ಕಿಚ್ಚನ ಎದುರು ಧ್ರುವಂತ್ ಹೈಡ್ರಾಮಾ : ಅಂತದ್ದು ಏನಾಯ್ತು ಬಿಗ್ ಬಾಸ್ ಮನೆಯಲ್ಲಿ

1 Min Read

ಬೆಂಗಳೂರು: ಬಿಗ್ ಬಾಸ್ ಮನೆಗೆ ಗೆಸ್ಟ್ ಆಗಿ ಬಂದ ಐವರಲ್ಲಿ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಉಳಿದುಕೊಂಡಿದ್ದಾರೆ. ಚೈತ್ರಾ ಹಾಗೂ ರಜತ್ ಸದ್ಯ ಮನೆಯ ಹೊಸ ಅತಿಥಿಗಳಾಗಿದ್ದಾರೆ. ಇನ್ನು ವೀಕೆಂಡ್ ಅಂದ್ರೆ ಒಂದಷ್ಟು ಫನ್ ಇರುತ್ತೆ, ತಪ್ಪನ್ನು ತಿದ್ದಿ ಹೇಳುವಂತದ್ದಿರುತ್ತೆ ಹಾಗೇ ಒಂದು ಟಾಸ್ಕ್ ಕೊಟ್ಟು ಮನೆಯವರ ಅಭಿಪ್ರಾಯ ತಿಳಿಸುವ ಗೇಮ್ ಇರುತ್ತೆ. ಅಂಥದ್ದೆ ಒಂದು ಟಾಸ್ಕ್ ನಲ್ಲಿ ಇದೀಗ ಧ್ರುವಂತ್, ಕಿಚ್ಚನ ಮುಂದೆ ಹೈಡ್ರಾಮಾ ಸೃಷ್ಟಿಸಿದ್ದಾರೆ.

ಸದ್ಯ ಬಿಟ್ಟಿರುವ ಪ್ರೋಮೋದಲ್ಲಿ ಒಂದು ಟಾಸ್ಕ್ ನೀಡಲಾಗಿತ್ತು. ಸ್ಪರ್ಧಿಗಲಕ ಮುಂದೆ ಪ್ರಾಣಿಗಳ ಫೋಟೋ ಜರುವ ಪೋಸ್ಟರ್ ಗಳನ್ನು ಇಟ್ಟು, ಯಾವ ಪ್ರಾಣಿ ಯಾರಿಗೆ ಹೊಂದುತ್ತೆ ಅವರಿಗೆ ಹಾಕುವಂತೆ ತಿಳಿಸಿದರು. ಅಂದ್ರೆ ಒಂದೊಂದು ಪ್ರಾಣಿ, ಪಕ್ಷಿ ಹಾಗೂ ಸರೀಸೃಪಗಳಿಗೂ ಒಂದೊಂದು ಪರ್ಸನಾಲಿಟಿ, ಕ್ಯಾರೆಕ್ಟರ್ ಇರುತ್ತೆ. ನಿಮಗೆ ಯಾರಿಗೆ ಆ ಕ್ಯಾರೆಕ್ಟರ್ ಇರುವ ಪ್ರಾಣಿಯನ್ನು ಹೋಲಿಕೆ ಮಾಡಬೇಕು ಅನ್ಸುತ್ತೋ ಅವರಿಗೆ ಕೊಡಿ ಎಂದರು. ಅದರಂತೆ ಎಲ್ಲರೂ ಮಾಡಿದ್ದು, ಧ್ರುವಂತ್ ಕೊರಳಿಗೆ ಹೆಚ್ಚು ಪೋಸ್ಟರ್ ಬಿದ್ದಿದೆ. ಧನುಷ್ ಪಾರಿವಾಳ ಹಾಕಿ, ವಿವರಣೆ ನೀಡಿದ್ದಾರೆ.

 

ಅಲ್ಲಿರುವ ವಿಚಾರ ಇಲ್ಲಿಗೆ ಬರುತ್ತೆ. ಇಲ್ಲಿರುವ ವಿಚಾರ ಅಲ್ಲಿಗೆ ಬರುತ್ತೆ. ಇನ್ನು ಮಾಳು ಚೇಳನ್ನ ನೀಡಿದ್ದು, ಒಂದು ಒಳ್ಳೆಯ ಮನುಷ್ಯನ ಹಾಳು ಮಾಡುವುದ ಒಂದು ಉದ್ದೇಶ. ಇವರ ಅನಿಸಿಕೆ, ಇವರ ಅಭಿಪ್ರಾಯ ಬೇರೆಯವರಿಗೆ ಹೋಗಿ ಹೇಳಿ ಹೇಳಿ ಅವರ ತಲೆಯನ್ನೂ ಕೆಡಿಸುತ್ತಾರೆ ಎಂದಿದ್ದಾರೆ.

ಈ ಪೋಸ್ಟರ್ ಗಳನ್ನೆಲ್ಲ ತೆಗೆದು ಕೈನಲ್ಲಿ ಹಿಡಿದುಕೊಂಡಿದ್ದಾರೆ. ಇದನ್ನು ಗಮನಿಸಿದ ಸುದೀಪ್ ಅವರು, ಅದನ್ನೆಲ್ಲ ಕೊರಳಿಗೆ ಹಾಕಿಕೊಳ್ಳುವಂತೆ ಸೂಚಿಸಿದ್ದಾರೆ. ಆದರೆ ಮಾಳು ಹಾಕಿಕೊಳ್ಳುವುದಿಲ್ಲ. ಇವನ್ನೆಲ್ಲ ಹಾಕಿಕೊಳ್ಳುವುದಕ್ಕಿಂತ ಮನೆ ತ್ಯಜಿಸುವುದೇ ಉತ್ತಮ ಎಂದಿದ್ದಾರೆ. ಇದಕ್ಕೆ ಸುದೀಪ್ ಅವರು ಗರಂ ಆಗಿದ್ದಾರೆ.

Share This Article
Enable Notifications OK No thanks