Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶೌಚಾಲಯಕ್ಕೆ ಮೊಬೈಲ್ ಕೊಂಡೊಯ್ಯುವ ಅಭ್ಯಾಸ ನಿಮಗಿದೆಯೇ? ನಿಮ್ಮ ಹಣಕಾಸು, ಪ್ರಗತಿಯ ಮೇಲೆ ಬೀರಬಹುದು ನೆಗೆಟಿವ್ ಎಫೆಕ್ಟ್!

---Advertisement---

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಇಲ್ಲದೆ ಬದುಕುವುದನ್ನು ಊಹಿಸಿಕೊಳ್ಳುವುದೂ ಕಷ್ಟ. ಬೆಳಿಗ್ಗೆ ಕಣ್ಣು ಬಿಟ್ಟಾಗಿನಿಂದ ಹಿಡಿದು ರಾತ್ರಿ ಮಲಗುವವರೆಗೆ ಸ್ಮಾರ್ಟ್ಫೋನ್ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ಇದೇ ಕಾರಣಕ್ಕೆ, ಶೌಚಾಲಯಕ್ಕೆ ಹೋಗುವಾಗಲೂ ಮೊಬೈಲ್ ಕೈಯಲ್ಲಿ ಹಿಡಿದುಕೊಂಡು ಹೋಗುವುದು ಕೋಟ್ಯಂತರ ಜನರ ನಿತ್ಯದ ಹವ್ಯಾಸವಾಗಿ ಬದಲಾಗಿದೆ. ಸೋಶಿಯಲ್ ಮೀಡಿಯಾ ಸ್ಕ್ರೋಲಿಂಗ್, ಮೆಸೇಜ್ ಗಳಿಗೆ ರಿಪ್ಲೈ, ಇಮೇಲ್ ಚೆಕ್ ಮಾಡುವುದು ಹೀಗೆ ಬಾತ್ ರೂಮ್ ನಲ್ಲಿ ಫೋನ್ ಬಳಕೆ ಸಾಮಾನ್ಯವಾಗಿದೆ.

ಮೇಲ್ನೋಟಕ್ಕೆ ಇದು ಅತ್ಯಂತ ನಿರುಪದ್ರವಿ ಅಭ್ಯಾಸದಂತೆ ಕಂಡರೂ, ವಾಸ್ತು ಶಾಸ್ತ್ರದ ಪ್ರಕಾರ ಈ ಸಣ್ಣ ತಪ್ಪು ನಿಮ್ಮ ಧನಾತ್ಮಕ ಶಕ್ತಿ ಗಮನ ಮತ್ತು ಆರ್ಥಿಕ ಅವಕಾಶಗಳ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಪ್ರಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞೆ ಜೈ ಮದನ್ ಎಚ್ಚರಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ದಿನದ ಆರಂಭದ ಮೊದಲ ಕೆಲವು ನಿಮಿಷಗಳಲ್ಲಿ ಈ ತಪ್ಪು ಮಾಡಲೇಬಾರದು ಎನ್ನುತ್ತಾರೆ ಅವರು.

ವಾಸ್ತು ಶಾಸ್ತ್ರ ಏನೆನ್ನುತ್ತದೆ?

