ಹುಬ್ಬಳ್ಳಿ: ರಾಜ್ಯ ರಾಜಕೀಯ ವಲಯದಲ್ಲಿ ಸಿಎಂ.. ಡಿಸಿಎಂ ವಿಚಾರ ಎಲ್ಲೆಲ್ಲೋ ಹೋಗ್ತಾ ಇದೆ. ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಡಿಕೆಶಿ ಹೋರಾಟ ಮಾಡ್ತಾ ಇದ್ದಾರೆ. ಈ ಬೆನ್ನಲ್ಲೇ ಶಾಸಕ ಯತ್ನಾಳ್ ಬೇರೆಯದ್ದೇ ವಿಚಾರವನ್ನ ಹೇಳಿದ್ದಾರೆ. ಡಿಕೆ ಶಿವಕುಮಾರ್ ಬಿಜೆಪಿಗೆ ಬಂದ್ರೆ ಅವರೇ ಸಿಎಂ, ವಿಜಯೇಂದ್ರ ಅವರೇ ಡಿಸಿಎಂ ಎಂಬ ಮಾತನ್ನ ಹೇಳಿದ್ದಾರೆ. ಈ ಮಾತಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದು, ಇದಕ್ಕೆ ಯಾವುದೇ ಕಾರಣಕ್ಕೂ ನಾವೂ ಒಪ್ಪಲ್ಲ. ಕಾಂಗ್ರೆಸ್ ನಲ್ಲಿ ಇರುವವರೆಲ್ಲ ಭ್ರಷ್ಟಾಚಾರಿಗಳು ಎಂಬ ಮಾತನ್ನ ಹೇಳಿದ್ದಾರೆ.
ಈ ಸಂದರ್ಭದಲ್ಲಿ ನಾವೂ ಯಾರನ್ನೋ ಕರೆದುಕೊಂಡು ಬಂದು ಶಿಂಧೆ ಮಾಡ್ತೀವಿ, ಅವರು ಶಿಂಧೆ ಆಗ್ತಾರೆ ಎಂಬ ಯಾವ ಸಪೋರ್ಟ್ ಕೂಡ ಇಲ್ಲ. ಇದಕ್ಕೂ ನಮಗೂ ಸಂಬಂಧವಿಲ್ಲ. ಯಾರು ಏನು ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಪ್ರಾಮಾಣಿಕರು, ಅಪ್ರಾಮಾಣಿಕರು ಎಂಬುದಾಗಿ ನಾನು ಮಾತನಾಡ್ತಿಲ್ಲ. ವಿ ಕಾಂಟ್ ದಟ್ ಎಂಬ ಮಾತನ್ನ ಹೇಳಿದ್ದಾರೆ.
ಪ್ರಹ್ಲಾದ್ ಜೋಶಿ ಅವರು ನೀಡಿದ ಹೇಳಿಕೆಯಲ್ಲಿ ಕಾಂಗ್ರೆಸ್ ನಿಂದ ಬಿಜೆಪಿಗೆ ಯಾರೇ ಬಂದರು ಒಪ್ಪುವುದಿಲ್ಲ ಎಂಬ ಮಾತನ್ನ ಹೇಳಿದಂತಿದೆ. ಒಟ್ನಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಮೊದಲೇ ಸಿಎಂ ಖುರ್ಚಿ ಕಾದಾಟ ಜೋರಾಗಿದೆ. ಆಡಳಿತ ಪಕ್ಷದಲ್ಲಿ ಗೊಂದಲ, ಗಲಾಟೆ ಆಗುವಾಗ ವಿರೋಧ ಪಕ್ಷದ ನಾಯಕರು ಪ್ರಭಾವಿ ನಾಯಕನಿಗೆ ಆಫರ್ ಕೊಡುವುದು ಸಹಜ. ತಮಾಷೆಯಾಗಿ ಈ ಮಾತುಗಳನ್ನ ಹೇಳಿದ್ದರು ಕೂಡ ಕೇಂದ್ರ ಸಚುವ ಪ್ರಹ್ಲಾದ್ ಜೋಶಿ ಅವರು ಅದನ್ನ ಸ್ವೀಕಾರ ಮಾಡುವುದಕ್ಕೆ ಸಿದ್ಧರಿಲ್ಲ ಎಂಬುದು ಅವರ ಮಾತಿನ ದಾಟಿಯಲ್ಲಿಯೇ ಅರ್ಥವಾದಂತೆ ಕಾಣಿಸ್ತಾ ಇದೆ.

