ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ಅಡಿಕೆ ಬೆಳೆಗಾರರಿಗೆ ಬೇಸರದ ಸಂಗತಿ ಇದಾಗಿದೆ. ಕಷ್ಟ ಒಟ್ಟು ಬೆಳೆಯನ್ನು ಉಳಿಸಿಕೊಂಡರು ಬೆಲೆ ಮಾತ್ರ ಕುಸಿತ ಕಂಡಿದೆ. ಈಚೆಗಷ್ಟೇ ಒಳ್ಳೆಯ ಬೆಲೆ ಸಿಕ್ಕಿತ್ತು. ಆದರೆ ಇದೀಗ ದಿಢೀರನೇ ಅಡಿಕೆ ಬೆಲೆ 45 ಸಾವಿರ ರೂಪಾಯಿ ಆಸುಪಾಸಿಗೆ ಕುಸಿದೆ. ಸುಮಾರು ಹತ್ತು ಸಾವಿರ ರೂಪಾಯಿ ವ್ಯತ್ಯಾಸವಾಗಿದೆ. ಇದಿ ಸಹಜವಾಗಿಯೇ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.
ರಾಶಿ ಅಡಿಕೆ ಬೆಲೆ 55 ಸಾವಿರ ರೂಪಾಯಿ ಮೀರಿತ್ತು. ಆ ಬಳಿಕ ಬೆಲೆಯಲ್ಲಿ ಕುಸಿತ ಕಾಣುತ್ತಲೇ ಇದೆಯೇ ವಿನಃ ಹೆಚ್ಚಾಗುತ್ತಿಲ್ಲ. 45 ಸಾವಿರ ಆಸುಅಸಿನಲ್ಲಿ ಮಾರಾಟವಾಗುತ್ತಿದ್ದು, ಬೆಳೆಗಾರರು ಚಿಂತೆಗೀಡಾಗಿದ್ದಾರೆ. ಕೆಲವು ಮಾರುಕಟ್ಟೆಗಳಲ್ಲಿ ಮಾತ್ರ ರಾಶಿ ಅಡಿಕೆ ಬೆಲೆ ಗರಿಷ್ಠ 48,000 ರೂಪಾಯಿಗೆ ಮಾರಾಟವಾಗಿದೆ. ಉಳಿದಂತೆ 44-46 ಸಾವಿರ ರೂಪಾಯಿ ನಡುವೆಯೇ ಮಾರಾಟವಾಗುತ್ತಿದೆ. ಸೋಮವಾರ ಸಾಗರ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಕನಿಷ್ಠ 30,199 ಒದ್ದರೆ ಗರಿಷ್ಠ 48,451 ರೂಪಾಯಿ ಆಗಿತ್ತು. ಹಾಗೇ ಕೆಂಪುಗೋಟು ಕ್ವಿಂಟಾಲ್ ಗೆ ಕನಿಷ್ಠ 20,899 ಇದ್ದರೆ ಗರಿಷ್ಠ 32,199 ಆಗಿತ್ತು.
ಒಂದು ಕಡೆ ಅಡಿಕೆ ಬೆಲೆ ಕಡಿಮೆಯಾಗುತ್ತಿದ್ದರೆ ಮತ್ತೊಂದೆಡೆ ತೆಂಗು ಬೆಳೆಗಾರರಿಗೆ ಬಹಳ ಕಾಯುವಿಕೆ ನಂತರ ಬೆಲೆ ಏರಿಕೆಯ ಸಿಹಿ ಸಿಕ್ಕಿದೆ. 10,000 ರೂಪಾಯಿ ಕೂಡ ದಾಟದ ಕೊಬ್ಬರಿ ಧಾರಣೆ, ಕಳೆದ ಕೆಲವು ದಿನಗಳಿಂದ 12,000 ರೂಪಾಯಿ ದಾಟಿದೆ. ಸೋಮವಾರ ತಿಪಟೂರು ಮಾರುಕಟ್ಟೆಯಲ್ಲಿ ಕನಿಷ್ಠ 11,500 ರೂಪಾಯಿ ಗರಿಷ್ಠ 12,000 ರೂಪಾಯಿ ಆಗಿತ್ತು. ಅರಸಿಕೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ ಕನಿಷ್ಠ 8,000 ರೂಪಾಯಿ ಮತ್ತು ಗರಿಷ್ಠ 12,000 ರೂಪಾಯಿ ಆಗಿತ್ತು.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್