ವಾಸ್ತು ತತ್ವಗಳ ಪ್ರಕಾರ, ಶೌಚಾಲಯ ಅಥವಾ ವಾಶ್ರೂಮ್ ಎಂಬುದು ದೇಹದ ಕಲ್ಮಶಗಳನ್ನು ಹೊರಹಾಕುವ, ಶುದ್ಧೀಕರಣದ ಮತ್ತು ವಿಸರ್ಜನೆಯ ಜಾಗವಾಗಿದೆ. ಅದು ಎಷ್ಟೇ ಆಧುನಿಕ ಮತ್ತು ಸ್ವಚ್ಛವಾಗಿದ್ದರೂ, ವಾಸ್ತು ದೃಷ್ಟಿಯಲ್ಲಿ ಅದು ನೆಗೆಟಿವ್ ಎನರ್ಜಿ (ಅನಗತ್ಯ ಶಕ್ತಿ) ಹೊರಹೋಗುವ ಸ್ಥಳವೇ ಆಗಿದೆ. ಇಂತಹ ವಾತಾವರಣಕ್ಕೆ ನಮ್ಮ ದೈನಂದಿನ ಜೀವನದ ಅತ್ಯಂತ ಪ್ರಮುಖ ವಸ್ತುವಾದ ಸ್ಮಾರ್ಟ್ಫೋನ್ ಅನ್ನು ಕೊಂಡೊಯ್ದಾಗ, ಅದು ಅಲ್ಲಿನ ನಕಾರಾತ್ಮಕ ಶಕ್ತಿಗಳಿಗೆ ಒಡ್ಡಿಕೊಳ್ಳುತ್ತದೆ.

ಬೆಳಗ್ಗೆ ಎದ್ದ ತಕ್ಷಣ ವಾಶ್ರೂಮ್ನಲ್ಲಿ ಮೊಬೈಲ್ ಬಳಸುವುದರಿಂದ ದಿನದ ಉತ್ಪಾದಕತೆ ಮತ್ತು ಮಾನಸಿಕ ಸ್ಪಷ್ಟತೆ ಕಡಿಮೆಯಾಗುತ್ತದೆ. ಹೊಸ ದಿನವನ್ನು ಪ್ರಶಾಂತವಾಗಿ ಆರಂಭಿಸುವ ಬದಲಿಗೆ, ತಕ್ಷಣವೇ ಕಚೇರಿಯ ಇಮೇಲ್ಗಳು ಅಥವಾ ಸೋಶಿಯಲ್ ಮೀಡಿಯಾ ನೋಟಿಫಿಕೇಶನ್ಗಳ ಜಗತ್ತಿಗೆ ಮುಳುಗುವುದು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ.

ಜ್ಯೋತಿಷಿ ಜೈ ಮದನ್ ಅವರ ಪ್ರಕಾರ, ಇಂದಿನ ಕಾಲದಲ್ಲಿ ಮೊಬೈಲ್ ಕೇವಲ ಸಂವಹನದ ಸಾಧನವಾಗಿ ಉಳಿದಿಲ್ಲ. ಅದೀಗ ಡಿಜಿಟಲ್ ವ್ಯಾಲೆಟ್, ಯುಪಿಐ ಪೇಮೆಂಟ್ಸ್, ಬ್ಯಾಂಕಿಂಗ್ ಅಪ್ಲಿಕೇಶನ್ಗಳು ಮತ್ತು ಉದ್ಯೋಗದ ಅವಕಾಶಗಳನ್ನು ತಂದುಕೊಡುವ ವೇದಿಕೆಯಾಗಿದೆ. ಅಂದರೆ, ನಮ್ಮ ಆರ್ಥಿಕ ಜೀವನದ ಬಹುಪಾಲು ನಿಯಂತ್ರಣ ಮೊಬೈಲ್ನಲ್ಲಿದೆ. ಹೀಗಾಗಿ ವಾಸ್ತು ಶಾಸ್ತ್ರದಲ್ಲಿ ಇದನ್ನು ಸಮೃದ್ಧಿ, ಪ್ರಗತಿ ಮತ್ತು ಸಂವಹನದ ಸಂಕೇತವೆಂದು ಪರಿಗಣಿಸಲಾಗುತ್ತದೆ.

