ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ಬೆಂಗಳೂರು: ಬಿಗ್ ಬಾಸ್ ಮನೆಗೆ ಗೆಸ್ಟ್ ಆಗಿ ಬಂದ ಐವರಲ್ಲಿ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಉಳಿದುಕೊಂಡಿದ್ದಾರೆ. ಚೈತ್ರಾ ಹಾಗೂ ರಜತ್ ಸದ್ಯ ಮನೆಯ ಹೊಸ ಅತಿಥಿಗಳಾಗಿದ್ದಾರೆ. ಇನ್ನು ವೀಕೆಂಡ್ ಅಂದ್ರೆ ಒಂದಷ್ಟು ಫನ್ ಇರುತ್ತೆ, ತಪ್ಪನ್ನು ತಿದ್ದಿ ಹೇಳುವಂತದ್ದಿರುತ್ತೆ ಹಾಗೇ ಒಂದು ಟಾಸ್ಕ್ ಕೊಟ್ಟು ಮನೆಯವರ ಅಭಿಪ್ರಾಯ ತಿಳಿಸುವ ಗೇಮ್ ಇರುತ್ತೆ. ಅಂಥದ್ದೆ ಒಂದು ಟಾಸ್ಕ್ ನಲ್ಲಿ ಇದೀಗ ಧ್ರುವಂತ್, ಕಿಚ್ಚನ ಮುಂದೆ ಹೈಡ್ರಾಮಾ ಸೃಷ್ಟಿಸಿದ್ದಾರೆ.
ಸದ್ಯ ಬಿಟ್ಟಿರುವ ಪ್ರೋಮೋದಲ್ಲಿ ಒಂದು ಟಾಸ್ಕ್ ನೀಡಲಾಗಿತ್ತು. ಸ್ಪರ್ಧಿಗಲಕ ಮುಂದೆ ಪ್ರಾಣಿಗಳ ಫೋಟೋ ಜರುವ ಪೋಸ್ಟರ್ ಗಳನ್ನು ಇಟ್ಟು, ಯಾವ ಪ್ರಾಣಿ ಯಾರಿಗೆ ಹೊಂದುತ್ತೆ ಅವರಿಗೆ ಹಾಕುವಂತೆ ತಿಳಿಸಿದರು. ಅಂದ್ರೆ ಒಂದೊಂದು ಪ್ರಾಣಿ, ಪಕ್ಷಿ ಹಾಗೂ ಸರೀಸೃಪಗಳಿಗೂ ಒಂದೊಂದು ಪರ್ಸನಾಲಿಟಿ, ಕ್ಯಾರೆಕ್ಟರ್ ಇರುತ್ತೆ. ನಿಮಗೆ ಯಾರಿಗೆ ಆ ಕ್ಯಾರೆಕ್ಟರ್ ಇರುವ ಪ್ರಾಣಿಯನ್ನು ಹೋಲಿಕೆ ಮಾಡಬೇಕು ಅನ್ಸುತ್ತೋ ಅವರಿಗೆ ಕೊಡಿ ಎಂದರು. ಅದರಂತೆ ಎಲ್ಲರೂ ಮಾಡಿದ್ದು, ಧ್ರುವಂತ್ ಕೊರಳಿಗೆ ಹೆಚ್ಚು ಪೋಸ್ಟರ್ ಬಿದ್ದಿದೆ. ಧನುಷ್ ಪಾರಿವಾಳ ಹಾಕಿ, ವಿವರಣೆ ನೀಡಿದ್ದಾರೆ.
ಅಲ್ಲಿರುವ ವಿಚಾರ ಇಲ್ಲಿಗೆ ಬರುತ್ತೆ. ಇಲ್ಲಿರುವ ವಿಚಾರ ಅಲ್ಲಿಗೆ ಬರುತ್ತೆ. ಇನ್ನು ಮಾಳು ಚೇಳನ್ನ ನೀಡಿದ್ದು, ಒಂದು ಒಳ್ಳೆಯ ಮನುಷ್ಯನ ಹಾಳು ಮಾಡುವುದ ಒಂದು ಉದ್ದೇಶ. ಇವರ ಅನಿಸಿಕೆ, ಇವರ ಅಭಿಪ್ರಾಯ ಬೇರೆಯವರಿಗೆ ಹೋಗಿ ಹೇಳಿ ಹೇಳಿ ಅವರ ತಲೆಯನ್ನೂ ಕೆಡಿಸುತ್ತಾರೆ ಎಂದಿದ್ದಾರೆ.
ಈ ಪೋಸ್ಟರ್ ಗಳನ್ನೆಲ್ಲ ತೆಗೆದು ಕೈನಲ್ಲಿ ಹಿಡಿದುಕೊಂಡಿದ್ದಾರೆ. ಇದನ್ನು ಗಮನಿಸಿದ ಸುದೀಪ್ ಅವರು, ಅದನ್ನೆಲ್ಲ ಕೊರಳಿಗೆ ಹಾಕಿಕೊಳ್ಳುವಂತೆ ಸೂಚಿಸಿದ್ದಾರೆ. ಆದರೆ ಮಾಳು ಹಾಕಿಕೊಳ್ಳುವುದಿಲ್ಲ. ಇವನ್ನೆಲ್ಲ ಹಾಕಿಕೊಳ್ಳುವುದಕ್ಕಿಂತ ಮನೆ ತ್ಯಜಿಸುವುದೇ ಉತ್ತಮ ಎಂದಿದ್ದಾರೆ. ಇದಕ್ಕೆ ಸುದೀಪ್ ಅವರು ಗರಂ ಆಗಿದ್ದಾರೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್