ಬೆಂಗಳೂರು: ರೈತರ ಹೋರಾಟಕ್ಕೆ ಸಿದ್ದರಾಮಯ್ಯ ಸ್ಪಂದಿಸಿದ್ದು, ಒಂದು ಟನ್ ಕಬ್ಬಿಗೆ 3300 ರೂಪಾಯಿ ನಿಗದಿ ಮಾಡಿದ್ದಾರೆ. ಈ ನಿರ್ಧಾರ ಕೆಲವೊಂದು ಭಾಗದ ರೈತರಿಗೆ ಖುಷಿ ಕೊಟ್ಟಿದ್ರೆ ಇನ್ನು ಕೆಲ ರೈತರಿಗೆ ಬೇಸರ ತರಿಸಿದೆ. ಅದಲ್ಲದೆ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಬೇಸರ ತರಿಸಿದೆ. ಅದರಲ್ಲೂ ಸಚಿವ ಮುರುಗೇಶ್ ನಿರಾಣಿ, ನಮಗೇಳಿದ್ದೇ ಒಂದು ಅವರು ಮಾಡಿದ್ದೆ ಒಂದು ಎಂಬ ಬೇಸರ ಹೊರ ಹಾಕಿದ್ದಾರೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಎದುರುಗಡೆನೇ ಇದೆಲ್ಲ ಹೇಳಿರುವುದು. ಹೇಳಿರುವುದು ಒಂದು ಮಾಡುವುದು ಒಂದು ಅಲ್ಲ. ಜೂಮ್ ಮೀಟಿಂಗ್ ನಲ್ಲಿ ಬಂದಾಗ ಜಿಲ್ಲಾಧಿಕಾರಿ ಬಂದು ಹೇಳಿದ ಮೇಲೆ ಒಪ್ಪಿದ್ದಾರೆ. ನಾನು ಬಹಳ ಸ್ಪಷ್ಟವಾಗಿ ಹೇಳಿದ್ದೇನೆ 50 ರೂಪಾಯಿನ ಫ್ಯಾಕ್ಟರಿ ಅವರು ಕೊಡಬೇಕು. ಸರ್ಕಾರ 50 ರೂಪಾಯಿ ಕೊಡುತ್ತೆ. ಡಿಸಿ ಏನ್ ಹೇಳಿದ್ದಾರೆ, 10.25ಕ್ಕೆ 3100+100 ಮೇಲೆ ರಿಕವರಿ ಇದ್ರೆ, 11.25 ರಿಕವರಿ ಇದ್ರೆ 3200+100 ಈ ರೀತಿ ಆಗಿರೋದು. ಇದನ್ನ ಆದೇಶದಲ್ಲಿ ಹೊರಡಿಸಲಾಗುತ್ತದೆ. ಶಿವಾನಂದ ಪಾಟೀಲ್ ಅವರು ಅಲ್ಲಿಯೇ ಅನೌನ್ಸ್ ಮಾಡಲಿದ್ದಾರೆ ಎಂದಿದ್ದಾರೆ.
ಕಳೆದ 9 ದಿನದಿಂದ ರೈತರು ಮಾಡುತ್ತಿದ್ದ ಹೋರಾಟಕ್ಕೆ ಫಲ ಸಿಕ್ಕಂತೆ ಆಗಿದೆ. ಪ್ರಸ್ತುತ ಬರ್ತಾ ಇದ್ದಂತ ಬೆಲೆಗೆ ಹೋಲಿಕೆ ಮಾಡಿಕೊಂಡರೆ ಈಗ 100 ರೂಪಾಯಿ ಜಾಸ್ತಿ ಮಾಡಿದ್ದಾರೆ. ಇದನ್ನ ಒಪ್ಪಿದ ಬೆಳಗಾವಿ ರೈತರು ಹೋರಾಟವನ್ನು ಕೈಬಿಟ್ಟಿದ್ದಾರೆ. ಆದರೆ ವಿಜಯಪುರ, ಬಾಗಲಕೋಟೆ ರೈತರು ಪ್ರತಿಭಟನೆ ಮುಂದುವರೆಸಿದ್ದಾರೆ. ಅವರನ್ನ ಸರ್ಕಾರ ಹೇಗೆ ಮನವೊಲಿಸುತ್ತೆ ಎಂಬುದನ್ನ ನೋಡಬೇಕಿದೆ. ಸರ್ಕಾರದ ನಿರ್ಧಾರಕ್ಕೆ ಒಪ್ಪಿ ಪ್ರತಿಭಟನೆ ಕೈ ಬಿಡ್ತಾರಾ ನೋಡಬೇಕಿದೆ.