ನಾವು ಯಾರಾದರೂ ಹಣ ಅಥವಾ ಪ್ರಮುಖ ಆಸ್ತಿ ಪತ್ರಗಳನ್ನು ವಾಶ್ರೂಮ್ನಲ್ಲಿ ಇಡುತ್ತೇವಾ? ಖಂಡಿತ ಇಲ್ಲ. ಹಾಗಿದ್ದಾಗ, ಹಣಕಾಸಿನ ವಹಿವಾಟಿನ ಸರ್ವಸ್ವವೂ ಆಗಿರುವ ಸ್ಮಾರ್ಟ್ಫೋನ್ ಅನ್ನು ಶೌಚಾಲಯದೊಳಗೆ ಹೇಗೆ ತಾನೇ ತೆಗೆದುಕೊಂಡು ಹೋಗಲು ಸಾಧ್ಯ? ಎಂದು ಜೈ ಮದನ್ ಪ್ರಶ್ನಿಸುತ್ತಾರೆ. ಡ್ರೈನೇಜ್ ಅಥವಾ ತ್ಯಾಜ್ಯ ವಿಸರ್ಜನೆಯ ಜಾಗಕ್ಕೆ ಇಂತಹ ಉನ್ನತ ಶಕ್ತಿಯ ವಸ್ತುವನ್ನು ಕೊಂಡೊಯ್ಯುವುದು ವಾಸ್ತು ಪ್ರಕಾರ ಅಪಚಾರ ಎನಿಸಿಕೊಳ್ಳುತ್ತದೆ.

ವಾಸ್ತು ನಂಬಿಕೆಗಳನ್ನು ಬದಿಗಿಟ್ಟು ನೋಡಿದರೂ, ಈ ಅಭ್ಯಾಸದಿಂದ ಹಲವು ಪ್ರಾಯೋಗಿಕ ತೊಂದರೆಗಳಿವೆ.

ಸಮಯದ ಪೋಲು: ಕೇವಲ 5 ನಿಮಿಷಗಳ ಕೆಲಸಕ್ಕೆಂದು ಹೋದವರು ಮೊಬೈಲ್ ಸ್ಕ್ರೀನ್ ನೋಡುತ್ತಾ ಗಂಟೆಗಟ್ಟಲೆ ಕಾಲ ಕಳೆಯುತ್ತಾರೆ. ಇದು ದಿನದ ದಿನಚರಿಯನ್ನೇ ಹಾಳು ಮಾಡುತ್ತದೆ.

ಮಾನಸಿಕ ಗೊಂದಲ: ಬೆಳಗ್ಗೆ ಬೆಳಗ್ಗೆಯೇ ನೂರಾರು ನೋಟಿಫಿಕೇಶನ್ಗಳನ್ನು ನೋಡುವುದರಿಂದ ಸೃಜನಶೀಲತೆ (Creativity) ಕುಂಠಿತಗೊಂಡು, ಅನಗತ್ಯ ಗೊಂದಲ ಮೂಡುತ್ತದೆ.

ನಿಮ್ಮ ಜೀವನದಲ್ಲಿ ಉತ್ತಮ ಶಕ್ತಿ ಮತ್ತು ಆರ್ಥಿಕ ಸಮೃದ್ಧಿ ನೆಲೆಸಬೇಕಾದರೆ, ಶೌಚಾಲಯಕ್ಕೆ ಹೋಗುವಾಗ ಮೊಬೈಲ್ ಅನ್ನು ಹೊರಗೇ ಇಟ್ಟು ಹೋಗಿ. ಇದರಿಂದ ಸ್ಕ್ರೀನ್ ಟೈಮ್ ಕಡಿಮೆಯಾಗುವುದಲ್ಲದೆ, ದಿನದ ಆರಂಭ ಪ್ರಶಾಂತವಾಗಿ ಮತ್ತು ಗಮನಹರಿಸಲು ಪೂರಕವಾಗಿ ಇರುತ್ತದೆ.
ನಿಮಗೆ ವಾಸ್ತು ನಂಬಿಕೆಗಳ ಮೇಲೆ ವಿಶ್ವಾಸವಿರಲಿ ಅಥವಾ ಇಲ್ಲದಿರಲಿ, ಬೆಳಗ್ಗಿನ ಸಮಯದಲ್ಲಿ ಮೊಬೈಲ್ನಿಂದ ಕೊಂಚ ದೂರವಿರುವುದು ನಿಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now