Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಡಿಕೆ ಬೆಲೆಯಲ್ಲಿ ಕುಸಿತ.. ಕೊಬ್ಬರಿ ಬೆಲೆಯಲ್ಲಿ ಏರಿಕೆ..!

---Advertisement---

ಅಡಿಕೆ ಬೆಳೆಗಾರರಿಗೆ ಬೇಸರದ ಸಂಗತಿ ಇದಾಗಿದೆ. ಕಷ್ಟ ಒಟ್ಟು ಬೆಳೆಯನ್ನು ಉಳಿಸಿಕೊಂಡರು ಬೆಲೆ ಮಾತ್ರ ಕುಸಿತ ಕಂಡಿದೆ. ಈಚೆಗಷ್ಟೇ ಒಳ್ಳೆಯ ಬೆಲೆ ಸಿಕ್ಕಿತ್ತು. ಆದರೆ ಇದೀಗ ದಿಢೀರನೇ ಅಡಿಕೆ ಬೆಲೆ 45 ಸಾವಿರ ರೂಪಾಯಿ ಆಸುಪಾಸಿಗೆ ಕುಸಿದೆ. ಸುಮಾರು ಹತ್ತು ಸಾವಿರ ರೂಪಾಯಿ ವ್ಯತ್ಯಾಸವಾಗಿದೆ. ಇದಿ ಸಹಜವಾಗಿಯೇ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.

 

ರಾಶಿ ಅಡಿಕೆ ಬೆಲೆ 55 ಸಾವಿರ ರೂಪಾಯಿ ಮೀರಿತ್ತು. ಆ ಬಳಿಕ ಬೆಲೆಯಲ್ಲಿ ಕುಸಿತ ಕಾಣುತ್ತಲೇ ಇದೆಯೇ ವಿನಃ ಹೆಚ್ಚಾಗುತ್ತಿಲ್ಲ. 45 ಸಾವಿರ ಆಸುಅಸಿನಲ್ಲಿ ಮಾರಾಟವಾಗುತ್ತಿದ್ದು, ಬೆಳೆಗಾರರು ಚಿಂತೆಗೀಡಾಗಿದ್ದಾರೆ. ಕೆಲವು ಮಾರುಕಟ್ಟೆಗಳಲ್ಲಿ ಮಾತ್ರ ರಾಶಿ ಅಡಿಕೆ ಬೆಲೆ ಗರಿಷ್ಠ 48,000 ರೂಪಾಯಿಗೆ ಮಾರಾಟವಾಗಿದೆ. ಉಳಿದಂತೆ 44-46 ಸಾವಿರ ರೂಪಾಯಿ ನಡುವೆಯೇ ಮಾರಾಟವಾಗುತ್ತಿದೆ. ಸೋಮವಾರ ಸಾಗರ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಕನಿಷ್ಠ 30,199 ಒದ್ದರೆ ಗರಿಷ್ಠ 48,451 ರೂಪಾಯಿ ಆಗಿತ್ತು. ಹಾಗೇ ಕೆಂಪುಗೋಟು ಕ್ವಿಂಟಾಲ್ ಗೆ ಕನಿಷ್ಠ 20,899 ಇದ್ದರೆ ಗರಿಷ್ಠ 32,199 ಆಗಿತ್ತು.

 

ಒಂದು ಕಡೆ ಅಡಿಕೆ ಬೆಲೆ ಕಡಿಮೆಯಾಗುತ್ತಿದ್ದರೆ ಮತ್ತೊಂದೆಡೆ ತೆಂಗು ಬೆಳೆಗಾರರಿಗೆ ಬಹಳ ಕಾಯುವಿಕೆ ನಂತರ ಬೆಲೆ ಏರಿಕೆಯ ಸಿಹಿ ಸಿಕ್ಕಿದೆ. 10,000 ರೂಪಾಯಿ ಕೂಡ ದಾಟದ ಕೊಬ್ಬರಿ ಧಾರಣೆ, ಕಳೆದ ಕೆಲವು ದಿನಗಳಿಂದ 12,000 ರೂಪಾಯಿ ದಾಟಿದೆ. ಸೋಮವಾರ ತಿಪಟೂರು ಮಾರುಕಟ್ಟೆಯಲ್ಲಿ ಕನಿಷ್ಠ 11,500 ರೂಪಾಯಿ ಗರಿಷ್ಠ 12,000 ರೂಪಾಯಿ ಆಗಿತ್ತು. ಅರಸಿಕೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ ಕನಿಷ್ಠ 8,000 ರೂಪಾಯಿ ಮತ್ತು ಗರಿಷ್ಠ 12,000 ರೂಪಾಯಿ ಆಗಿತ್ತು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment