ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜನವರಿ.14 : ನಗರದ ಹೊಳಲ್ಕೆರೆ ಟೋಲ್ಗೇಟ್ ಸಮೀಪವಿರುವ 150 ವರ್ಷ ಹಳೆಯದಾದ ರಾಜಕಾಲುವೆಯನ್ನು ಅರಣ್ಯ ಇಲಾಖೆಯ ನಿವೃತ್ತ ನೌಕರನೋರ್ವ ಅಕ್ರಮವಾಗಿ ಮುಚ್ಚಿರುವುದರಿಂದ ನೀರು ಹರಿಯದೆ ನಿಂತಿದ್ದು, ನಲವತ್ತು ವರ್ಷಗಳಿಂದಲೂ ಇಲ್ಲಿ ವಾಸಿಸುತ್ತಿರುವ 140 ಬಡ ಕುಟುಂಬಗಳು ದುರ್ವಾಸನೆಯಿಂದ ಸಹಿಸಿಕೊಂಡು ಕಾಲ ಕಳೆಯುವಂತಾಗಿದೆ.

ಅರಣ್ಯ ಇಲಾಖೆಯ ನಿವೃತ್ತ ನೌಕರ ತನ್ನ ಹೆಂಡತಿ ಹೆಸರಿನಲ್ಲಿ ಜಮೀನಿದೆ ಎಂದು ದೌರ್ಜನ್ಯವೆಸಗಿ ರಾಜಕಾಲುವೆಯ ಒಂದು ಭಾಗವನ್ನು ಮಣ್ಣಿನಿಂದ ಮುಚ್ಚಿ ಚರಂಡಿ ಹೊಡೆದು ರಾಜಕಾಲುವೆಯ ಹಳ್ಳದೆ ದಿಕ್ಕನ್ನೆ ಬದಲಾಯಿಸಿದ್ದಾನೆ. ಅಕ್ರಮವಾಗಿ ಇಲ್ಲಿ ಪ್ರವೇಶಿಸಲು ಯಾರಿಗೂ ಅಧಿಕಾರವಿಲ್ಲದಿದ್ದರೂ ಗೂಂಡಾಗಿರಿ ತೋರಿ ರಾಜಕಾಲುವೆಯನ್ನು ಬಂದ್ ಮಾಡಿರುವುದರಿಂದ ಕೊಳಚೆ ನೀರು ಹರಿಯಲು ಜಾಗವಿಲ್ಲದಂತಾಗಿ ಬಡಪಾಯಿಗಳ ಮನೆ ಎದುರು ನಿಂತಿದೆ. ಇದರಿಂದ ಸೊಳ್ಳೆಗಳ ತಾಣವಾಗಿ ವಾಸಿಸಲು ಆಗದೆ ಬೇರೆ ಕಡೆ ಹೋಗಲು ಆಗದಂತ ಅತಂತ್ರ ಸ್ಥಿತಿಯಲ್ಲಿ ಹಳ್ಳದ ಏರಿಯಾ ಕೊಳಚೆ ಪ್ರದೇಶದ ನಿವಾಸಿಗಳು ಮಮ್ಮಲ ಮರುಗುತ್ತಿದ್ದಾರೆ.
ಹೊಳಲ್ಕೆರೆ ರಸ್ತೆ, ಬಸವೇಶ್ವರ ಬಾಡಿ ಬಿಲ್ಡಿಂಗ್ ಹಿಂಭಾಗದ ನಿವಾಸಿಗಳಾದ ಅನ್ವರ್ಭಾಷ ಮತ್ತಿತರರು ರಾಜಕಾಲುವೆಯನ್ನು ಬಂದ್ ಮಾಡಿರುವ ವ್ಯಕ್ತಿ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಂಡು ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಬೇಕೆಂದು ಕಳೆದ ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾರೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.







ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್