ಕೋರ್ಟ್ ಆದೇಶವಿದ್ದರು ಶಿಕ್ಷಕರು ಅಲ್ಲಿಯೇ ಕೆಲಸ ಮಾಡುತ್ತಿದ್ದಾರೆ : ಆಯನೂರು ಮಂಜುನಾಥ್ ಆಕ್ಷೇಪ

suddionenews
1 Min Read

ಬೆಂಗಳೂರು: ಪರಿಷತ್ ನಲ್ಲಿ ಶಿಕ್ಷಕರ ವಿಚಾರ ಇಂದು ಸದ್ದು ಮಾಡಿದೆ. ಬಿಜೆಪಿ ನಾಯಕ ಶಿಕ್ಷಕರ ಬಗ್ಗೆ ಧ್ವನಿ ಎತ್ತಿದ್ದಾರೆ. ಬೇರೆ ಬೇರೆ ಅಭಿವೃದ್ಧಿಯ ಮೇಲೆ ಶಿಕ್ಷಕರು ಕೆಲಸ‌ಮಾಡುತ್ತಿದ್ದಾರೆಂದು ಗರಂ ಆಗಿದ್ದಾರೆ.

ಪರಿಷತ್ ನಲ್ಲಿ ಜಿ ಸಂಬಂಧ ಮಾತನಾಡಿದ ಅವರು, ಸರ್ಕಾರಿ ಶಾಲೆಯ ಶಿಕ್ಷಕರು ನಿಯೋಜನೆ ಮೇಲೆ ಕೆಲಸ ಮಾಡುತ್ತಿದ್ದಾರೆ. ಅದು ಬೇರೆ ಬೇರೆ ಅಭಿವೃದ್ಧಿಯ ಮೇಲೆ ಕೆಲಸ ಮಾಡುತ್ತಿದ್ದಾರೆ. ಕೋರ್ಟ್ ಆದೇಶವಿದ್ದರೂ ಅಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ನವೆಂಬರ್ ನಲ್ಲಿ ಸುತ್ತೋಲೆ ಹೊರಡಿಸಲಾಗಿದೆ. ಆದ್ರೂ ಯಾಕೆ ಇನ್ನೂ ಅವರನ್ನ ವಾಪಾಸ್ ಕರೆಸಿಲ್ಲ. ವಾಪಾಸ್ ಬಾರದ ಶಿಕ್ಷಕರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಆಯನೂರು ಮಂಜುನಾಥ್ ಪ್ರಸ್ತಾಪ ಮಾಡಿದ್ದಾರೆ.

ಈ ಪ್ರಶ್ನೆಗೆ ಶಿಕ್ಷಣ ಸಚಿವ ನಾಗೇಶ್ ಉತ್ತರ ನೀಡಿದ್ದು, ನಿಯೋಜನೆ ಮೇಲೆ ಬೇರೆ ಬೇರೆ ಇಲಾಖೆಯಲ್ಲಿ ಕೆಲಸ‌ ಮಾಡುತ್ತಿದ್ದಾರೆ. ಹಲವರನ್ನು ವಾಪಾಸ್ ಕರೆಸುವ ಕೆಲಸ ಮಾಡಲಾಗಿದೆ. ಉಳಿದವರನ್ನು ಶೀಘ್ರವೇ ವಾಪಾಸ್ ಕರೆಸುವ ಕೆಲಸವಾಗಲಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *