ಏನ್ ಮಾಡ್ತೀರಾ ಮಾಡ್ಕೊಳಿ.. ರೈತರ ಮೇಲೆ ಡಿಕೆ ಶಿವಕುಮಾರ್ ಗರಂ, ಅಂತದ್ದೇನಾಯ್ತು..?

1 Min Read

 

ರಾಮನಗರ: ಗ್ರೇಟರ್ ಬೆಂಗಳೂರು ಮಾಡುವುದಕ್ಕೆ ಹೊರಟಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಗ್ರೇಟರ್ ಬೆಂಗಳೂರು ಯೋಜನೆಗೆ ರಾಮನಗರ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ನಡೆದಿದೆ. ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದು, ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.

ಈ ವಿಚಾರ ತಿಳಿದ ತಕ್ಷಣ ರಾಮನಗರ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಬಂದ ಡಿಕೆ ಶಿವಕುಮಾರ್ ಅವರು, ರೈತರೊಂದಿಗೆ ಸಂವಾದ ನಡೆಸಿದ್ದಾರೆ. ರೈತರಿಗೆ ಸಮಾಧಾನ ಮಾಡುವುದಕ್ಕೆ ಪ್ರಯತ್ನಿಸಿದ್ದಾರೆ. ಆದರೆ ಮಾತನಾಡುವ ನಡುವೆಯೇ ರೈತರು ಹಾಗೂ ಡಿಕೆ ಶಿವಕುಮಾರ್ ನಡುವಿನ ಮಾತುಕತೆ ಜೋರಾಗಿದೆ. ಈ ವೇಳೆ ಡಿಕೆ ಶಿವಕುಮಾರ್ ಅವರು ರೈತರ ಮೇಲೆ ರೇಗಿದ್ದಾರೆ.

ನನ್ನ ಶಾಸಕನಿಗೆ ಅವಮಾನ ಮಾಡಿದರೆ ಹೇಗೆ..? ನಿಮ್ಮಿಂದ ಧಿಕ್ಕಾರ ಕೂಗುವುದಕ್ಕೆ ಮಾತ್ರ ಸಾಧ್ಯ. ಏನು ಮಾಡ್ತೀರಾ, ಮಾಡಿಕೊಳ್ಳಿ. ಕಾನೂನಿನಲ್ಲಿ ಏನು ಸಹಾಯ ಮಾಡಬೇಕೋ ಮಾಡುತ್ತೇನೆ. ಅದನ್ನ ಬಿಟ್ಟು ಹೀಗೆ ಕೂಗಾಡಿದರೆ ಏನು ಆಗಲ್ಲ. ಯಾವನ್ ಬಂದಿದ್ದ ನಿಮ್ಮ ಪರವಾಗಿ ಎಂದು ಗರಂ ಆಗಿದ್ದಾರೆ. ಈ ಬೆಳವಣಿಗೆ ರೈತರಿಗೆ ಬೇಸರ ತರಿಸಿದೆ. ಈ ಯೋಜನೆಯಲ್ಲಿ ಶಾಸಕ ಬಾಲಕೃಷ್ಣ ಅವರ ಪಾತ್ರ ಇರಬಹುದು ಎಂಬುದು ರೈತರ ಅನುಮಾನವಾಗಿದೆ. ಇದೇ ಕಾರಣಕ್ಕಾಗಿಯೇ ರೈತರು ಇಂದು ಪ್ರತಿಭಟನೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks