ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾನ ಟಾರ್ಗೆಟ್ ಮಾಡುತ್ತಿರುವವರು ಕಡಿಮೆ ಏನು ಅಲ್ಲ. ಅಶ್ವಿನಿ, ಕಾಕ್ರೋಚ್, ಜಾಹ್ನವಿ, ರಾಶಿಕಾ ಈಗ ಧ್ರುವಂತ್. ಇದೆಲ್ಲದರ ನಡುವೆ ಮನೆಯೊಳಗೆ ಒಂದು ಪದ ಓಡಾಡ್ತಾ ಇರೋದು ಕಲಾವಿದರಿಗೆ ಅವಮಾನ ಮಾಡಿದರು ಎಂದು. ಹಾಗಾದ್ರೆ ರಕ್ಷಿತಾ ನಿಜಕ್ಕೂ ಕಲಾವಿದರಿಗೆ ಅವಮಾನ ಮಾಡಿದ್ರಾ ಅಥವಾ ಕಲಾವಿದರಿಗೆ ಅವಮಾನ ಮಾಡಿದೆ ಅಂತ ಹೇಳಿ ಹೇಳಿ ರಕ್ಷಿತಾನ ಹೊರಗಡೆ ನೋಡುವ ಜನರ ದೃಷ್ಟಿಯಲ್ಲಿ ಕೆಟ್ಟವಳನ್ನಾಗಿ ಮಾಡಬೇಕು ಅಂತಾನಾ..? ಇದಕ್ಕೆಲ್ಲಾ ಕಿಚ್ಚ ಸುದೀಪ್ ಉತ್ತರ ಕೊಟ್ಟಿದ್ದಾರೆ ನೋಡಿ.
ಈ ಕಲಾವಿದರಿಗೆ ಅವಮಾನ ಮಾಡಿದೆ, ಚಪ್ಪಲಿ ತೋರಿಸಿದೆ ಎಂಬ ಮಾತೆಲ್ಲ ಕಳೆದ 15 ದಿನದಿಂದ ಅಶ್ವಿನಿ ಬಳಕೆ ಮಾಡುತ್ತಿರುವ ಸಾಲು. ಕಳೆದ ಪಂಚಾಯ್ತಿಯಲ್ಲಿಯೇ ಕಿಚ್ಚ ಇದಕ್ಕೆ ಉತ್ತರ ಕೊಡುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಅದು ಆಗಲಿಲ್ಲ. ಈಗ ಮತ್ತೆ ಈ ವಾರವೂ ಅಶ್ವಿನಿ ಅವರಿಂದ ಅದೇ ಸಾಲು ಓಡಾಡುತ್ತಿದೆ. ಅದಕ್ಕೆ ಈ ವಾರ ಕಿಚ್ಚ ಕ್ಲಾಸ್ ತೆಗೆದುಕೊಂಡಿದ್ದಾರೆ.
ಆ ವಿಚಾರದ ಬಗ್ಗೆ ಕಿಚ್ಚ ಕೇಳಿದಾಗ ಅಶ್ವಿನಿ ಅವರು ಉತ್ತರ ನೀಡಿದ್ದು, ಇದು ನಾಟಕ ಅಂತ ಹೇಳಿಕೊಂಡು ಚಪ್ಪಲಿ ತೋರಿಸ್ತಾ ಇದ್ದೀಯಾ ಅಂದ್ರೆ ನೀನು ಯಾರಿಗೆ ಹೇಳ್ತಾ ಇದ್ದೀಯಾ ಎಂಬ ಮಾತನ್ನ ಅಶ್ವಿನಿ ಹೇಳಿದಾಗ ಅಂದು ರಕ್ಷಿತಾ ಜೊತೆಗಿನ ಮಾತನ್ನು ಪ್ಲೇ ಮಾಡಿದ್ದಾರೆ. ಆಗ ಸುದೀಪ್, ಕಲಾವಿದರಿಗೆ ಚಪ್ಪಲಿ ತೋರಿಸಿದರಾ..? ನಾವೂ ರಾಂಗ್ ಆಗಿ ಹೇಳಿದಾಗ ಯಾರ್ ಯಾರೋ ಎದ್ಬಿಟ್ಟು ಕಲಾವಿದರಿಗೆ ಹೇಳಿದ್ರಂತೆ ಎಂಬ ಮಾತು ಬರುತ್ತೆ. ಯಾಕ್ ಮೇಡಂ ಈ ಕಾರ್ಯಕ್ರಮ ನಡೆಸಿಕೊಡುತ್ತಿರುವ ನಾನೊಬ್ಬ ಕಲಾವಿದ ಅಲ್ವಾ. ಕರ್ನಾಟಕದ ಪ್ರತಿ ಕಲಾವಿದರಿಗೆ ನಾನು ಉತ್ತರ ಕೊಡಬೇಕಿತ್ತು ಇದು ರಾಂಗ್ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ
