ವಯುಜ ಮಾಸ,

ಗೋವಿಂದ ಕಾರಜೋಳರವರನ್ನು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ,ಏಪ್ರಿಲ್. 16 : ತಾಯಿಯ ಅಂತ್ಯ ಸಂಸ್ಕಾರ ನಡೆಸಿ ಅಂದೇ ಕೆಲಸದಲ್ಲಿ ನಿರತರಾದ ನರೇಂದ್ರಮೋದಿ ಮೂರನೆ ಬಾರಿಗೆ

ಅಭ್ಯರ್ಥಿ ಗೆಲುವಿಗೆ ಶಕ್ತಿ ಕೇಂದ್ರದ ಪ್ರಮುಖರು ಹಗಲು-ರಾತ್ರಿ ಪ್ರಾಮಾಣಿಕವಾಗಿ ಕೆಲಸ ಮಾಡಿ : ಸಂತೋಷ್‍ ಜಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ,ಏಪ್ರಿಲ್. 16  : ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಕಾಂಗ್ರೆಸ್‍ನವರಿಗೆ ಬೇಕಿಲ್ಲ. ಅವರವರ ಕುರ್ಚಿ ಉಳಿಕೊಳ್ಳುವುದೇ

error: Content is protected !!