Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಡೆಂಗ್ಯೂ ಹೆಚ್ಚಾಗ್ತಾ ಇದೆ : ಅದರಿಂದ ತಪ್ಪಿಸಿಕೊಳ್ಳಲು ಈ ಆಹಾರ ಸೇವಿಸಿ

Facebook
Twitter
Telegram
WhatsApp

ಮಳೆಗಾಲ ಶುರುವಾಯ್ತು ಮದರೆ ಸೊಳ್ಳೆಗಳಿಂದ ಶುರುವಾಗುವ ಕಾಯಿಲೆಗಳು ಹೆಚ್ಚಾಗುತ್ತವೆ. ಅದರಲ್ಲೂ ಇತ್ತಿಚೆಗೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದಾವೆ. ಸೊಳ್ಳೆಗಳ ನಾಶಕ್ಕೆ ಆಯಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಜೊತೆಗೆ ಜನ ಕೂಡ ಬಹಳ ಎಚ್ಚರದಿಂದ ಇರಬೇಕಾಗುತ್ತದೆ. ಇನ್ನು ಡೆಂಗ್ಯೂ ಬಾರದಂತೆ ತಡೆಯಲು ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹಡಚ್ಚಾಗಿರಬೇಕಾಗುತ್ತದೆ. ಅದನ್ನು ಆಹಾರ ಮೂಲಕವೂ ರೂಢಿಸಿಕೊಳ್ಳಬಹುದು.

* ಡೆಂಗ್ಯೂ ಜ್ವರ ಇದ್ದವರು, ಬಾರದಂತೆ ಎಚ್ಚರ ಬಹಿಸುವವರು ಶಕಂಜಿ ನೀರನ್ನು ಕುಡಿಯಿರಿ. ಒಂದು ನಿಂಬೆ ಹಣ್ಣಿನ ರಸ ತೆಗೆದು, ಅದಕ್ಕೆ ನೀರಿ, ಸಕ್ಕರೆ, ಉಪ್ಪು, ಹುರಿದ ಜೀರಿಗೆ ಪುಡಿ ಬಳಸಿ ಕುಡಿಯಿರಿ.

* ಮೊಸರು, ಬೇಳೆಕಾಳು, ಕ್ವಿನೋವಾ, ಅಮರನಾಥ, ಸತ್ತು, ಕಡಿಮೆ ಕೊಬ್ಬು ಇರುವ ಪನೀರ್ ಮತ್ತು ತೌಫು ಸೇವಿಸಿ.

* ಫಾಲಿಕ್ ಆಮ್ಲ ಮತ್ತು ವಿಟಮಿನ್ ಕೆ ಇರುವ ಆಹಾರ ಸೇರಿಸಿ. ಕಿವಿ, ದಾಳಿಂಬೆ, ಬ್ರಾಕೋಲಿ ಮತ್ತು ಪಾಲಕವು ಇದಕ್ಕೆ ಒಳ್ಳೆಯ ಆಯ್ಕೆಯಾಗಿದೆ. ಈ ಆಹಾರಗಳು ಸಂಪೂರ್ಣ ಚೇತರಿಕೆಗೆ ತುಂಬಾ ನೆರವಾಗಲಿದೆ.

* ಪಪ್ಪಾಯಿ ಎಲೆಯ ರಸವು ಉತ್ತಮ ಪರಿಹಾರವಾಗಿದೆ. ಪಪ್ಪಾಯಿ ಎಲೆಯ ರಸವು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಇದು ಡೆಂಗ್ಯೂಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ ನೀವು ದಿನಕ್ಕೆ ಎರಡು ಬಾರಿ ಪಪ್ಪಾಯಿ ಎಲೆಯ ರಸವನ್ನು ಸಣ್ಣ ಪ್ರಮಾಣದಲ್ಲಿ ಸೇವಿಸಬಹುದು.

* ಮೊದಲು ಡೆಂಗ್ಯೂ ಬಾರದಂತೆ ತಡೆಯಲು ಮನೆಯ ಬಳಿಯೆಲ್ಲಾ ಸ್ವಚ್ಛತೆಯನ್ನು ಕಾಪಾಡಿ. ನೀರು ನಿಲ್ಲದಂತೆ ನೋಡಿಕೊಳ್ಳಿ. ಸೊಳ್ಳೆಗಳ ತಾಣವಾಗಿದ್ದರೆ ಅದನ್ನು ಕ್ಲೀನ್ ಮಾಡಿ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈಶ್ವರಪ್ಪ ಅವರನ್ನು ಮತ್ತೆ ಆಹ್ವಾನಿಸಿದ ಬಿಜೆಪಿ : ವಾಪಸ್ ಹೋಗ್ತಾರಾ ಈಶ್ವರಪ್ಪ..?

  ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿತ್ತು. ಬಿಜೆಪಿಯಲ್ಲಿಯೇ ಇದ್ದ ಈಶ್ವರಪ್ಪ ಬಂಡಾಯವೆದ್ದು, ಬಿಜೆಪಿ ಅಭ್ಯರ್ಥಿಯ ವಿರುದ್ಧವೇ ಕಣಕ್ಕೆ ಇಳಿದಿದ್ದರು. ಆದರೆ ವಿಜಯೇಂದ್ರ ವಿರುದ್ಧ ಹೀನಾಯವಾಗಿ ಸೋಲು ಕಂಡಿದ್ದರು. ಗೀತಾ ಶಿವರಾಜ್

ದರ್ಶನ್ ನೋಡಲು ಕಡೆಗೂ ಪರಪ್ಪನ ಅಗ್ರಹಾರಕ್ಕೆ ಬಂದ ತಾಯಿ ಹಾಗೂ ಸಹೋದರ..!

  ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದಾರೆ. ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ರೇಣುಕಾಸ್ವಾಮಿಗೆ ಎಚ್ಚರಿಕೆ ನೀಡುವುದಕ್ಕೆ ಹೋಗಿ ದರ್ಶನ್ ಅಂಡ್ ಗ್ಯಾಂಗ್ ಕೊಲೆಯನ್ನೇ ಮಾಡಿ, ಜೈಲು ಪಾಲಾಗಿದ್ದಾರೆ.

ಸುಳ್ಳು ಸುದ್ದಿಗಳ ಮೇಲೆ ತೀವ್ರ ನಿಗಾ ಇಡಲು ಪ್ರತೀ ಜಿಲ್ಲೆಗಳಲ್ಲೂ ವಿಶೇಷ ಘಟಕ : ಸಿ.ಎಂ. ಸಿದ್ದರಾಮಯ್ಯ

ಬೆಂಗಳೂರು ಜುಲೈ. 1: ಫೇಕ್ ನ್ಯೂಸ್ ಗಳ ಬಗ್ಗೆ ಇಡೀ ಸಮಾಜ ಬಹಳ ಎಚ್ಚರದಿಂದ ಇರಬೇಕು. ಪತ್ರಿಕಾ, ಮಾಧ್ಯಮ ಸಂಘಟನೆಗಳು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

error: Content is protected !!