ಮಲ್ಲಿಕಾರ್ಜುನ ಖರ್ಗೆ ಹೇಳಿದ ಮೇಲೂ ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಮಾತುಕತೆ..!

suddionenews
1 Min Read

 

 

ರಾಮನಗರ: ಕಾಂಗ್ರೆಸ್ ನಲ್ಲಿ ಚುನಾವಣೆಗೂ ಮುನ್ನ ಮುಂದಿನ ಸಿಎಂ ಚರ್ಚೆ ನಡೆಯುತ್ತಲೇ ಬರುತ್ತಿದೆ. ಆದ್ರೆ ನಿನ್ನೆಯಷ್ಟೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ವಿಚಾರದ ಬಗ್ಗೆ ಸಲಹೆಯನ್ನು ನೀಡಿದ್ದರು. ಮೊದಲು ಜನರ ಮನಸ್ಸನ್ನು ಗೆಲ್ಲಿ ಎಂದಿದ್ದರು. ಆದರೂ ಇಂದು ಪಕ್ಷದಲ್ಲಿ ಮತ್ತೆ ಸಿಎಂ ಚರ್ಚೆ ಶುರುವಾಗಿದೆ.

ಇಂದು ಕನಕಪುರದಲ್ಲಿ ಬೈಕ್ ರ್ಯಾಲಿ ಜೊತೆಗೆ ಬೃಹತ್ ಮೆರವಣಿಗೆ ನಡೆದಿದೆ. ಕನಕಪುರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆದಿದೆ. ಡಿಕೆ ಶಿವಕುಮಾರ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತ ಮಾಡಿದರು. ಬೃಹತ್ ಸೇಬಿನ ಹಾರ, ಮೂಸಂಬಿ ಹಾರ ಹಾಕಿ ಸ್ವಾಗತಿಸಿದರು.

ಮೆರವಣಿಗೆ ವೇಳೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ಗೆ ಸೇರಿಸಿಕೊಂಡಿದ್ದೇವೆ. ಮಿತ್ರ ಅಶೋಕ್, ಸಿಎಂ ಬೊಮ್ಮಾಯಿ ಅವರಿಗೆ ಟಾಟಾ ಮಾಡಿಸಿದ್ದೇನೆ. ನನ್ನ ವಿರುದ್ಧ ಯಾರು ಚುನಾವಣೆಗೆ ನಿಲ್ಲುತ್ತಾರೆ ಗೊತ್ತಿಲ್ಲ. ಆದರೆ ನನ್ನನ್ನು ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂರಿಸುವ ಅವಕಾಶವಿದೆ. ನೀವೂ ನನಗೆ ಆಶೀರ್ವಾದ ಮಾಡುತ್ತೀರಿ ತಾನೇ ಎಂದು ಕೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *