Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೋವಿಡ್ 19: ಹಠಾತ್ ಸಾವುಗಳಿಗೆ ಲಸಿಕೆ ಕಾರಣವೇ? ICMR ಹೇಳಿದ್ದೇನು ? 

---Advertisement---

ಕೊರೊನಾ ಮಹಾಮಾರಿಯಿಂದಾಗಿ ಇಡೀ ಜಗತ್ತು ಎಷ್ಟು ತಲ್ಲಣಿಸಿ ತತ್ತರಿಸಿತ್ತು ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. 

ಕಣ್ಣಿಗೆ ಕಾಣದ ಸೂಕ್ಷ್ಮಾಣುಜೀವಿಯೊಂದು ಎಷ್ಟೆಲ್ಲಾ ಅನಾಹುತವನ್ನು ಸೃಷ್ಟಿಸಿತು ಎಂದು ಪ್ರತಿಯೊಬ್ಬರಿಗೂ ಗೊತ್ತು. ಆರ್ಥಿಕವಾಗಿ ಪ್ರಬಲವಾಗಿದ್ದಂತ ರಾಷ್ಟ್ರಗಳು ಕೂಡಾ ತೀವ್ರವಾಗಿ ಸಂಕಷ್ಟ ಎದುರಿಸಿದವು.
ಕೊರೊನಾ ಎಲ್ಲಾ ಕ್ಷೇತ್ರಗಳಲ್ಲೂ ನಷ್ಟ ಉಂಟು ಮಾಡಿತ್ತು. ಅಲ್ಲದೆ ಕೊರೊನಾದಿಂದ ಅದೆಷ್ಟೋ ಜನರು ಸಂಕಟ ಪಟ್ಟಿದ್ದು, ಸಾವನ್ನಪ್ಪಿದ್ದು ಎಲ್ಲರಿಗೂ ಗೊತ್ತಿರುವ ವಿಷಯ.

ಶವಾಗಾರಗಳು ನೂರಾರು ಶವಗಳಿಂದ ತುಂಬಿದ್ದವು. ಸ್ಮಶಾನಗಳ ಮುಂದೆ ಅಂತ್ಯಕ್ರಿಯೆ ಮಾಡಲು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಇತ್ತು. ಇತಿಹಾಸ ಕಂಡ ಅತ್ಯಂತ ಕೆಟ್ಟ ದಿನಗಳವು. ಕರೋನಾ ಸಾಂಕ್ರಾಮಿಕವು ಆರೋಗ್ಯದ ಮೇಲೆ ತೀವ್ರ ನಕಾರಾತ್ಮಕ ಪರಿಣಾಮಗಳನ್ನು ಬೀರಿತು ಮತ್ತು ಕೋವಿಡ್ -19 ಲಸಿಕೆ ಲಭ್ಯವಾದ ನಂತರ, ವೈರಸ್ ಹರಡುವಿಕೆಯು ಕ್ರಮೇಣ ಕಡಿಮೆಯಾಯಿತು. ಪ್ರಸ್ತುತ ಕೊರೊನಾ ಪ್ರಕರಣಗಳು ದಾಖಲಾಗುತ್ತಿಲ್ಲ, ಆದರೆ ಇತ್ತೀಚೆಗೆ ಭಾರತದಲ್ಲಿ ಕೆಲವು ಹಠಾತ್ ಸಾವುಗಳು ಮತ್ತೊಮ್ಮೆ ಆತಂಕಕ್ಕೆ ಕಾರಣವಾಗಿವೆ.

ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಯುವಜನರು ದೊಡ್ಡ ಪ್ರಮಾಣದಲ್ಲಿ ಸಾವನ್ನಪ್ಪುತ್ತಿರುವುದು ತಜ್ಞರನ್ನು ಆತಂಕಕ್ಕೆ ದೂಡಿದೆ. ಆರೋಗ್ಯವಾಗಿದ್ದ ಮನುಷ್ಯ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಘಟನೆಗಳು ವೈರಲ್ ಆಗಿವೆ. ಯುವಕರು ಹೃದಯಾಘಾತದಿಂದ ಸಾಯುವ ವಿಡಿಯೋಗಳು ಕೂಡ ಟ್ರೆಂಡ್ ಆಗಿವೆ. ಏತನ್ಮಧ್ಯೆ, ಕೆಲವರು ಈ ಹಠಾತ್ ಸಾವುಗಳು ಕೋವಿಡ್ 19 ವ್ಯಾಕ್ಸಿನೇಷನ್ ಕಾರಣ ಎಂದು ಹರಡಲು ಪ್ರಾರಂಭಿಸಿದ್ದಾರೆ.

ಈ ಸುದ್ದಿಯಲ್ಲಿ ಎಷ್ಟು ಸತ್ಯವಿದೆ ಎಂಬ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧ್ಯಯನ ನಡೆಸಿದೆ. ಈ ಅಧ್ಯಯನದಲ್ಲಿ, ಯುವಕರಲ್ಲಿ ಹಠಾತ್ ಸಾವು ಮತ್ತು ಕೋವಿಡ್ 19 ವ್ಯಾಕ್ಸಿನೇಷನ್ ನಡುವೆ ಯಾವುದೇ ಸಂಬಂಧವಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ICMR ಪ್ರಕಾರ, ದೇಶಾದ್ಯಂತ 47 ತೃತೀಯ ಹಂತದ ಆಸ್ಪತ್ರೆಗಳನ್ನು ಪರಿಗಣಿಸಿ ಅಕ್ಟೋಬರ್ 1, 2021 ರಿಂದ ಮಾರ್ಚ್ 31, 2023 ರವರೆಗೆ ಅಧ್ಯಯನವನ್ನು ನಡೆಸಲಾಗಿದೆ ಎಂದು ICMR ಹೇಳಿದೆ.
18-45 ವಯಸ್ಸಿನವರ ಮೇಲೆ ಅಧ್ಯಯನ ನಡೆಸಲಾಗಿದೆ ಎಂದು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ಕೋವಿಡ್ ಲಸಿಕೆಯನ್ನು ಪಡೆದವರಲ್ಲಿ ಯಾವುದೇ ಸಹ-ಅಸ್ವಸ್ಥತೆಗಳು ಅಥವಾ ಹಠಾತ್ ಸಾವು ಕಂಡುಬಂದಿಲ್ಲ ಮತ್ತು ಅವರೆಲ್ಲರೂ ಆರೋಗ್ಯವಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. 729 ಕೋವಿಡ್ ಪ್ರಕರಣಗಳು ಮತ್ತು 2,916 ಇತರೆ ಪ್ರಕರಣಗಳನ್ನು ಪರಿಶೀಲನೆಯು ಲಸಿಕೆಯನ್ನು ಪಡೆದವರಲ್ಲಿ ಹಠಾತ್ ಸಾವಿನ ಅಪಾಯ ಕಡಿಮೆಯಾಗಿದೆ. ಎರಡು ಡೋಸ್ ಲಸಿಕೆಯನ್ನು ಪಡೆದವರಲ್ಲಿ ಈ ಅಪಾಯವು ಇನ್ನೂ ಕಡಿಮೆಯಾಗಿದೆ ಎಂದು ಅವರು ವಿವರಿಸಿದರು.

ಹಲವು ಕಾರಣಗಳಿಂದ ದೇಶದಲ್ಲಿ ಹಠಾತ್ ಸಾವುಗಳು ಸಂಭವಿಸುತ್ತವೆ ಎಂದು ಐಸಿಎಂಆರ್ ಹೇಳಿದೆ. ಕೋವಿಡ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗಿರುವುದು, ಕುಟುಂಬದಲ್ಲಿ ಹಠಾತ್ ಸಾವುಗಳು, ಸಾವಿಗೆ 48 ಗಂಟೆಗಳ ಮೊದಲು ಮದ್ಯಪಾನ ಮಾಡುವುದು, ಸಾವಿಗೆ 48 ಗಂಟೆಗಳ ಮೊದಲು ತೀವ್ರವಾದ ದೈಹಿಕ ಪರಿಶ್ರಮ ಎಂದು ಹೇಳಲಾಗಿದೆ. ಹಠಾತ್ ಸಾವುಗಳು ಸಾಮಾನ್ಯವಾಗಿ ವೈಯಕ್ತಿಕ ಜೀವನಶೈಲಿ ಮತ್ತು ಅನಿರೀಕ್ಷಿತ ಘಟನೆಗಳಿಂದ ಉಂಟಾಗುತ್ತವೆ ಎಂದು ವರದಿಯಲ್ಲಿ ತಿಳಿಸಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment