ಸಾಕ್ಷ್ಯ ಹೇಳಲು ಗೈರಾದ ಹಾಸನ ತಹಶಿಲ್ದಾರ್ ಬಂಧನಕ್ಕೆ ಕೋರ್ಟ್ ಆದೇಶ..!

suddionenews
1 Min Read

ಹಾಸನ : ತಹಶಿಲ್ದಾರ್ ಬಂಧನಕ್ಕೆ ಸಿವಿಲ್ ಕೋರ್ಟ್ ಆದೇಶ ನೀಡಿದೆ. ಈಗಾಗಲೇ ತಹಶಿಲ್ದಾರ್ ಬಂಧನಕ್ಕೆ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಕೋರ್ಟ್ ನೀಡಿರುವ ಆದೇಶದಂತೆ ಇಂದು ತಹಶಿಲ್ದಾರ್ ಶ್ವೇತಾ ಅರೆಸ್ಟ್ ಆಗುವ ಸಾಧ್ಯತೆ ಇದೆ.

ತಹಶಿಲ್ದಾರ್ ಶ್ವೇತಾ ಅವರು ಸಾಕ್ಷ್ಯಾ ಹೇಳುವ ವಿಚಾರದಲ್ಲಿ ಗೈರಾದ ಕಾರಣ ಬಂಧನದ ಆದೇಶವನ್ನು ಹೊರಡಿಸಲಾಗಿದೆ. ಇದರ ಜೊತೆಗೆ ಸಮನ್ಸ್ ಕೂಡ ಪಡೆಯದ ಹಿನ್ನೆಲೆ ಸಿವಿಲ್ ಕೋರ್ಟ್ ಬಂಧನಕ್ಕೆ ಆದೇಶ ಹೊರಡಿಸಿದೆ. ಬಂಧಿಸಿದ ಬಳಿಕ ಕೋರ್ಟ್ ಮುಂದೆ ಹಾಜರುಪಡಿಸಲು ಸೂಚನೆ ನೀಡಲಾಗಿದೆ.

ಇನ್ನು ಕೋರ್ಟ್ ಆದೇಶದ ಮೇರೆಗೆ ಈಗಾಗಲೇ ವಕೀಲರು ತಹಶಿಲ್ದಾರ್ ಕಚೇರಿಗೆ ಹೋಗಿದ್ದರು. ಆದರೆ ತಹಶಿಲ್ದಾರ್ ಕಚೇರಿಯಲ್ಲಿ ಇರಲಿಲ್ಲ. ಕೋರ್ಟ್ ಆದೇಶ ತಿಳಿದಿದ್ದರು, ಕಚೇರಿಯಲ್ಲಿಯಿರದೆ ಇದ್ದ ಕಾರಣ, ವಕೀಲರು ಗರಂ ಆಗಿದ್ದಾರೆ. ಕಚೇರಿಯಲ್ಲಿದ್ದವರನ್ನು ತರಾಟೆಗೆ ತೆಗೆದುಕೊಂಡು ಬಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *