ರೋಟರಿ ರಾಜ್ಯೋತ್ಸವ ಚೆಸ್ ಕಪ್ ವಿಜೇತರಿಗೆ ಟ್ರೋಫಿ ಮತ್ತು ಪ್ರಮಾಣಪತ್ರ ವಿತರಣೆ

1 Min Read

ಚಿತ್ರದುರ್ಗ, (ನ.30) : ನಗರದ ರೋಟರಿ ಬಾಲಭವನದಲ್ಲಿ ಅಶ್ವ ಚೆಸ್ ಅಕಾಡೆಮಿ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ್ದ ರೋಟರಿ ರಾಜ್ಯೋತ್ಸವ ಚೆಸ್ ಕಪ್ ವಿಜೇತರಿಗೆ ಟ್ರೋಫಿ ಮತ್ತು ಪ್ರಮಾಣಪತ್ರ ವಿತರಿಸಲಾಯಿತು.

ಏಳು ವರ್ಷದ ಬಾಲಕರ ವಿಭಾಗದಲ್ಲಿ ಕೆ.ನಿಶ್ಚಿತ್ ಗುರುಕರ್, ಶ್ರೇಯಂಶ್, ಬಾಲಕಿಯರಲ್ಲಿ ಎ.ಎನ್.ರಿತುಪರ್ಣ, ಆದ್ಯ ಡಿ.ಎಂ.ಗೌರಿ. ಒಂಭತ್ತು ವರ್ಷದ ಬಾಲಕರಲ್ಲಿ ಜಿ.ಕಣ್ಣನ್ ಶ್ರೀಧರ್, ಪಿ.ಆರ್.ತನಯ್, ಬಾಲಕಿಯರಲ್ಲಿ ಎ.ಎಸ್.ರೋಹಿಣಿ, ನೋಮಿಕಾ. ಹನ್ನೊಂದು ವರ್ಷದ ಬಾಲಕರಲ್ಲಿ ಆರ್.ಕಿರಣ್, ಎಂ.ಎಸ್.ಜೀವನ್, ಬಾಲಕಿಯರಲ್ಲಿ ಎಸ್.ಆರ್.ಅಪೇಕ್ಷ, ವೈ.ಎಂ.ಸೌಜನ್ಯ. 13 ವರ್ಷದ ಬಾಲಕರಲ್ಲಿ ಎಂ.ಎಂ.ಪ್ರಶಾಂತ್ ಸ್ವಾಮಿ, ಎಚ್.ಶೋಬಿತ್, ಬಾಲಕಿಯರಲ್ಲಿ ಇಬ್ಬನಿ, ಎಂ.ಶ್ರೇಯ. 16 ವರ್ಷದ ಬಾಲಕರಲ್ಲಿ ಎಚ್.ಜಿ.ಗೌರಿಶ್, ವೈ.ಎಂ.ತರುಣ್ ಟ್ರೋಫಿ ಗೆದ್ದರು.

ರೋಟರಿ ಕ್ಲಬ್ ಅಧ್ಯಕ್ಷೆ ಕೆ.ಮಾಧುರಿ ಪ್ರಸಾದ್, ಕಾರ್ಯದರ್ಶಿ ಜಯಶ್ರೀ ಷಾ, ರೋಟರಿ ಮಾಜಿ ಜಿಲ್ಲಾ ಗೌರ್ನರ್ ಮಧುಪ್ರಸಾದ್, ರೋ.ವೀರೇಶ್, ಅಶ್ವ ಅಕಾಡೆಮಿ ಟೂರ್ನಿ ಸಂಘಟಕ ಟಿ.ವೀರೇಶ್, ಅಶ್ವ ಚೆಸ್ ಅಕಾಡೆಮಿಯ ಮುರುಗೇಶ್, ತಿಪ್ಪೇಸ್ವಾಮಿ, ಮೋಹನ್, ನವೀನ್, ಇಂದುಧರ್, ಸದಾನಂದ, ಮಲ್ಲಿಕಾರ್ಜುನ್, ಮತ್ತಿತರರಿದ್ದರು.

Share This Article
Leave a Comment

Leave a Reply

Your email address will not be published. Required fields are marked *