Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಿಲ್ವಪತ್ರೆ ಪೌಡರ್ ನಿಂದ ಕರುಳು ಶುದ್ಧವಾಗುತ್ತೆ ಅನ್ನೋದು ಗೊತ್ತಾ..?

---Advertisement---

ಸಾಮಾನ್ಯವಾಗಿ ಆಯುರ್ವೇದದಲ್ಲಿ ನಮ್ಮ ನಡುವೆ ಸಿಗುವ ಮರ, ಗಿಡ, ಬಳ್ಳಿಗಳೇ ಔಷಧಗಳಾಗುತ್ತವೆ. ಅದರಲ್ಲಿರುವ ಔಷಧೀಯ ಗುಣಗಳನ್ನ ಆಯುರ್ವೇದದಲ್ಲಿ ಅರಿತಿರುತ್ತಾರೆ. ಅದರಲ್ಲಿ ಒಂದು ಬಿಲ್ವ ಪತ್ರೆ. ಸಾಮಾನ್ಯವಾಗಿ ಈ ಬಿಲ್ವ ಪತ್ರೆ ಎಲ್ಲರಿಗೂ ಗೊತ್ತು. ಶಿವನಿಗೆ ಇಷ್ಟವಾದಂತ ಪತ್ರೆ ಯಾಗಿರುವ ಕಾರಣ ದೇವರಿಗೆ ಅರ್ಪಣೆ ಮಾಡಲಾಗುತ್ತದೆ. ಆದರೆ ಇದರಲ್ಲೂ ಔಷಧೀಯ ಗುಣಗಳಿವೆ ಅನ್ನೋದು ನಿಮಗೆ ಗೊತ್ತಾ..?

ಹೌದು ಇದರಲ್ಲಿ ಕರುಳು ಶುದ್ಧ ಮಾಡುವ ಶಕ್ತಿ, ಹಾರ್ಟ್ ಬ್ಲಾಕೇಜ್ ತಡೆಯುವ ಸಾಮರ್ಥ್ಯ ಹಾಗೇ ಉಷ್ಣ ದೇಹ ಇರುವವರು ಇದನ್ನು ಉಪಯೋಗಿಸಿದರೆ ದೇಹ ತಂಪಾಗುತ್ತದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಆಯುರ್ವೇದದ ಪಂಡಿತರು ಹೇಳಿದ ಮಾಹಿತಿಯನ್ನು ಆಧರಿಸಿದ ಲೇಖನವಾಗಿದೆ. ಹಾಗಾದ್ರೆ ಈ ಬಿಲ್ವ ಪತ್ರೆಯನ್ನು ದೇಹದ ಆರೋಗ್ಯಕ್ಕಾಗಿ ಬಳಸುವುದು ಹೇಗೆ ಗೊತ್ತಾ..?

ಒಂದು ವೇಳೆ ನಿಮ್ಮ ಮನೆಯಲ್ಲಿ ಬಿಲ್ವ ಪತ್ರೆಯನ್ನು ದೇವರಿಗೆ ಅರ್ಪಿಸಿದ್ದರೆ, ಅದನ್ನು ಮಾರನೇ ದಿನ ಬಿಸಾಡಬೇಡಿ. ಬದಲಿಗೆ ಅದರಿಂದ ಪೌಡರ್ ಮಾಡಿಕೊಳ್ಳಿ. ಬಿಲ್ವ ಪತ್ರೆಯನ್ನು ಚೆನ್ನಾಗಿ ಒಣಗಿಸಿ. ಬಳಿಕ ಅದನ್ನು ಪುಡಿ ಮಾಡಿ ಶೇಖರಣೆ ಮಾಡಿಟ್ಟುಕೊಳ್ಳಿ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ, ಸ್ವಲ್ಪ ಉಗುರು ಬೆಚ್ಚಗಿನ ನೀರಿನಲ್ಲಿ ಆ ಪತ್ರೆಯ ಪೌಡರ್ ಹಾಕಿಕೊಂಡು ಒಂದು ಲೋಟ ನೀರು ಕುಡಿಯಿರಿ. ಇದರಿಂದ ಕರುಳು ಸ್ವಚ್ಛವಾಗುತ್ತದೆ. ಅಷ್ಟೇ ಅಲ್ಲ ಈ ಪೌಡರ್ ಸೇವನೆ ಮಾಡುವುದರಿಂದ ರಕ್ತ ಶುದ್ಧಿಯಾಗುತ್ತದೆ, ದೃಷ್ಟಿಯ ಸಮಸ್ಯೆ ಕಳೆಯುತ್ತದೆ, ಮೆದುಳು ಆಕ್ಟೀವ್ ಆಗಿರುತ್ತದೆ. ಎಷ್ಟೋ ಜನ ಬಿಲ್ವ ಪತ್ರೆಯ ತಂಬುಳಿಯನ್ನು ಮಾಡಿ ಸೇವಿಸುತ್ತಾರೆ. ಎಲೆಯ ಪೌಡರ್ ಕುಡಿಯಲು ಕಷ್ಟ ಎನಿಸಿದರೆ ಈ ರೀತಿಯೂ ಮಾಡಬಹುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...