ಶಾಸಕ ಎಸ್.ಟಿ. ಸೋಮಶೇಖರ್ ಅವರು ಕಾಂಗ್ರೆಸ್ ನಾಯಕರ ಜೊತೆಗೆ ಗುರುತಿಸಿಕೊಳ್ಳುತ್ತಿರುವುದು ಹೊಸದೇನು ಅಲ್ಲ. ಕಾಂಗದರೆಸ್ ನಾಯಕರ ಕಾರ್ಯಕ್ರಮದಲ್ಲಿಯೇ ಹೆಚ್ಚಾಗಿ ಗುರುತಿಸಿಕೊಳ್ಳುತ್ತಾರೆ. ಸಿಎಂ, ಡಿಸಿಎಂ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ಇರುತ್ತಾರೆ. ಇದೀಗ ಸಿಎಂ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಕಾರ್ಯಕ್ರಮ ಒಂದರಲ್ಲಿ ಹೊಗಳಿದ್ದಾರೆ. ಅದರಲ್ಲೂ ಡಿಕೆ ಶಿವಕುಮಾರ್ ಅವರಿಂದ ರಾಜಕೀಯವಾಗಿ ಬೆಳೆದಿರುವ ಬಗ್ಗೆಯೂ ಮಾತನಾಡಿದ್ದಾರೆ.
ಹೆಚ್ಚು ಕಡಿಮೆ ಮೂಡದಲ್ಲಿಯೇ ಇರುವಂತದ್ದು. ಸಿದ್ದರಾಮಯ್ಯ ಅವರು ಕೇವಲ 14 ನಿವೇಶನಗಳನ್ನ ಪಡೆದಿದ್ದವರು. ಒಬ್ಬೊಬ್ಬ ಎಂಎಲ್ಸಿ, ಎಂಎಲ್ಎ ಗಳು ಕೂಡ ಹಲವು ನಿವೇಶನಗಳನ್ನ ಹೊಂದಿದ್ದಾರೆ. ಅದು ಯಾರ ಮೇಲೂ ತನಿಖೆ ಇಲ್ಲ. ಸಿದ್ದರಾಮಯ್ಯನವರ ಮೇಲೆ ಮಾತ್ರ ತನಿಖೆ ಮಾಡಿಸುವಂಥದ್ದು. ಜನಪ್ರಿಯ ಮುಖ್ಯಮಂತ್ರಿಗಳು, ನೇರ ನಡೆನುಡಿ ಹೊಂದಿರುವವರು, ಯಾವುದೇ ಅವ್ಯವಹಾರವನ್ನ ಮಾಡದೆ ಇರುವವರು, ಏನೇನೋ ಅಪಪ್ರಚಾರ ಮಾಡಿ ಅವರ ಜನಪ್ರಿಯತೆಯನ್ನು ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ಯಾರೂ ಏನೇ ಹೇಳಿದರು ಅವರಿಗೆ ಏನು ಆಗಲ್ಲ. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಕರ್ನಾಟಕಕ್ಕೆ ಐದು ಗ್ಯಾರಂಟಿ ಕೊಡುಗೆಗಳನ್ನ ಕೊಟ್ಟಿರುವ ಧೀಮಂತ ಮುಖ್ಯಮಂತ್ರಿಗಳು ಅವರು ಎಂದಿದ್ದಾರೆ.
ಇದೇ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಹೊಗಳಿದ್ದು, ಅದೇ ರೀತಿ ಉಪಮುಖ್ಯಮಂತ್ರಿಗಳು. ನನ್ನ ರಾಜಕೀಯ ಜೀವನದಲ್ಲಿ ಒಂದೊಂದೇ ಹಂತಕ್ಕೆ ಇವತ್ತು ಬೆಂಗಳೂರಿಗೆ ಕಾಂಗ್ರೆಸ್ ಪದಾಧಿಕಾರಿಯಾಗಿ ಕೆಲಸ ಮಾಡುವಂತ, ಕರ್ನಾಟಕ ಹೌಸಿಂಗ್ ಫೆಡರೇಷನ್ ಗೆ ಅಧ್ಯಕ್ಷರನ್ನಾಗಿ ಮಾಡುವಂತ, ಉತ್ತರಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಶಾಸಕ ಸ್ಥಾನವನ್ನು ಕೊಡುವಂತ, ರಾಜಕಾರಣದಲ್ಲಿ ವಿವಿಧ ಮೆಟ್ಟಿಲುಗಳನ್ನ ಏರುವುದಕ್ಕೆ ಡಿಕೆ ಶಿವಕುಮಾರ್ ಅವರು ಸಹಾಯ ಮಾಡಿದ್ದಾರೆ ಎಂದು ಹೊಗಳಿದ್ದಾರೆ.


