Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

1 ರೂಪಾಯಿಗೆ 1 ಲೀಟರ್ ಹಾಲು ಕೊಡ್ತಿರೋ ಕಂಪನಿ ವಿರುದ್ಧ ಡಿಕೆ ಸುರೇಶ್ ಗರಂ..!

---Advertisement---

ಬೆಂಗಳೂರು: ಇವತ್ತು ಶಿರಾ ಕ್ಷೇತ್ರದಲ್ಲಿ ಇಡೀ ರಾಷ್ಟ್ರದಲ್ಲಿ ಕೋಟ್ಯಾಂತರ ಜನ ಹಾಲನ್ನ ನಂಬಿಕೊಂಡು ಜೀವನ ಮಾಡ್ತಾ ಇದ್ದಾರೆ. ಇವತ್ತು ಮಾರುಕಟ್ಟೆಯಲ್ಲಿ ಒಂದು ದಿಗ್ಬ್ರಮೆ ಕಂಡಿದೆ. ಕೆಲವು ಪ್ಲಿಪ್ ಕಾರ್ಟ್ ಎಂಬ ಸಂಸ್ಥೆ 1 ರೂಪಾಯಿಗೆ 1 ಲೀಟರ್ ಹಾಲು ಕೊಡ್ತಿದೆ. ಈ ಮೂಲಕ ರೈತ ಸಮುದಾಯವನ್ನು ಧ್ವಂಸ ಮಾಡುವಂತ ಕೃತ್ಯಕ್ಕೆ ಕೈ ಹಾಕಿದೆ ಎಂದು ಡಿಕೆ ಸುರೇಶ್ ಆಕ್ರೋಶ ಹೊರ ಹಾಕಿದ್ದಾರೆ.

ಒಂದು ರೂಪಾಯಿಗೆ ಒಂದು ಲೀಟರ್ ಹಾಲು, ಹಣ‌ಮಾಡುವ ಬರದಲ್ಲಿ, ರೈತರ ಕುಲಕ್ಕೆ ಬೆಂಕಿ ಇಡುವಂತ ಕೆಲಸವನ್ನ ಮಾಡ್ತಾ ಇದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಇದರ ಬಗ್ಗೆ ಗಮನ ಹರಿಸಿ, ತಕ್ಷಣ ಇದಕ್ಕೆ ಕಡಿವಾಣ ಹಾಕದೆ ಇದ್ದರೆ ಇಡೀ ರಾಷ್ಟ್ರದಾದ್ಯಂತ ಫ್ಲಿಪ್ ಕಾರ್ಟ್ ಸಂಸ್ಥೆಯ ವಿರುದ್ಧ ದಂಗೆ ಏಳಬೇಕಾದ ಅನಿವಾರ್ಯ ಪರಿಸ್ಥಿತಿ ಬರುತ್ತದೆ. ಇದರ ಬಗ್ಗೆ ಮಾನ್ಯ ಪ್ರಧಾನಮಂತ್ರಿಗಳಿಗೂ ಕೂಡ ಇವತ್ತು ಇಮೇಲ್ ಮಾಡುತ್ತಿದ್ದೇನೆ. ತಕ್ಷಣ ಈಗಗಾಲೇ ವ್ಯಾಪಕವಾದ ಪ್ರಚಾರವನ್ನ ಮಾಡಿದ್ದಾರೆ.

ಪ್ರಚಾರಕ್ಕೋಸ್ಕರವೇ 2 ಸಾವಿರ ಕೋಟಿ ಹಣವನ್ನು ವೆಚ್ಚ ಮಾಡ್ತಾ ಇದ್ದಾರೆ. ಇಡೀ ದೇಶದಾದ್ಯಂತ ಆನ್ಲೈನ್ ಫ್ಲಾಟ್ ಫಾರ್ಮ್ ನಲ್ಲಿ ಕೇವಲ ಒಂದು ರೂಪಾಯಿಗೆ ಹಾಲನ್ನ ಕೊಡ್ತಾ ಇರುವಂತದ್ದು. ಇದು ಅವರ ಮಾರ್ಕೆಟ್ ಶೇರ್ ನ ಪಡೆಯಬೇಕು ಎಂಬ ದೃಷ್ಟಿಯಿಂದ, ಸ್ಪರ್ಧೆ ಮಾಡಬೇಕು ಎಂಬ ದೃಷ್ಟಿಯಿಂದ ಇವತ್ತು ಮಾಡುತ್ತಿರುವಂತದ್ದು ರೈತ ಸಮುದಾಯಕ್ಕೇನೆ ಹೊಡೆತ ಬೀಳುತ್ತದೆ. ಪಬ್ಲಿಕ್ ಶೇರ್ ಹಣವನ್ನ ತಂದು ಬಂಡವಾಳ ಹಾಕಿ, ಒಕ್ಕೂಟ ವ್ಯವಸ್ಥೆಗಳಿಗೆ ಸುಮಾರು 60-75 ವರ್ಷದಿಂದ ಈ ಒಕ್ಕೂಟ ವ್ಯವಸ್ಥೆ ರೈತರನ್ನ ಕಾಪಾಡುತ್ತಾ ಬಂದಿದೆ ಎಂಬ ಮಾತನ್ನ ಹೇಳಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...